ಪ್ರಮುಖ ಸುದ್ದಿ
ಮಂಡ್ಯದಲ್ಲಿ ರಮ್ಯ ಕ್ಯಾಂಟೀನ್ : ರಮ್ಯ ಚೈತ್ರ ಕಾಲ ಶುರು
ಮಂಡ್ಯದಲ್ಲಿ ರಮ್ಯ ಕ್ಯಾಂಟೀನ್ ಶುರು..
ಮಂಡ್ಯ : ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ತೆರೆದಿದ್ದು ರಾಜ್ಯದಾದ್ಯಂತ ಇಂದಿರಾ ಕ್ಯಾಂಟೀನ್ ಯೋಜನೆ ವಿಸ್ತರಿಸಲು ಮುಂದಾಗಿದೆ. ಮತ್ತೊಂದು ಕಡೆ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಶರವಣ ದೇವೇಗೌಡರ ಹೆಸರಿನಲ್ಲಿ ಅಪ್ಪಾಜಿ ಕ್ಯಾಂಟೀನ್ ತೆರೆದಿದ್ದಾರೆ. ಈಗ ರಮ್ಯಾ ಕ್ಯಾಂಟೀನ್ ಸರದಿ.
ಹೌದು, ಮಂಡ್ಯ ನಗರದಲ್ಲಿ ಇಂದು ಮಾಜಿ ಸಂಸದೆ, ನಟಿ ರಮ್ಯ ಹೆಸರಿನಲ್ಲಿ ವಿಮ್ಸ್ ಆಸ್ಪತ್ರೆ ಸಮೀಪ ರಮ್ಯ ಕ್ಯಾಂಟೀನ್ ಆರಂಭವಾಗಿದೆ. ರಮ್ಯ ಅಭಿಮಾನಿ ರಘು ಆರಂಭಿಸಿರುವ ಕ್ಯಾಂಟೀನ್ ನಲ್ಲಿ ಕೇವಲ 10 ರೂಪಾಯಿಗೆ ವಿವಿಧ ಬಗೆಯ ತಿಂಡಿ , ಊಟ ಪೂರೈಸುವ ಯೋಜನೆ ರೂಪಿಸಲಾಗಿದೆ. ಜಿಲ್ಲಾ ಕಾಂಗ್ರೆಸ್ ಸಮಿತಿ ಅದ್ಯಕ್ಷ ಆತ್ಮಾನಂದ ಅವರು ರಮ್ಯ ಕ್ಯಾಂಟೀನ್ ಗೆ ಚಾಲನೆ ನೀಡಿದ್ದಾರೆ. ಆ ಮೂಲಕ ಮಂಡ್ಯದಲ್ಲಿನ್ನು ನಟಿ ರಮ್ಯ ಚೈತ್ರ ಕಾಲ ಆರಂಭವಾಗಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ.