ಪ್ರಮುಖ ಸುದ್ದಿ
ಮಿಂಟೋ ಆಸ್ಪತ್ರೆ ಪ್ರಕರಣಃ 15 ಕರವೇ ಕಾರ್ಯಕರ್ತರು ಶರಣು – ಅಶ್ವಿನಿಗೌಡ
ವಿವಾ ಡೆಸ್ಕ್ಃ ಮಿಂಟೋ ಆಸ್ಪತ್ರೆ ಯ ವೈದ್ಯರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರವೇಯ 15 ಜನ ಕಾರ್ಯಕರ್ತತು ಇಂದು ಠಾಣೆಗೆ ಶರಣಾಗಲಿದ್ದು, ವೈದ್ಯರು ರಾಜ್ಯದಾದ್ಯಂತ ಇಂದು ಹಮ್ಮಿಕೊಂಡ ಪ್ರತಿಭಟನೆ ಹಿಂಪಡೆಯಬೇಕು ಎಂದು ಕರವೇ ಮಹಿಳಾ ಘಟಕ ಅಧ್ಯಕ್ಷೆ ಅಶ್ವಿನಿಗೌಡ ಹೇಳಿಕೆ ನೀಡಿದ್ದಾರೆ.
ತಾನೂ ಸೇರಿದಂತೆ 15 ಕರವೇ ಕಾರ್ಯಕರ್ತರು ಪೊಲೀಸರಿಗೆ ಶರಣಾಗಲಿದ್ದು, ವೈದ್ಯರು ಕೈಗೊಂಡ ಮುಷ್ಕರ ಕೈಬಿಟ್ಟು, ಸಾರ್ವಜನಿಕ ರೋಗಿಗಳ ಚಿಕಿತ್ಸೆಗೆ ಮುಂದಾಗಬೇಕು ಎಂದು ಮನವಿ ಮಾಡಿದ, ಅವರು ರೋಗಿಗಳು ಚಿಕಿತ್ಸೆಗಾಗಿ ಪರದಾಡುವ ಸ್ಥಿತಿ ಬರಬಾರದೆಂಬ ಕಾರಣ ಶರಣಾಗುತ್ತಿದ್ದೇವೆ ಎಂದು ತಿಳಿಸಿದ್ದಾರೆ.