ಪ್ರಮುಖ ಸುದ್ದಿ
ಭಾಷೆ, ಧರ್ಮಧಾರಿತ ಸಮಾಜ ಒಡೆಯುವ ಕೆಲಸ ಡಿಕೆಶಿ ಆರೋಪ
ಕಲಬುರ್ಗಿಃ ಭಾಷೆ, ಧರ್ಮದ ಮೇಲೆ ರಾಜಕೀಯ ಮಾಡಲು ಹೊರಟ ಬಿಜೆಪಿ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಸಿಎಂ ಈ ಮಟ್ಟಕ್ಕೆ ಇಳಿಯುತ್ತಾರೆ ಅಂದ್ಕೊಂಡಿರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ತಿಳಿಸಿದರು.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ, ಅವರು ಸಿಎಂ ಯಡಿಯೂರಪ್ಪನವರು ನನಗೆ ತುಂಬಾ ತೊಂದರೆ ನೀಡಿ ಅವರು ಖುಷಿ ಪಡುತ್ತಿದ್ದಾರೆ. ನನ್ನ ಮಗಳ ನಿಶ್ಚಿತಾರ್ಥ ವೇಳೆ ಸಿಬಿಐ ನೋಟಿಸ್ ಕಳಹುಸಿದ್ದಾರೆ.
ಇದು ರಾಜಕೀಯ ದ್ವೇಷ. ನನ್ನ ಮೇಲೆಯೇ ಅವರಿಗೆ ದ್ವೇಷ ಜಾಸ್ತಿ ಇದೆ. ಹೀಗಾಗಿ ನನ್ನ ಮೇಲಷ್ಟೆ ಸಿಬಿಐ ಗೆ ದೂರು ನೀಡಿದ್ದಾರೆ. ಇದಕ್ಕೆಲ್ಲ ನಾನೇ ಉತ್ತರಿಸುವೆ ಎಂದರು.