ಕಿಡ್ನಾಪ್ ಆಗಿದ್ದ ಮಗನ ಕೊಲೆ: ಸುದ್ದಿ ಕೇಳಿದ ತಾಯಿ ಸಾವು
ಕಲಬುರ್ಗಿಃ ಕಿಡ್ನಾಪ್ ಆಗಿದ್ದ ಮಗನ ಹತ್ಯೆ ಸುದ್ದಿ ಕೇಳಿದ ತಾಯಿಗೆ ಹೃದಯಾಘಾತ
ಕಲಬುರ್ಗಿಃ ಕಳೆದ ಅ.7 ರಂದು ಹಣಕ್ಕಾಗಿ ವ್ಯಕ್ತಿಯೋರ್ವನನ್ನು ದುಷ್ಕರ್ಮಿಗಳು ಕಿಡ್ನಾಪ್ ಮಾಡಿ, ಕುಟುಂಬಸ್ಥರಿಗೆ ಭಯ ಹುಟ್ಟಿಸಿ 6 ಲಕ್ಷ ಹಣವು ಪಡೆದು ನಂತರ ಆ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಕೊಲೆಗೈದು ನಗರದ ಸಯ್ಯದ್ ಚಿಂಚೋಳಿ-ನರೋಣ ಮಾರ್ಗ ಮಧ್ಯೆ ಎಸೆದು ಹೋದ ಘಟನೆ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ತಾಲೂಕಿನ ಸುಲ್ತಾನಪುರ ಗ್ರಾಮದ ನಿವಾಸಿ ಮೋನಪ್ಪ (42) ಎಂದು ಗುರುತಿಸಲಾಗಿದೆ. ಮೋನಪ್ಪ ಜೆಸ್ಕಾಂ ಗುತ್ತಿಗೆದಾರರನಾಗಿ ಕೆಲಸ ಮಾಡುತಿದ್ದ ಎನ್ನಲಾಗಿದೆ. ಕಿಡ್ನಾಪ್ ಮಾಡಿ ನಂತರ ಪಾಲಕರಿಂದ ಹಣವು ಪಡೆದುಕೊಂಡ ನಂತರವು ಹಂತಕರು ಈತನನ್ನು ಕೊಲೆಗೈದು ಶವ ಬಿಸಾಕಿ ಹೋಗಿರುವುದು ನಗರದ ನಾಗರಿಕರಲ್ಲಿ ಆತಂಕ ಮೂಡಿಸಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗ ಕೊಲೆಯಾದ ಸುದ್ದಿ ತಿಳಿದ ತಾಯಿ ಸಾವು
ಮಗ ಕೊಲೆಯಾದ ಸುದ್ದಿ ತಿಳಿದ ತಾಯಿ ಲಲಿತಾಬಾಯಿ(70) ಹೃದಯಘಾತದಿಂದ ಸಾವನ್ನಪ್ಪಿದ ದುರಂತವು ನಡೆದಿದೆ. ಕಳೆದ ಐದಾರು ದಿನಗಳಿಂದ ಮೋನಪ್ಪನನ್ನು ಕಿಡ್ನಾಪ್ ಮಾಡಿ ಹಣಕ್ಕಾಗಿ ಪೀಡಿಸುತ್ತಿದ್ದರು. ಪಾಲಕರಿಂದ 6 ಲಕ್ಷ ಹಣವು ಪಡೆದ ನಂತರ ಆತನನ್ನು ಕೊಲೆ ಮಾಡಿರುವುದು ಜಿಲ್ಲಾದ್ಯಂತ ದೊಡ್ಡ ಸುದ್ದಿಯಾಗಿದ್ದು, ಜನ ಭಯಭೀತಗೊಂಡಿದ್ದಾರೆ.
ಕಳೆದ ಐದು ದಿನಗಳಿಂದ ಮಗನಿಗಾಗಿ ಹಾತೊರೆದಿದ್ದ ತಾಯಿ ಇಂದು ಮಗ ಹೆಣವಾಗಿ ಬಿದ್ದಿದ್ದಾನೆ ಎಂಬ ಸುದ್ದಿ ತಾಯಿಯನ್ನು ಬಲಿ ತೆಗೆದುಕೊಂಡಿದ್ದಾನೆ. ಈ ಮೊದಲೇ ಮಗನ ಕಿಡ್ನಾಪ್ ಮಾಡಿದ್ದಾರೆಂಬ ಸುದ್ದಿಯಿಂದ ತಾಯಿ ಲಲಿತಾ ಜರ್ಜರಿತಗೊಂಡಿದ್ದಳು ಎನ್ನಲಾಗಿದೆ.
ಸಮಾಜ ನೈತಿಕ ಅದಃಪತನಗೊಂಡಿದೆ ಸರ್