ಪ್ರಮುಖ ಸುದ್ದಿ
ಟಂಟಂ ಪಲ್ಟಿ ಇಬ್ಬರು ಕೂಲಿಗಾರರ ದುರ್ಮರಣ, ಹಲವರಿಗೆ ಗಾಯ
ಅಪಘಾತಃ ಟಂಟಂ ಪಲ್ಟಿ ಇಬ್ಬರ ದುರ್ಮರಣ
ಯಾದಗಿರಿಃ ಜಿಲ್ಲೆಯ ಶಹಾಪುರ ಮತ ಕ್ಷೇತ್ರ ವ್ಯಾಪ್ತಿ ಬರುವ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಹೊರವಲಯದಲ್ಲಿ ಚಲಿಸುತ್ತಿದ್ದ ಟಂಟಂ ಆಟೋವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಓರ್ವ ಪಾದಚಾರಿ ಸೇರಿದಂತೆ ಆಟೊದಲ್ಲಿದ್ದ ಓರ್ವ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ.
ಅಲ್ಲದೆ ಟಂಟಂನಲ್ಲಿ ಕುಳಿತಿದ್ದ 7 ಜನರು ಗಂಭೀರ ಗಾಯಗೊಂಡಿದ್ದು, ಕೆಂಭಾವಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸುದ್ದಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಬೇಡಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಂಭಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟಂಟ ಆಟೋದಲ್ಲಿರುವ ಎಲ್ಲರೂ ಕೂಲಿ ಕೆಲಸಕ್ಕಾಗಿ ಹೊಲಕ್ಕೆ ತೆರಳಿದ್ದರು ಎನ್ನಲಾಗಿದೆ. ಎಲ್ಲವೂ ರೈತ ಕುಟುಂಬಗಳಾಗಿದ್ದು, ಕೃಷಿ ಕೂಲಿ ಕಾರ್ಮಿಕರಾಗಿದ್ದಾರೆ ಎಂದು ತಿಳಿದು ಬಂದಿದೆ.