ಪ್ರಮುಖ ಸುದ್ದಿ

ಅಗ್ನಿ ಅವಘಡ ಸಮರ್ಪಕವಾಗಿ ನಿಭಾಯಿಸಿದ ಅಗ್ನಿಶಾಮಕ ದಳ..!

ಯಾದಗಿರಿಃ ಬೆಂಕಿ ಹತ್ತಿದ್ದಂತೆ ಮೊದಲು ನೋಡಿದ ಶಾಲಾ ಜವಾನ, ಓಡೋಡಿ ಹೋಗಿ, ಸಿಬ್ಬಂದಿಗೆ ತಿಳಿಸಿದರು. ನಂತರ ಅಪಾಯದ ಸೈರನ್ ಮೊಳಗಿಸಿ, ಶಾಲಾ ಮಕ್ಕಳನ್ನು ಹೊರಗಡೆಗೆ ಕರೆತರುವ ಪ್ರಯತ್ನ ಮಾಡಲಾಯಿತು. ನಂತರ ಅಗ್ನಿ ಶಾಮಕ ಇಲಾಖೆ ಹಾಗೂ ಅಂಬ್ಯುಲೆನ್ಸ್‍ಗೆ ಕರೆ ಮಾಡಿ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ಸಿಬ್ಬಂದಿ, ಮೊಲು ಶಾಲೆಯೊಳಗೆ ಸಿಕ್ಕಿ ಹಾಕಿಕೊಂಡ ಐದು ವಿದ್ಯಾರ್ಥಿಗಳನ್ನು ರಕ್ಷಿಸಿದರು.  ಗಾಯಗೊಂಡಿರುವ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ಈ ಘಟನೆ ನಡೆದಿರುವುದು ನಗರದ ಪಿಎಸ್ ಜೈನ್ ಶಾಲೆಯ ಆವರಣದಲ್ಲಿ. ಆದರೆ ಆತಂಕ ಬೇಡ ಇದು ಅಗ್ನಿ ಶಾಮಕ ದಳದ ಸಿಬ್ಬಂದಿ ಸಮರ್ಪಕವಾಗಿ ನಡೆಸಿದ ಅಣಕು ಪ್ರದರ್ಶನ ಅಷ್ಟೆ.

ಜಿಲ್ಲಾ ಅಗ್ನಿ ಶಾಮಕ ಇಲಾಖೆಯಿಂದ ಅಗ್ನಿ ಅವಘಡ (ದುರಂತ)ಗಳಿಂದ ಪಾರಾಗುವ ಕುರಿತು ಅಣಕು ಕಾರ್ಯಾಚರಣೆ ನಡೆಸಲಾಯಿತು.
ಈ ಪ್ರದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಆಗಿರುವ ಗಾಯ, ಪ್ರಥಮ ಚಿಕಿತ್ಸೆ ನೀಡುವುದರೊಂದಿಗೆ 108 ಅಂಬ್ಯುಲನ್ಸ್ ಮೂಲಕ ಹೆಚ್ಚಿನ ಚಿಕಿತೆÀ್ಸಗೆ ಕರೆದ್ಯೊಯುವ ರೀತಿಯ ಅಣಕು ಪ್ರದರ್ಶನವು ಮಕ್ಕಳ ಗಮನಸೆಳೆಯಿತು.

ನಂತರ ಬೆಂಕಿ ನಂದಿಸುವ ವಾಹನದ ಮೂಲಕ ನೋಜಲ್ ಹಿಡಿದುಕೊಂಡು ಪೈಪುಗಳ ಮೂಲಕ ವಿವಿಧ ರೀತಿಯಲ್ಲಿ ನೀರು ಚಿಮ್ಮಿಸುವ ಹರಸಾಹಸದೊಂದಿಗೆ ಬೆಂಕಿ ನಂದಿಸುವುದು, ಮುಖ್ಯವಾಗಿ ಅಗ್ನಿ ಅವಘಡ ಸಂಭವಿಸಿದಾಗ ಯಾವ ರೀತಿ ಸುರಕ್ಷತೆಯಾಗಿರಬೇಕೆಂಬುದು ಅಗ್ನಿ ಶಾಮಕದಳದ ಸಿಬ್ಬಂದಿಯ ಅಣಕು ಪ್ರದರ್ಶನ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸಂಪೂರ್ಣ ಮಾಹಿತಿ ದೊರಕುವಂತಾಯಿತು.

ಅಗ್ನಿ ಅವಘಡ ಸಂದರ್ಭ ಒದ್ದೆ ಬಟ್ಟೆ ಬಳಸಿ

ಅಗ್ನಿ ಹೊತ್ತಿಕೊಂಡಾಗ ಸುರಕ್ಷತೆಯಿಂದ ಪಾರಾಗಲು, ದೊಡ್ಡ ಬಿಲ್ಡಿಂಗ್ ಇದ್ದರೆ ಲಿಫ್ಟ್‍ಗಳನ್ನು ಬಳಸಬಾರದು, ಒದ್ದೆ ಬಟ್ಟೆಯನ್ನು ಮುಖಕ್ಕೆ ಕಟ್ಟಿಕೊಂಡು ಅಗ್ನಿ ಅವಘಡದಿಂದ ತಪ್ಪಿಸಿಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿ ಬಾತರೂಂ ಇನ್ನಿತರಗಳಲ್ಲಿ ಇದ್ದು ಸಿಕ್ಕಿ ಹಾಕಿಕೊಂಡಾಗ ಒದ್ದೆ ಬಟ್ಟೆಯನ್ನು ಹಿಡಿದು ಅಗ್ನಿ ಬರದಂತೆ ಸುತ್ತಲು ಹಾಕಬೇಕು.

ಇದರಿಂದಾಗಿಯೂ ಅಗ್ನಿ ದುರಂತ ತಪ್ಪಿಸಹುದಾಗಿದೆ. ವಿದ್ಯುತ್ ಬೆಂಕಿ ನಂದಿಸುವಾಗ ಯಾವುದೇ ಕಾರಣಕ್ಕೂ ನೀರು ಮಾತ್ರ ಬಳಸಬಾರದು ಎಂದು ಅಗ್ನಿ ನಂದಿಸುವ ಕುರಿತು ಸ್ವವಿವರವಾಗಿ ಜಿಲ್ಲಾ ಅಗ್ನಿ ಶಾಮಕದಳದ ಅಧಿಕಾರಿ ಹನುಮನಗೌಡ ತಿಳಿಸಿದರು. ಈ ಸಂದರ್ಭದಲ್ಲಿ ಅಗ್ನಿ ಶಾಮಕದಳ ಸಿಬ್ಬಂದಿಗಳಾದ ಕೆ.ನರಸಪ್ಪ, ವಿ.ಬಿ.ರಾಠೋಡ, ಕೆ.ಹುಸೇನ್, ತಿರುಮಲ ರೆಡ್ಡಿ, ರಾಘವೇಂದ್ರ, ಮಹಿಬೂಬ ಸಾಬ, ಈರಣ್ಣ, ದೇವೆಂದ್ರ, ಶಂಕ್ರಪ್ಪ, ಮಲ್ಲಿಕಾರ್ಜುನ ಸೇರಿದಂತೆ ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button