ಪ್ರಮುಖ ಸುದ್ದಿ

ದಿಗ್ಗಿ ಸಂಗಮೇಶ್ವರರ ರಥೋತ್ಸವ ವೇಳೆ ಅಡಚಣೆ ಯಾಕೆ ಗೊತ್ತೆ.?

ಸಂಭ್ರಮದ ದಿಗ್ಗಿ ಸಂಗಮೇಶ್ವರ ರಥೋತ್ಸವ

ಉತ್ತುತ್ತಿ, ಬಾಳೆಹಣ್ಣು ಎಸೆದು ಪ್ರಾರ್ಥಿಸಿದ ಭಕ್ತರು

ಯಾದಗಿರಿ, ಶಹಾಪುರಃ ತಾಲೂಕಿನ ದಿಗ್ಗಿ ಗ್ರಾಮದ ಶ್ರೀ ಸಂಗಮೇಶ್ವರ ರಥೋತ್ಸವ ಮಂಗಳವಾರ ಸಂಜೆ ಸಂಭ್ರಮದಿಂದ ಭಕ್ತರ ಉದ್ಘೋಷದೊಂದಿಗೆ ಜರುಗಿತು.

ಪ್ರತಿ ಶ್ರಾವಣ ಮಾಸದ ನಾಲ್ಕನೇ ಸೋಮವಾರದ ಮರುದಿನ ನಡೆಯುವ ರಥೋತ್ಸವ ಮಂಗಳವಾರ ಎಂದಿನಂತೆ ಸಂಭ್ರಮ ಸಡಗರದಿಂದ ನಡೆಯಿತು.

ಸಾವಿರಾರು ಭಕ್ತರು ಭವ್ಯ ರಥೋತ್ಸವ ಜರುಗುವದನ್ನು ಕಣ್ತುಂಬಿಕೊಂಡರು. ಈ ಸಂದರ್ಭದಲ್ಲಿ ಭಕ್ತಾಧಿಗಳು ಅಲ್ಲದೆ ವಿಶೇಷವಾಗಿ ನೂತನ ದಂಪತಿಗಳು ರಥೋತ್ಸವಕ್ಕೆ ಬಾಳೆಹಣ್ಣು, ಉತ್ತುತ್ತಿ ಎಸೆದು ಪ್ರಾರ್ಥನೆ ಸಲ್ಲಿಸಿದರು. ತಮ್ಮ ಇಷ್ಠಾರ್ಥ ಪೂರೈಸಿದಲ್ಲಿ ಮುಂದಿನ ವರ್ಷ ಮತ್ತೇ ರಥೋತ್ಸವದಲ್ಲಿ ಭಾಗವಹಿಸಿ ಹರಕೆ ತೀರಿಸುತ್ತೇವೆ ಎಂದು ಪ್ರಾರ್ಥನೆ ಸಲ್ಲಿಸುವ ವಾಡಿಕೆ ಇದೆ. ಅದರಂತೆ ಭಕ್ತಾಧಿಗಳು ರಥೋತ್ಸವ ಸಂದರ್ಭದ ಹರ್ಷೋದ್ಘಾರದೊಂದಿಗೆ ನಮನಗಳನ್ನು ಸಲ್ಲಿಸಿದರು. ಬೆಳಗ್ಗೆಯಿಂದಲೇ ಮೂಲ ವಿಗ್ರಹಕ್ಕೆ ಅಬಿಷೇಕ, ಹೂವುಗಳಿಂದ ಅಲಂಕಾರ ನಡೆದಿತ್ತು. ಅಲ್ಲದೆ ನೈವೇದ್ಯ, ಕಾಯಿ ಕರ್ಪೂರಗಳನ್ನು ಭಕ್ತಾಧಿಗಳು ಅರ್ಪಿಸಿ ಶ್ರೀದೇವರ ಕೃಪೆ ಪಡೆದರು.

ರಥೋತ್ಸವಕ್ಕೆ ಅಡಚಣೆಃ ರಥೋತ್ಸವ ಜರುಗುತ್ತಿರುವ ಸಂದರ್ಭ ರಥದ ಮೇಲಿನ ಕಳಶ ಮತ್ತು ಛತ್ರಿ ವಾಲಿರುವುದು ನೆರೆದ ಭಕ್ತಾಧಿಗಳಲ್ಲಿ ಕೆಲಹೊತ್ತು ಆತಂಕ ಬೇಸರಕ್ಕೆ ಕಾರಣವಾಯಿತು.

ತಕ್ಷಣ ರಥ ಎಳೆಯುವದನ್ನು ನಿಲ್ಲಿಸಿದ ಭಕ್ತಾಧಿಗಳು. ರಥದ ಕಳಶ ಮತು ಛತ್ರಿ ಸರಿಪಡಿಸಿದರು. ಆದರೆ ಸಮಸ್ಯೆ ಹಾಗೇ ಮುಂದುವರೆದಿತ್ತು. ರಥವು ಮರಳಿ ಸ್ಥಳಕ್ಕೆ ಆಗಮಿಸಲು ಇದರಿಂದ ಸುಮಾರು ಅರ್ಧ ಗಂಟೆ ವ್ಯಥೆ ಉಂಟಾಯಿತು.

ಕಾರಣ ರಥ ಬೀದಿ ಸಮರ್ಪಕವಾಗಿ ನಿರ್ಮಿಸದಿರುವುದೇ ಇದಕ್ಕೆ ಮೂಲ ಕಾರಣವೆನ್ನಲಾಗುತ್ತಿದೆ.  ರಥ ಬೀದಿ ಈ ಬಾರಿ ಸಂಪೂರ್ಣ ಗಟ್ಟಿಯಾಗಿ ನಿರ್ಮಿಸದ ಕಾರಣ, ಜಮೀನಿನ ಮಣ್ಣು ಹದವಾಗಿದ್ದು, ರಥದ ಗಾಲಿ ಮಣ್ಣಿನಲ್ಲಿ ಸಿಲುಕಿ ರಥದ ಕಳಶ ಬಾಗಿದೆ. ಹೀಗಾಗಿ ಅದೆಲ್ಲವೂ ಸರಿಪಡಿಸಿಕೊಂಡು ಮರಳಿ ಸ್ಥಳಕ್ಕೆ ರಥ ಆಗಮಿಸಲು ಕೊಂಚ ಸಮಯ ಬೇಕಾಯಿತು ಎನ್ನಲಾಗಿದೆ.

ಆದರೆ ಯಾವುದೇ ಅನಾಹುತ ಅಪಭ್ರಂಶವಿಲ್ಲದೆ ಸಂಗಮೇಶ್ವರರ ರಥೋತ್ಸವ ಅದ್ದೂರಿಯಾಗಿ ಜರುಗಿದೆ ಎಂದು ಭಕ್ತಾಧಿಗಳು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button