ದಾನ ಧರ್ಮ ಕಾರ್ಯ ವಂಶ ಸುಭಿಕ್ಷೆಯ ಕರ್ಮ ಸಾಧನ
ಜ್ಯೋತಿಷ್ಯರು ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ, ಮತ್ತು ನಿಗೂಢ ವಾಗಿರಲಿ ಪರಿಹಾರ ಮತ್ತು ಮಾರ್ಗದರ್ಶನ ಖಚಿತವಾಗಿ ಪಡೆಯಿರಿ.
9945098262
ಪೂರ್ವ ಜನ್ಮ ಕೃತಂ ಪಾಪಂ ವ್ಯಾಧಿರೂಪೇನ ಬಾದಯೇತ್
ನಾವು ಮಾಡುವ ಪಾಪಕರ್ಮಗಳ ಫಲವು ಅದರ ಸ್ವರೂಪ ಮತ್ತು ಸನ್ನಿವೇಶಕ್ಕೆ ತಕ್ಕಹಾಗೆ ಸಮಸ್ಯೆ ಸೃಷ್ಟಿಯಾಗುತ್ತದೆ, ಇದನ್ನು ಋಣಬಾದೆ, ಗ್ರಹಚಾರ ಭಾದೆ, ಪೂರ್ವಾರ್ಜಿತ ಕರ್ಮ ಫಲ ಎಂಬಿತ್ಯಾದಿ ಹೆಸರಿನಿಂದ ಕರೆಯುವುದು ವಾಡಿಕೆ. ಇದನ್ನು ಇನ್ನೂ ಸುಲಭವಾಗಿ ಅರ್ಥೈಸಿಕೊಳ್ಳಬೇಕು ಎಂದರೆ ಮಾಡಿದ್ದುಣ್ಣೋ ಮಾರಾಯ ಎಂಬ ಮಾತಿನಂತೆ.
ಮನುಷ್ಯ ತನ್ನ ದೇಹತ್ಯಾಗ ನಂತರ ಮಾಡುವ ಶ್ರಾದ್ಧ ವಿಧಿವಿಧಾನಗಳು ಒಂದು ಬಗೆಯ ದೋಷ ಪರಿಹಾರ ಕಾರ್ಯಗಳು ಹಾಗೂ ಮೋಕ್ಷ ದಯಪಾಲಿಸುವಂತಹ ಕ್ರಿಯಾ ಚಟುವಟಿಕೆಗಳು ಇರಬಹುದು ಆದರೆ ತಾನು ಇದ್ದಾಗಲೇ ಮಾಡುವ ದಾನ ಧರ್ಮ ಕಾರ್ಯಗಳು ಭಗವಂತನಿಂದ ಉತ್ತಮ ಆಶೀರ್ವಾದ ದಯಪಾಲಿಸುತ್ತದೆ. ಇದು ವ್ಯಕ್ತಿ ತನ್ನ ವಂಶವನ್ನು ಸುಭಿಕ್ಷೆಯಾಗಿ ಇಡುವ ಕರ್ಮ ಸಾಧನೆ ಕೂಡ ಹೌದು.
ನಾವು ಮಾಡಿದ ಪಾಪ ಕಾರ್ಯಗಳ ದಾರಿದ್ರ್ಯ ವು ನಮಗಲ್ಲದೆ ನಮ್ಮ ಮುಂದಿನ ತಲೆಮಾರಿನವರಿಗು ವರ್ಗವಾಗುತ್ತದೆ. ಉದಾಹರಣೆಗೆ: ನಾವು ಕೂಡಿಟ್ಟ ಹಣ, ಮಾಡಿದ ಆಸ್ತಿ, ಸಂಪತ್ತು ಎಲ್ಲಾ ನಮ್ಮ ಮಕ್ಕಳಿಗೆ ಹೋಗಲಿದೆಯೋ ಹಾಗೇ ನಾವು ಮಾಡಿದ ಸಾಲ ಸೂಲವು ಅವರ ತಲಗೆ ಕಟ್ಟಲಾಗುತ್ತದೆಯೋ ಹಾಗೆಯೇ ನಾವುಗಳು ಮಾಡಿದ ಪಾಪ ಕರ್ಮಗಳು ಸಹ ಮಕ್ಕಳಿಗೆ ಮುಂದಿನ ಪೀಳಿಗೆಗೆ ವರ್ಗಾವಣೆಯಾಗುತ್ತಾ ಸಾಗುತ್ತದೆ.
ಕಾರಣ ಬದುಕಿದ್ದಾಗ ಮಾಡುವ ಪುಣ್ಯ ಫಲಗಳು ಶ್ರೀರಕ್ಷೆಯಾಗುತ್ತದೆ, ದಾನ ಕಾರ್ಯಗಳಲ್ಲಿ ಅಷ್ಟ ವಿಧವಾಗಿ ಕಂಡುಕೊಳ್ಳಬಹುದು. ಅವುಗಳೆಂದರೆ ತಿಲದಾನ, ಲೋಹ ದಾನ, ಲವಣ ದಾನ, ವಸ್ತ್ರದಾನ, ಧಾನ್ಯದಾನ, ಗೋ ಜನ್ಯ ವಸ್ತುಗಳ ದಾನ(ಗೋದಾನ), ಭೂದಾನ, ಕನ್ಯಾದಾನ (ಮದುವೆಯಲ್ಲಿ ಮಾಡುವ ಪುಣ್ಯದ ಕಾರ್ಯ). ಇವುಗಳನ್ನು ಅನುಸರಿಸಿ ಆದಷ್ಟು ಅಶಕ್ತರಿಗೆ ನೆರವಾಗಿ. ಹಾಗಂತ ಅಪಾತ್ರರಿಗೆ ದಾನ ಮಾಡಿ ಸಿಲುಕಬೇಡಿ. ಭಕ್ತಿಯಿಂದ, ವಿವೇಚನೆಯಿಂದ, ಉತ್ತಮ ನಡವಳಿಕೆಯಿಂದ, ಪರೋಪಕಾರಿಯಿಂದ ಜೀವನ ಸಾಗಿಸಿ. ಇದ್ದಿದ್ದರಲ್ಲಿ ತೃಪ್ತಿಪಡಿ, ಆನಂದದಿಂದ ಜೀವಿಸಿ.
ಜ್ಯೋತಿಷ್ಯರು ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ನಿಮ್ಮ ಸಮಸ್ಯೆ ಏನೇ ಇರಲಿ ಜ್ಯೋತಿಷ್ಯ ಮೂಲಕ ಪರಿಹಾರ ಮತ್ತು ಮಾರ್ಗದರ್ಶನ ಪಡೆಯಿರಿ.
9945098262