ಶತಾಯುಷಿ ಸಂಗಮ್ಮ ದೇಶಮುಖ ಇನ್ನಿಲ್ಲ
ಶತಾಯುಷಿ ಸಂಗಮ್ಮ ಸಿದ್ಲಿಂಗಪ್ಪ ದೇಶಮುಖ ನಿಧನ
ಶಹಾಪುರಃ ಇಲ್ಲಿನ ವೀರಶೈವ ಸಮಾಜದ ಅಧ್ಯಕ್ಷ ಬಸವರಾಜೇಂದ್ರ ದೇಶಮುಖ ಅವರ ತಾಯಿಯಾದ ಶತಾಯುಷಿ ಸಂಗಮ್ಮ ಗಂಡ ಸಿದ್ಧಲಿಂಗಪ್ಪ ದೇಶಮುಖ ಬುಧವಾರ ರಾತ್ರಿ 9 ಗಂಟೆಗೆ ಸುಮಾರಿಗೆ ಇಹಲೋಕ ತ್ಯೇಜಿಸಿದರು ಎಂದು ತಿಳಿಸಲು ವಿಷಾಧಿಸುತ್ತೇವೆ.
ಸಂಗಮ್ಮ ದೇಶಮುಖ ಅವರು ನಗರ ಅತ್ಯಂತ ಹಿರಿಯ ಜೀವಿಗಳಲ್ಲಿ ಒಬ್ಬರಾಗಿದ್ದರು. ನಿತ್ಯ ಲಿಂಗಪೂಜೆ, ಶಿವಧ್ಯಾನದಲ್ಲಿ ಕಾಲ ಕಳೆಯುತ್ತಿದ್ದ ಅವರು, ಬುಧವಾರ ರಾತ್ರಿ ಶಿವಧ್ಯಾನ ಮಾಡುತ್ತಲೆ ಪ್ರಾಣ ಬಿಟ್ಟಿದ್ದಾರೆ.
ಅವರ ಬದುಕಿನುದ್ದಕ್ಕೂ ಬಂಧುಭಗಿನಿಯರಿಗೆ ಮತ್ತು ನೆರೆ ಹೊರೆಯವರಿಗೆ ಉತ್ತಮ ಮಾರ್ಗದರ್ಶಕರಾಗಿದ್ದರು.
ಮೊಮ್ಮಕಳ ಪಾಲಿಗೆ ಮುದ್ದಿನ ಅಜ್ಜಿಯಾಗಿದ್ದ ಅವರು,ಇಂದು ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ ಎಂದು ನಂಬಲಾಗುತ್ತಿಲ್ಲ ಎನ್ನುತ್ತಾರೆ ಮೊಮ್ಮಕ್ಕಳು.
100 ವರ್ಷ ದಾಟಿದ್ದರು ದೇಹಕ್ಕೆ ವಯಸ್ಸಾಗಿರಬಹುದು ಆದರೆ ಅವರ ವಿಚಾರಕ್ಕೆ ಮಾತಿಗೆ ಯಾವುದೇ ವಯಸ್ಸಾದಂತೆ ಕಾಣುತ್ತಿರಲಿಲ್ಲವೆಂದು ಸಮೀಪರ್ತಿಗಳ, ಸಂಬಂಧಿಕರ ಅಂಬೋಣ.
ಅಪಾರ ಬಂಧು ಬಳಗ ಹೊಂದಿದ್ದ ಅಜ್ಜಿ ಬೀದರ, ಹುಮನಬಾದ್, ಕಲಬುರಗಿ ಮತ್ತು ಯಾದಗಿರಿ ಸೇರಿದಂತೆ ಕೊಪ್ಪಳ ವಿಜಯಪುರ ಜಿಲ್ಲಾದ್ಯಂತ ಅಪಾರ ಬಂಧು ಬಳಗವನ್ನು ಹೊಂದಿದ್ದು ಎಲ್ಲರ ಪಾಲಿನ ಅತ್ಯಂತ ಹಿರಿಯ ಅಜ್ಜಿಯಾಗಿದ್ದಾಳೆ ಎನ್ನಲಾಗಿದೆ.
ಅಜ್ಜಿ ಸಂಗಮ್ಮ ದೇಶಮುಖ ಮನೆತನದ ಹಿರಿಯ ಕಳಶವಾಗಿದ್ದು, ದೇಶಮುಖ ಮನೆತನಕ್ಕೆ ಮುಖಟಪ್ರಾಯವಾಗಿ ಇಡಿ ಜೀವನ ಸವೆಸುವ ಮೂಲಕ ದೇಶಮುಖ ಮನೆತನ ಬೆಳಗಿದ ಕೀರ್ತಿ ಅಜ್ಜಿ ಸಂಗಮ್ಮಳದ್ದಾಗಿದೆ.
ಮಕ್ಕಳು, ಮೊಮ್ಮಕ್ಕಳು ಮರಿಮೊಮ್ಮಕ್ಕಳು ಸೇರಿದಂತೆ ಅಪಾರ ಬಳಗವನ್ನು ಅಜ್ಜಿ ಸಂಗಮ್ಮ ಅಗಲಿದ್ದಾಳೆ. ದೇವರು ಅವರ ಆತ್ಮಕ್ಕೆ ಚಿರ ಶಾಂತಿ ನೀಡಲಿ ಎಂದು ಮೊಮ್ಮಗ ಶಿವರಾಜ ದೇಶಮುಖ ಹಾಗೂ ಕುಟುಂಬಸ್ಥರು ಪ್ರಾರ್ಥನೆ ಸಲ್ಲಿಸಿದ್ದಾರೆ.
ಗುರುವಾರ ಸಂಜೆ 4 ಗಂಟೆಗೆ ಹಳೆಪೇಟೆಯಲ್ಲಿ ದೇಶಮುಖ ಮನೆತನದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.