ಪ್ರಮುಖ ಸುದ್ದಿ

ದಲಿತರ ಭೂಮಿ ಕಬಳಿಕೆ ಆರೋಪ, ಶಾಸಕ ವರ್ತೂರು ಪ್ರಕಾಶ್ ವಿರುದ್ಧ ದೂರು!

ಕೋಲಾಟ: ಕೋಲಾರ ಶಾಸಕ, ನಮ್ಮ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ವರ್ತೂರು ಪ್ರಕಾಶ್ ವಿರುದ್ಧ ನಕಲಿ ದಾಖಲೆ ಸೃಷ್ಠಿಸಿ ದಲಿತರಿಂದ ಭೂಮಿ ಕಬಳಿಕೆ ಆರೋಪ ಕೇಳಿ ಬಂದಿದೆ. ಶಾಸಕ ವರ್ತೂರು ಸೇರಿದಂತೆ ಆರು ಜನರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ದಲಿತರ ಭೂಮಿ ಕಬಳಿಕೆ ಹಾಗೂ ಜಾತಿ ನಿಂದನೆ ದೂರು ದಾಖಲಾಗಿದೆ.

ಹಣ ಕೊಡುವುದಾಗಿ ನಂಬಿಸಿ ದಲಿತ ಸಮುದಾಯದ ಮುನಿಯಪ್ಪ ಅವರ ಭೂಮಿಯನ್ನು ಕಬಳಿಸಲಾಗಿದೆ ಎಂದು ಆರೋಪಿಸಿ ಚನ್ನಮ್ಮ ಎಂಬ ಮಹಿಳೆ ದೂರು ನೀಡಿದ್ದಾಳೆ. ಶಾಸಕ ವರ್ತೂರು ಪ್ರಕಾಶ ಅವರ ಬೇನಾಮಿ ಆಸ್ತಿ ಬಗ್ಗೆಯೂ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ದೂರುದಾರರು ಮನವಿ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button