ಪ್ರಮುಖ ಸುದ್ದಿ
ಬಿಎಸ್ವೈ ದೇವರಿದ್ದಂತೆ ರಮೇಶ ಜಾರಕಿಹೊಳೆ ಹೇಳಿಕೆ
ಮುಸ್ಲಿಂರನ್ನು ಬಿಜೆಪಿಗೆ ಕರೆ ತರುವೆ-ಜಾರಕಿಹೊಳೆ
ಬೆಳಗಾವಿಃ ಮುಸ್ಲಿಂರನ್ನು ಬಿಜೆಪಿಗೆ ಕರೆತರುವ ಮೂಲಕ ಗಂಡಸ್ತನ ತೋರಿಸುವೆ ಎಂದು ಈಚೆಗೆ ಬಿಜೆಪಿ ಸೇರಿದ ರಮೇಶ ಜಾರಕಿಹೊಳೆ ಹೇಳಿಕೆ ನೀಡುವ ಮೂಲಕ ವಿರೋಧ ಪಕ್ಷದವರಿಗೆ ಸವಾಲೆಸೆದಿದ್ದಾರೆ.
ಗೋಕಾಕನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೊಬ್ಬರು ಮುಸ್ಲಿಂ ಬಾಂಧವರ ಬಗ್ಗೆ ಮಾತಾಡಬೇಡಿ ಎಂದು ಕಾರ್ಯಕರ್ತರು, ಬೆಂಬಲಿಗರಿಗೆ ಮನವಿ ಮಾಡಿದರು. ಮತ್ತು ಬೆಳಗಾವಿ ಸೇರಿದಂತೆ ವಿಜಯಪುರ ಇತರೆ ಜಿಲ್ಲೆಗಳಲ್ಲಿ ಮುಸ್ಲಿಂ ಬಾಂಧವರನ್ನು ಪಕ್ಷಕ್ಕೆ ಕರೆ ತರುವೆ. ಇನ್ನೂ ಬಿಎಸ್ವೈ ದೇವರಂಥ ಮನುಷ್ಯ. ವಿರೋಧಿಗಳಿಗೆ ನಾನು ಎಂದಿಗೂ ಬೈಯ್ಯುವದಿಲ್ಲ ಎಂದರು.