ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ-ಯಾದವ್
ಪುರ್ಲೆ ಶಾಲಾ ವಾರ್ಷಿಕೋತ್ಸವ ಸಮಾರಂಭ
ಯಾದಗಿರಿ, ಶಹಾಪುರಃ ಇಂದಿನ ಸರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಪರಿಣಾಮಕಾರಿ ಶಿಕ್ಷಣದ ಅಗತ್ಯವಿದೆ. ಆ ನಿಟ್ಟಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶ್ರಮಿಸಬೇಕೆಂದು ಕರ್ನಾಟಕ ರಾಜ್ಯ ಅಪೇಕ್ಸ್ ಬ್ಯಾಂಕ್ ನಿರ್ದೇಶಕ ವಿಠ್ಠಲ್ ವಿ.ಯಾದವ ಹೇಳಿದರು.
ಪಟ್ಟಣದ ಲಕ್ಷ್ಮೀನಗರದ ಪುರ್ಲೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ 6 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಸಾಧಿಸುವ ಛಲವಿರಬೇಕು. ಅದನ್ನು ಬೋಧಕರು ವಿದ್ಯಾರ್ಥಿಗಳಿಗೆ ಮನನ ಮಾಡಬೇಕು. ಶಿಕ್ಷಣ ನಮ್ಮ ಜೀವನದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಹೀಗಾಗಿ ಶೈಕ್ಷಣಿಕ ಅಭ್ಯಾಸವನ್ನು ಮಕ್ಕಳು ಎಷ್ಟರ ಮಟ್ಟಿಗೆ ಪಡೆಯುತ್ತಾರೆ ಎಂಬುದರ ಮೇಲೆ ಅವರ ಭವಿಷ್ಯ ಅಡಗಿದೆ.
ಕೇವಲ ನೌಕರಿಗಾಗಿ ಶಿಕ್ಷಣ ಪಡೆಯುವದಿಲ್ಲ. ವಿದ್ಯಾವಂತ ವಿನ್ರಮತೆಯಿಂದ ಬದುಕುವ ಕಲೆಯನ್ನು ವಿದ್ಯೆ ಕಲಿಸಲಿದೆ. ಸಾತ್ವಿಕ ಸದ್ಭಾವನೆ ಉತ್ತಮ ಸಂಸ್ಕಾರವನ್ನು ಪಾಲಕರು ಮಕ್ಕಳಿಗೆ ನೀಡಿದ್ದಲ್ಲಿ ಮುಂದಿನ ಅವರ ಭವಿಷ್ಯ ತಾವೇ ರೂಢಿಸಿಕೊಳ್ಳಲಿದ್ದಾರೆ ಎಂದರು.
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ವಿಠ್ಠಲ್ ಮುದ್ನೂರ ಮಾತನಾಡಿ, ಹೈ.ಕ.ಭಾಗವು ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದಿದೆ. ಶಿಕ್ಷಕರಿಗೆ ಮಾತ್ರ ಮಕ್ಕಳ ಭವಿಷ್ಯ ರೂಪಿಸುವ ಜವಬ್ದಾರಿ ಇರುವದಿಲ್ಲ ಮಕ್ಕಳನ್ನು ಹೆತ್ತವರಿಗೆ ಸಮನಾದ ಜವಬ್ದಾರಿ ಇರಲಿದೆ.
ಶಾಲೆಗೆ ಕಳುಹಿಸಿದ ತಕ್ಷಣ ತಮ್ಮ ಮಗು ಶೈಕ್ಷಣಿಕವಾಗಿ ಪ್ರಗತಿ ಹೊಂದಲಿದೆ ಎಂದು ಬೇಜವಬ್ದಾರಿ ವರ್ತನೆ ಸರಿಯಲ್ಲ. ಶಿಕ್ಷಕರ ಹತ್ತಿರ ಮಗುವಿ ಪರಗತಿ ಕುರಿತು ಚರ್ಚಿಸಿ ತಾವು ಅದಕ್ಕೆ ಪೂರಕವಾದ ವಾತಾವರಣ ಕಲ್ಪಿಸುವ ಅಗತ್ಯವಿದೆ ಎಂದರು.
ರಾಜ್ಯ ಪಿಯು ಉಪನ್ಯಾಸಕರ ಸಂಘದ ರಾಜ್ಯಧ್ಯಕ್ಷ ತಿಮ್ಮಯ್ಯ ಪುರ್ಲೆ ಅಧ್ಯಕ್ಷತೆವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಪೂಜಾರಿ, ಸಿ.ಆರ್.ಪಿ. ಜಗದೀಶ ಗೋಟ್ಲಾ, ಆಂಧ್ರ ಬ್ಯಾಂಕ್ ವ್ಯವಸ್ಥಾಪಕ ರಮೇಶ ಬಾಬು, ಡಾ.ಮಂಜುನಾಥ ಯಾದವ, ಕೃಷ್ಣಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಾಳಪ್ಪ ಯಾದವ ಸೇರಿದಂತೆ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಪ್ರದೀಪ ಪುರ್ಲೆ ಪ್ರಾಸ್ತವಿಕವಾಗಿ ಮಾತನಾಡಿದರು. ಶಾಲಾ ಮುಖ್ಯ ಗುರು ಅನೀತಾ ಪುರ್ಲೆ ವಾರ್ಷಿಕ ವರದಿ ವಾಚನ ಮಾಡಿದರು. ಶಿಕ್ಷಕಿ ಶೃತಿ ಚಿಲ್ಲಾಳ ಪ್ರಾರ್ಥಿಸಿದರು. ದೇವಪ್ಪ ಪುರ್ಲೆ ಸ್ವಾಗತಿಸಿದರು. ಜಗದೀಶ ತುಮಕೂರ ನಿರೂಪಿಸಿದರು. ಶಬಾನಾ ಸಗರ ವಂದಿಸಿದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಚಿಣ್ಣರು ವಿವಿಧ ವೇಷಭೂಷಣ ಧರಿಸಿ ಗಮನ ಸೆಳೆದರು.