ಪ್ರಮುಖ ಸುದ್ದಿ

ಕಾಂಗ್ರೆಸ್ ನವರಿಗೆ ಕೆಲಸವಿಲ್ಲ –ರೇಣುಕಾಚಾರ್ಯ ಟೀಕೆ

ವಿವಿ ಡೆಸ್ಕ್ಃ ಕಾಂಗ್ರೆಸ್ ಮತ್ತು ಜೆಡಿಎಸ್ ರಾಜ್ಯ ಖಜಾನೆ ಖಾಲಿ ಮಾಡಿದ್ದಾರೆ. ಅವರಿಗೆ ಸದ್ಯಕ್ಕೆ ಮಾಡಲು ಬೇರಾವ ಕೆಲಸವಿಲ್ಲ. ಹೀಗಾಗಿ ಬಾಯಿಗೆ ಬದ್ದಂತೆ ಮಾತನಾಡುತ್ತಿದ್ದಾರೆ ಎಂದು ಸಿಎಂ ಆಪ್ತ ಕಾರ್ಯದರ್ಶಿ, ಶಾಸಕ ರೇಣುಕಾಚಾರ್ಯ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಈಗಾಗಲೇ ಕೇಂದ್ರದಿಂದ ನೆರೆ ಪರಿಹಾರ ಬಿಡುಗಡೆಯಾಗಿದೆ. ಇನ್ನೂ ಹೆಚ್ಚುವರಿ ಪರಿಹಾರ ನಿಧಿ ನೀಡಲಿದ್ದಾರೆ. ಆದಾಗ್ಯು ಮಾಜಿ ಸಿಎಂ ಇಬ್ಬರು ಪರಿಹಾರ ಕೊಡುವದಿಲ್ಲ ಎಂದು ಹೇಳುತ್ತಾ ಬಂದರು. ಈಗ ಪರಿಹಾರ ಬಂದ ಮೇಲೆ ಇದೇ ಕೊನೆಯದಾಗಿ ಮತ್ತೇ ಪರಿಹಾರ ಬರುವದಿಲ್ಲ ಕೇಂದ್ರ ಕೊಡುವದಿಲ್ಲ ಎಂಬ ಮಾತುಗಳನ್ನು ಆಡುತ್ತಿದ್ದಾರೆ. ಪರಿಹಾರ ಕೊಡುವದಿಲ್ಲ ಎಂದು ಹೇಳುವ ಇವರದೇ ಸರ್ಕಾರ ತಾವೇ ಕೇಂದ್ರದಲ್ಲಿ ಅಧಿಕಾರಸ್ಥರು ಅಂದುಕೊಂಡಿರಬೇಕು ಎಂದು ಛೇಡಿಸಿದರು.

Related Articles

Leave a Reply

Your email address will not be published. Required fields are marked *

Back to top button