ಪೊಲೀಸರು ಕಾಯಕ ತತ್ವದ ಪರಿಪಾಲಕರು-ಪಿ.ಖರ್ಗೆ
ಬಸವಣ್ಣನವರ ಕಾಯಕತತ್ವದ ನಿಜವಾದ ಪರಿಪಾಲಕರು POLICE- ಪ್ರಿಯಾಂಕ್ ಖರ್ಗೆ
ಕಲಬುರಗಿಃ ಬಸವಣ್ಣನವರ ಕಾಯಕತತ್ವವನ್ನು ಪೊಲೀಸರು ಅಕ್ಷರಶಃ ಪಾಲಿಸುತ್ತಾರೆ. ಹೀಗಾಗಿ ಅವರ ಸೇವೆ ಶ್ಲಾಘನೀಯ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪೊಲೀಸರ ಸೇವೆ ಕುರಿತು ಬಣ್ಣಿಸಿದರು.
ನಗರದ ಎಸ್ ಎಂ ಪಂಡಿತ್ ರಂಗಮಂದಿರದಲ್ಲಿ ನಗರದ ನೂತನ ಪೊಲೀಸ್ ಕಮೀಷನರೇಟ್ ಕಚೇರಿ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಸನ್ನಿವೇಶದಲ್ಲಿ ಪೋಲೀಸ್ ಇಲಾಖೆಯಲ್ಲಿ ಕೆಲಸ ಮಾಡಬೇಕಾದರೆ ಕಷ್ಟದ ಕೆಲಸವಾಗಿದೆ. ಹಲವಾರು ಕಷ್ಟಗಳ ನಡುವೆಯೂ ಅವರು ನಿರಂತರವಾಗಿ ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕಾರಣ ಸಮಾಜದಲ್ಲಿ ಶಾಂತಿ ನೆಲಸಲು ಸಹಕಾರಿಯಾಗಿದೆ ಎಂದರು.
ನಗರದಲ್ಲಿ ಕಮೀಷನರೇಟ್ ಕಚೇರಿ ಉದ್ಘಾಟನೆಯಾಗಿದೆ ಅದಕ್ಕೆ ತಕ್ಕಂತೆ ಇಲಾಖೆಯಲ್ಲಿ ಕೆಲವೊಂದು ಸುಧಾರಣೆಗಳು ಆಗಬೇಕಿದೆ ಎಂದ ಅವರು,
ಸ್ವತಃ ಬಸವಣ್ಣನವರ ತತ್ವಪರಿಪಾಲಕರಾದ ಗೃಹ ಸಚಿವರು ಅದೇ ಪೊಲೀಸ್ ಇಲಾಖೆಯ ಸಮಗ್ರ ಅಭಿವೃದ್ದಿಗೆ ಮುಂದಾಗಿದ್ದಾರೆ. ಇದು ಸಂತಸದ ವಿಚಾರ ಎಂದರು.
ಕ್ರೈಮ್ ತನ್ನ ಸ್ವರೂಪ ಬದಲಾಯಿಸಿಕೊಂಡಿದ್ದು ಈಗೀಗ ಸೈಬರ್ ಸೌಲಭ್ಯ ಬಳಸಿಕೊಂಡು ಅಪರಾದ ಪ್ರಕರಣಗಳು ನಡೆಯುತ್ತಿವೆ.
ಸೈಬರ್ ಸೆಕ್ಯೂರಿಟಿ ಸೆಲ್, ಸೈಬರ್ ಫಾರೆನ್ಶಿಕ್ ಲ್ಯಾಬ್ ಸೇರಿದಂತೆ ಸೈಬರ್ ಕ್ರೈಮ್ ಗಳ ಕುರಿತು ಕ್ರಮ ತೆಗೆದುಕೊಳ್ಳಲು ಅನುಕೂಲವಾಗುವಂತ ಘಟಕವೊಂದನ್ನು ಕಲಬುರಗಿಯಲ್ಲಿ ಸ್ಥಾಪಿಸಬೇಕು ಎಂದು ಗೃಹ ಸಚಿವರಲ್ಲಿ ಮನವಿ ಮಾಡಿದರು.