ವಿನಯ ವಿಶೇಷ

ನಿಷ್ಕಲ್ಮಶ ಭಕ್ತಿ, ಪ್ರಾರ್ಥನೆ, ಸ್ವಚ್ಛತೆಯೇ ಉತ್ತಮ ಫಲಕ್ಕೆ ರಹದಾರಿ & ರಾಶಿಫಲ ನೋಡಿ

ನಿಷ್ಕಲ್ಮಶವಾದ ಭಕ್ತಿ, ಪ್ರಾರ್ಥನೆ ಮತ್ತು ಸ್ವಚ್ಛತೆ ಎಲ್ಲಿ ಕಾಣಬಹುದು ಅಲ್ಲಿ ಉತ್ತಮವಾದ ಫಲಗಳನ್ನು ನಿರೀಕ್ಷಿಸಬಹುದು. ಕೆಟ್ಟದ್ದು ತೊಡೆದುಹಾಕಲು ಜಗತ್ತಿನಲ್ಲಿ ಒಳ್ಳೆಯತನದ ಸ್ವಚ್ಛತೆ ಅವಶ್ಯಕವಿದೆ. ಆರೋಗ್ಯಕರ ಹವ್ಯಾಸಗಳು ನಮ್ಮ ಒಳಿತಿಗಾಗಿ ಹಾಗೂ ಮನುಕುಲದ ಉದ್ಧಾರಕ್ಕಾಗಿ ಎಂಬುದನ್ನು ನೆನಪಿಡಬೇಕು.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಕಾರ್ಯಗಳಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳಿ. ಬಂಡವಾಳದ ಅಗತ್ಯತೆ ಇಂದ ಸಂಕಷ್ಟ ಹೆಚ್ಚಾಗಬಹುದು. ಆತ್ಮೀಯರಲ್ಲಿ ಮನಸ್ತಾಪ ಹೆಚ್ಚಾಗುತ್ತದೆ. ಮಾಡುವ ಕೆಲಸದಲ್ಲಿ ವಿಶ್ವಾಸ ಮತ್ತು ಬದ್ಧತೆ ಇರಲಿ. ಕುಟುಂಬಸ್ಥರ ಬೆಂಬಲ ನಿಮಗೆ ಯಶಸ್ಸಿಗೆ ಸಹಕಾರಿಯಾಗಲಿದೆ. ಮಾನಸಿಕ ಗೊಂದಲಗಳನ್ನು ನಿವಾರಿಸಿಕೊಳ್ಳಲು ಪ್ರಯತ್ನಪಡಿ. ಪ್ರೇಮಿಗಳಲ್ಲಿ ಭಿನ್ನಾಭಿಪ್ರಾಯ ಬರಲಿದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ವಿಪರೀತ ಖರ್ಚು ಗಳಿಂದ ಅಥವಾ ಸಂಕಷ್ಟದ ಜೀವನದಿಂದ ವೈಯಕ್ತಿಕವಾದ ಜಮೀನು ಅಥವಾ ಮನೆಯನ್ನು ಮಾರುವ ವಿಷಯದ ಆಲೋಚನೆ ಬರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಮಾತಿನಲ್ಲಿ ಆದಷ್ಟು ಜಾಗ್ರತೆ ಇರಲಿ. ಇಂದು ಕೆಲವರನ್ನು ಆದರ್ಶವಾಗಿ ನಿಮ್ಮ ಮನದಲ್ಲಿ ಸ್ವೀಕಾರ ಮಾಡುವಿರಿ. ಬರುವ ಯೋಜನೆಗಾಗಿ ಆರ್ಥಿಕ ಹಾನಿ ಮಾಡಿಕೊಳ್ಳುವ ಸಾಧ್ಯತೆ ಕಂಡುಬರುತ್ತದೆ. ಚಂಚಲ ಮನಸ್ಸನ್ನು ತೆಗೆದುಹಾಕಿ. ಹೊಸ ಕೆಲಸದ ವಿಷಯದಲ್ಲಿ ಉತ್ತಮ ಮಟ್ಟದ ಸಾಧನೆಯಾಗಲಿದೆ. ಬಳಗದಿಂದ ಸಹಾಯ ದೊರೆಯುವ ನಿರೀಕ್ಷೆ ಕಂಡುಬರುತ್ತದೆ. ಮನೆ ಅಥವಾ ಕೆಲಸ ಬದಲಾಯಿಸುವ ಚಿಂತನೆ ನಡೆಸಲಿದ್ದೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಕಲಾತ್ಮಕ ಚಟುವಟಿಕೆಗಳಲ್ಲಿ ಆಸಕ್ತಿ ಮೂಡಲಿದೆ. ನಿಮ್ಮ ಪ್ರತಿಭೆಗೆ ಸೂಕ್ತ ವೇದಿಕೆ ದೊರೆಯುವ ಸಾಧ್ಯತೆ ಕಂಡು ಬರಲಿದೆ. ಅನುಮಾನಸ್ಪದ ವ್ಯವಹಾರಗಳನ್ನು ಆದಷ್ಟು ದೂರವಿಟ್ಟುಬಿಡಿ. ಮನೆಯ ಖರ್ಚುಗಳ ಪಟ್ಟಿ ದೊಡ್ಡದಾಗಿ ಬೆಳೆಯಲಿದೆ. ಗೃಹ ಖರೀದಿಯ ಬಯಕೆಗೆ ಮೂರ್ತ ಸ್ವರೂಪ ಪಡೆಯಲಿದೆ. ಸ್ನೇಹಜೀವಿ ಆದ ನೀವು ಈದಿನ ಸ್ನೇಹಿತರ ಕಷ್ಟಗಳಿಗೆ ಸಹಕಾರ ನೀಡಲಿದ್ದೀರಿ. ಆರ್ಥಿಕವಾಗಿ ಉತ್ತಮ ಮಟ್ಟದ ಸಾಧನೆಗಳನ್ನು ಕೈಗೊಳ್ಳುವಿರಿ. ಉದ್ಯೋಗದಲ್ಲಿ ಭರಪೂರ ಪ್ರಶಂಸೆ, ಪ್ರಶಸ್ತಿಗಳು ನಿಮ್ಮ ಪಾಲಾಗಲಿದೆ. ಆಧ್ಯಾತ್ಮದತ್ತ ಒಲವು ಮೂಡುವ ಸಾಧ್ಯತೆ ಕಾಣಬಹುದು. ಸಂಗಾತಿಯೊಡನೆ ವಿಹಾರಕ್ಕೆ ಹೋಗುವ ಅಲೋಚನೆ ಮಾಡುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಮನೋ ವ್ಯಾಧಿಗಳನ್ನು ಆದಷ್ಟು ತೆಗೆದುಹಾಕಿ. ಆರೋಗ್ಯಯುತವಾಗಿ ಕೆಲಸದಲ್ಲಿ ಪಾಲ್ಗೊಳ್ಳಿ. ಕಲ್ಪನಾಲೋಕದಲ್ಲಿ ಕಾಲಹರಣ ಮಾಡುವುದು ಬೇಡ. ವಾಸ್ತವದತ್ತ ಪ್ರಯಾಣ ಬೆಳೆಸಿ. ಹೂಡಿಕೆಗಳು ನಿಮಗೆ ಹೆಚ್ಚಿನ ಲಾಭ ತಂದುಕೊಡುತ್ತದೆ. ವೈಯಕ್ತಿಕ ಸಮಸ್ಯೆಗಳಿಂದ ನೀವು ತುಂಬಾ ಖಿನ್ನತೆಯಾಗುವ ಸಾಧ್ಯತೆ ಕಾಣಬಹುದು. ಪಾವತಿಗಳ ಬಗ್ಗೆ ಗಮನವಹಿಸುವುದು ಸೂಕ್ತ. ಕೆಲವರು ಸುಖಾಸುಮ್ಮನೆ ಇಲ್ಲಸಲ್ಲದ ವಿಚಾರಗಳನ್ನು ನಿಮ್ಮ ತಲೆಯಲ್ಲಿ ತುಂಬಬಹುದು ಅಂತಹವರನ್ನು ಆದಷ್ಟು ದೂರವಿಡುವುದು ಸೂಕ್ತ. ವಿಚಾರಗೋಷ್ಠಿಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕಾಣಬಹುದು. ಮಕ್ಕಳ ಬೆಳವಣಿಗೆಗೆ ವಿಶೇಷ ಚಟುವಟಿಕೆಗಳನ್ನು ನಡೆಸುತ್ತೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಮನಸ್ಸಿನಲ್ಲಿ ಹೆಚ್ಚಾಗಿ ವೈಯಕ್ತಿಕ ಸಮಸ್ಯೆಗಳನ್ನು ಅನುಭವಿಸುತ್ತಾ ಕೊರಗಬೇಡಿ, ಆತ್ಮೀಯರೊಡನೆ ಚರ್ಚಿಸಿ ಪರಿಹಾರ ಕಾಣಿರಿ. ಕೆಲಸದ ವಿಷಯದಲ್ಲಿ ನಿರಾಸಕ್ತಿ ಹೆಚ್ಚಾಗಬಹುದು ಆದಷ್ಟು ಕಲ್ಪನೆಯಿಂದ ವಾಸ್ತವದ ಪ್ರಯಾಣ ಮಾಡುವುದು ಸೂಕ್ತ. ತೆರಿಗೆ, ವಿಮೆ, ಭೂ ಸಂಬಂಧಿತ ಪಾವತಿಗಳಿಗೆ ಆದಷ್ಟು ಗಮನ ನೀಡಿ. ಋಣಾತ್ಮಕ ವ್ಯಕ್ತಿತ್ವವಿರುವ ಜನರ ಸಹವಾಸವನ್ನು ಬಿಟ್ಟುಬಿಡಿ. ಮಕ್ಕಳ ಉದ್ಯೋಗಕ್ಕಾಗಿ ಪರಿಶ್ರಮ ಪಡಲಿದ್ದೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಕೌಟುಂಬಿಕ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು ನೀವು ಕುಟುಂಬದ ಸದಸ್ಯರನ್ನು ಪ್ರೇಮದಿಂದ ಕಾಣುವುದು ಸೂಕ್ತ. ಅನಿರೀಕ್ಷಿತವಾಗಿ ಪ್ರಯಾಣ ಬೆಳೆಸಬೇಕಾದ ಸಂದರ್ಭ ಬರಲಿದೆ. ವೃತ್ತಿಜೀವನದಲ್ಲಿ ಒತ್ತಡ ಭರಿತವಾದ ಸನ್ನಿವೇಶವನ್ನು ಎದುರಿಸಲಿದ್ದೀರಿ. ಲೆಕ್ಕಪತ್ರಗಳನ್ನು ಆದಷ್ಟು ಸೂಕ್ತವಾಗಿ ಅಧ್ಯಯನ ನಡೆಸಿ. ನಿಮ್ಮ ಕೆಲಸದ ಪಟುತ್ವ ತುಂಬಾ ಉತ್ತಮವಾಗಿ ಮೂಡಿ ಬರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಮಧ್ಯವರ್ತಿಗಳು ನಿಮ್ಮ ಯೋಜನೆಗಳಿಗೆ ಸಮಸ್ಯೆ ನೀಡಬಹುದು ಎಚ್ಚರವಿರಲಿ. ರಾಜಿ ಸಂಧಾನ ಕಾರ್ಯಗಳಿಂದ ನಿಮ್ಮ ಬಗ್ಗೆ ಕೆಲವರಲ್ಲಿ ಅಪಸ್ವರ ಮೂಡಬಹುದಾದ ಸಾಧ್ಯತೆ ಇದೆ ಆದಷ್ಟು ಇಂದು ಈ ವಿಚಾರಗಳನ್ನು ತಡೆಗಟ್ಟಿ. ಹೊರಗಿನ ವಿಷಯಗಳನ್ನು ಮನೆತನಕ ತರುವುದು ಬೇಡ. ಶ್ರಮದಾಯಕ ವಿಚಾರಗಳಿಂದ ಮಹತ್ವದ ಕೆಲಸವನ್ನು ಮಾಡಲಿದ್ದೀರಿ. ಆರ್ಥಿಕ ಸದೃಡ ಗೊಳಿಸುವ ಜವಾಬ್ದಾರಿ ತೆಗೆದುಕೊಳ್ಳಿ. ದೈವ ಮಂದಿರಗಳಿಗೆ ಭೇಟಿ ನೀಡುವ ಸಾಧ್ಯತೆ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ನಿಮ್ಮ ಬಹುದಿನದ ಪ್ರಯತ್ನಗಳು ಶುಭಕರವಾಗಿ ಸಕಾರಗೊಳ್ಳುವ ಸಮಯವನ್ನು ಈ ದಿನ ವೀಕ್ಷಿಸಲಿದ್ದೀರಿ. ಉದ್ಯೋಗದಲ್ಲಿನ ಕೆಲವು ಪ್ರಮಾದಗಳನ್ನು ಸರಿಪಡಿಸಿಕೊಳ್ಳುವ ಮನಸ್ಥಿತಿಯಲ್ಲಿ ಕಾಣಬಹುದಾಗಿದೆ. ವ್ಯಾಜ್ಯಗಳಲ್ಲಿ ನಿರೀಕ್ಷಿತ ಗೆಲುವು ನಿಮ್ಮಂತೆಯೇ ಕಂಡುಬರುತ್ತದೆ. ಹಿರಿಯರು ನಿಮ್ಮ ವಿಶಾಲ ಮನಸ್ಥಿತಿಯನ್ನು ಕಂಡು ಸಂಪೂರ್ಣ ಜವಾಬ್ದಾರಿಯನ್ನು ನೀಡಲಿದ್ದಾರೆ. ಮಧ್ಯವರ್ತಿ ಕೆಲಸಗಾರರಿಗೆ ಉತ್ತಮವಾದ ದಿನವಾಗಿದ್ದು ಧನ ಲಾಭದ ನಿರೀಕ್ಷೆ ಇದೆ. ಸಂಗೀತ ಕಲೆಗಳಲ್ಲಿ ವಿಶೇಷ ಆಸಕ್ತಿ ಮೂಡುವ ಸಾಧ್ಯತೆ ಕಾಣಬಹುದು. ರುಚಿಕರವಾದ ಸ್ವಾದಿಷ್ಟ ಭೋಜನ ವ್ಯವಸ್ಥೆ ಕಂಡುಬರಲಿದೆ. ಸಂಗಾತಿ ಮುಕ್ತವಾದ ಮಾತುಕತೆ, ಭವಿಷ್ಯದ ಏಳಿಗೆಗೆ ಚರ್ಚೆಗಳನ್ನು ನಡೆಸುವಿರಿ. ಈ ದಿನ ದಾಂಪತ್ಯ ಜೀವನ ಸುಂದರವಾಗಿ ಇರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಸಣ್ಣ ವಿಷಯಗಳನ್ನು ದೊಡ್ಡದಾಗಿ ರಾದ್ದಂತ ಮಾಡಿ ಸಮಸ್ಯೆ ಸೃಷ್ಟಿಸುವುದು ಒಳ್ಳೆಯದಲ್ಲ, ಆದಷ್ಟು ಕ್ಷಮಾ ಗುಣಗಳನ್ನು ಬೆಳೆಸಿಕೊಳ್ಳಿ. ಕುಟುಂಬ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುವುದು ಉತ್ತಮ. ಯೋಜನೆಗೆ ಬಂಡವಾಳದ ರೂಪವಾಗಿ ಸ್ನೇಹಿತರು ಸಹಕಾರ ನೀಡಲಿದ್ದಾರೆ. ಮೇಧಾವಿ ವ್ಯಕ್ತಿಗಳ ಸಹವಾಸದಿಂದ ಉನ್ನತ ಆಕಾಂಕ್ಷೆಗಳು ನಿಮ್ಮಲ್ಲಿ ಮೂಡುವಂತದ್ದನ್ನು ಕಾಣಬಹುದಾಗಿದೆ. ಸಹೋದರರೊಡನೆ ಶಾಂತಿ ಒಪ್ಪಂದಗಳು ನಡೆಯುವಂತಹ ಪ್ರಮೇಯಗಳು ಬರುವುದು ನಿಶ್ಚಿತ. ಚಿನ್ನಾಭರಣದ ಮೇಲೆ ಹೂಡಿಕೆ ಮಾಡುವ ಲಾಭ ಹೆಚ್ಚಾಗಬಹುದು. ಮಕ್ಕಳಿಗಾಗಿ ಹೊಸತನದ ವಿಷಯವನ್ನು ನೀವು ಕಲಿಸಿಕೊಡುವ ಸಾಧ್ಯತೆ ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಕೆಲಸದಲ್ಲಿ ಧೈರ್ಯದಿಂದ ಪಾಲ್ಗೊಳ್ಳಿ. ಸೋಲಿನ ಫಲಿತಾಂಶವನ್ನು ಪುನಃ ಜ್ಞಾಪಿಸಿಕೊಂಡು ಕೊರಗಬೇಡಿ. ನೀವು ಭಗವಂತನನ್ನು ನಂಬಿ ಮಾಡಿದ ಕಾರ್ಯಗಳು ಸಂಪೂರ್ಣ ಯಶಸ್ವಿ ನೀಡಲಿದೆ. ನಿಮ್ಮ ಸುತ್ತಲಿರುವ ಹೊಗಳು ಭಟ್ಟರನ್ನು ದೂರವಿಟ್ಟು ಸಾಗಿರಿ. ಕಮಿಷನ್ ಏಜೆಂಟ್ ಗಳಿಗೆ ಉತ್ತಮವಾದ ದಿನವಿದು. ಉದ್ಯೋಗದಲ್ಲಿ ಹೆಚ್ಚಿನ ಸ್ಥಾನ ಪಡೆಯುವ ಅವಕಾಶಗಳು ಸಿಗಲಿದೆ. ಸಹೋದ್ಯೋಗಿಗಳಿಂದ ಕಿರುಕುಳ ಅನುಭವಿಸುವ ಸಾಧ್ಯತೆ ಕಂಡುಬರುತ್ತದೆ. ಮಕ್ಕಳ ವಿದ್ಯೆಯಲ್ಲಿ ಪ್ರಗತಿ ನೋಡಬಹುದಾಗಿದೆ. ಪ್ರಪಂಚದಲ್ಲಿ ಆಗುವ ಪ್ರಚಲಿತ ಘಟನೆಗಳನ್ನು ಅಧ್ಯಯನ ಮಾಡಿ ನಿಮ್ಮ ಕೌಶಲ್ಯಗಳನ್ನು ಹೆಚ್ಚು ಮಾಡಿಕೊಳ್ಳಿ, ಇದು ನಿಮ್ಮ ಯೋಜನೆಗೆ ಸಹಕಾರ ನೀಡುವುದು ಖಂಡಿತ. ಮಡದಿಯೊಂದಿಗೆ ಉತ್ತಮವಾದ ಸಂಭಾಷಣೆಯಲ್ಲಿ ತೊಡಗುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಹೆಚ್ಚು ತಿರುಗಾಟದಿಂದ ದೈಹಿಕ ಕ್ಷಮತೆ ಕುಂದಬಹುದು ಆದಷ್ಟು ವಿಶ್ರಾಂತಿಗೆ ಪ್ರಯತ್ನಪಡಿ. ಹಣಕಾಸಿನ ವಿಷಯವಾಗಿ ವ್ಯವಹಾರಗಳು ಈ ದಿನ ವಿಳಂಬವಾಗುವ ಸಾಧ್ಯತೆ ಇದೆ. ವ್ಯಾಪಾರಸ್ಥರಿಗೆ ಅನುಕೂಲಕರ ಸ್ಥಿತಿ ನಿರ್ಮಾಣವಾಗುತ್ತದೆ. ಆಧ್ಯಾತ್ಮದತ್ತ ನಿಮ್ಮ ಮನಸ್ಸು ಮೂಡಲಿದೆ. ಭವಿಷ್ಯದ ಹಿತದೃಷ್ಟಿಯಿಂದ ಉನ್ನತವಾದ ಯೋಜನೆಯನ್ನು ಪ್ರಾರಂಭಿಸುವ ಸಾಧ್ಯತೆ ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಅಗೋಚರ ಎನಿಸುವ ಕೆಲವು ಪ್ರಕ್ರಿಯೆಗಳ ಅನುಭವ ಆಗಬಹುದಾಗಿದೆ. ನಿಮ್ಮ ಕುತೂಹಲ ಅಥವಾ ಜ್ಞಾನದ ಮಟ್ಟ ಹೆಚ್ಚಾಗುವ ಸಂದರ್ಭ ಬರಲಿದೆ. ಹಳೆಯ ವಸ್ತುಗಳಲ್ಲಿ ಹೆಚ್ಚಿನ ಬಯಕೆಗಳು ಮೂಡುತ್ತದೆ. ವ್ಯವಹಾರದಲ್ಲಿ ಸಾಲ ಕೊಡುವುದು ತಪ್ಪಾಗಬಹುದು. ಕುಟುಂಬದಲ್ಲಿ ಶಾಂತಿ ಸಮಾಧಾನವನ್ನು ಸ್ಥಾಪಿಸಲು ಪ್ರಯತ್ನಪಡಿ. ಗಾಳಿ ಮಾತುಗಳನ್ನು ನಂಬುವುದು ಮೊದಲು ಬಿಡಬೇಕಾದ ವಿಷಯವಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button