ರಸ್ತಾಪುರಃ ಖಬರಸ್ಥಾನ ಜಾಗ ಅತಿಕ್ರಮಣ ಸಯ್ಯದ್ ಖಾದ್ರಿ ಆರೋಪ
ಖಬರಸ್ಥಾನ ಜಾಗ ಅತಿಕ್ರಮಣ ಮುಸ್ಲಿಂ ಸಮುದಾಯ ಆಕ್ರೋಶ
ಯಾದಗಿರಿ, ಶಹಾಪುರಃ ತಾಲೂಕಿನ ರಸ್ತಾಪುರ ಗ್ರಾಮದ ಹೊರವಲಯದಲ್ಲಿ ಸಗರ ಮಾರ್ಗದ ಕರೆ ಹತ್ತಿರ ಬರುವ ಮುಸ್ಲಿಂ ಸಮುದಾಯದ ಖಬರಸ್ಥಾನ ಜಾಗವನ್ನು ಸ್ಥಳೀಯ ಶಾಸಕ ದರ್ಶನಾಪುರ ಅವರ ಬೆಂಬಲದಿಂದ ಅವರ ಹಿಂಬಾಲಕರು ಅತಿಕ್ರಮಣ ಮಾಡುತ್ತಿದ್ದಾರೆ ಎಂದು ಸ್ಥಳೀಯ ಮುಸ್ಲಿಂ ಸಮುದಾಯದ ಮುಖಂಡ ಸಯ್ಯದ್ ಖಾದ್ರಿ ಆರೋಪಿಸಿದ್ದಾರೆ.
ಸುಮಾರು ಮುನ್ನೂರು ವರ್ಷಗಳಷ್ಟು ಹಳೇಯದಾದ ಈ ಖಬರಸ್ಥಾನ ಜಾಗವನ್ನು ಜಾಲಿಕಂಟಿ ಗಿಡಗಳನ್ನು ಕಡಿದು ಸ್ವಚ್ಛಗೊಳಿಸಿದ್ದು, ಅಲ್ಲಿರುವ ಹಿರಿಯ ಗೋರಿಗಳನ್ನು ತೆರವುಗೊಳಿಸುವ ಮೂಲಕ ಸಂಪೂರ್ಣ ಖಬರಸ್ಥಾನ ಜಾಗ ನೆಲಸಮ ಮಾಡುವ ಹುನ್ನಾರ ನಡೆಸುತ್ತಿದ್ದಾರೆ ಈ ಕುರಿತು ತಹಶೀಲ್ದಾರರ ಗಮನಕ್ಕೆ ತಂದಿದ್ದು, ಯಾವುದೇ ಸೂಕ್ರ ಸ್ಪಂದನೆ ನೀಡಲಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಖಬರಸ್ಥಾಣ ಜಾಗ ಅಲ್ಲ ಅದು ಸರ್ಕಾರಿ ಜಾಗವಿದೆ. ಏನು ಮಾಡಲಾಗದು ಎಂದು ಶಾಸಕರ ಪರವಾಗಿ ಬೇಜಬ್ದಾರಿಯಿಂದ ತಹಶೀಲ್ದಾರರು ಸಮಜಾಯಿಸಿ ನೀಡುತ್ತಿದ್ದು, ಇದರು ಹಿಂದೆ ರಾಜಕೀಯ ಕೈವಾಡವಿದ್ದು, ನೂರಾರು ಎಕರೆ ಜಾಗವನ್ನು ಕಬಳಿಸುವ ಹುನ್ನಾರ ನಡೆದಿದೆ. ಕಾರಣ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಬೇಕು.
ಅಂದಾಜು 300 ಕ್ಕೂ ಹೆಚ್ಚು ಗೋರಿಗಳಿದ್ದು, ಅವೆಲ್ಲವನ್ನು ತೆರವುಗೊಳಿಸುವ ಕಾರ್ಯ ನಡೆದಿದೆ. ಕೂಡಲೇ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮುಸ್ಲಿಂ ಸಮುದಾಯದ ಖಬರಸ್ಥಾನ ಉಳಿಸಬೇಕು. ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಕೆಲಸ ನಡೆದಿದ್ದು. ಶೀಘ್ರ ಸ್ಪಂಧನೆ ದೊರೆಯದಿದ್ದರೆ ತಹಶೀಲ್ ಕಚೇರಿ ಎದುರ ಮುಸ್ಲಿಂ ಬಾಂಧವರು ಇತರೆ ಸಂಘಟನೆಗಳೊಡನೆ ಧರಣಿ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಶಾಸಕರ ಕುಮ್ಮಕ್ಕು..ತಹಶೀಲ್ದಾರರ ಬೇಜವಬ್ದಾರಿ ಹೇಳಿಕೆ
ಈಗಾಗಲೇ ಖಬರಸ್ಥಾನ ಜಾಗವನ್ನು ಸ್ವಚ್ಚಗೊಳಿಸಿ ಜಾಗದ ಅಳತೆ ಸರ್ವೇ ಮಾಡಿಸಿದ್ದು, ಜಾಲಿಕಂಟಿಗಳಿಗೆ ಬೆಂಕಿ ಹಚ್ಚಿದ್ದಾರೆ. ಮಾರ್ಗ ಮಧ್ಯೆ ಕೆಲವೊಂದು ಗೋರಿಗಳನ್ನು ತೆರವುಗೊಳಿಸಿದ್ದಾರೆ. ಅಷ್ಟಕ್ಕೆ ಅದನ್ನು ತಡೆಯಲಾಗಿದೆ. ಇಷ್ಟೆ ಕುಳಿತಲ್ಲಿ ನಾಳೆ ಜೆಸಿಬಿ ಯಂತ್ರದ ಮೂಲಕ ಸಂಪೂರ್ಣ ನೆಲಸಮ ಮಾಡಲಿದ್ದಾರೆ.
ಕೂಡಲೆ ಜಿಲ್ಲಾಧಿಕಾರಿಗಳು ಅತಿಕ್ರಮ ಕಾರ್ಯ ತಡೆಯಲು ಇಲ್ಲಿನ ತಹಶೀಲ್ದಾರರಿಗೆ ಸೂಚಿಸಬೇಕು. ಈಗಾಗಲೇ ತಹಶೀಲ್ದಾರರ ಗಮನಕ್ಕೆ ತಂದರೆ ಸೂಕ್ತ ಸ್ಪಂಧನೆ ನೀಡದೆ. ಅದು ಸರ್ಕಾರಿ ಜಾಗವಿದೆ. ಖಬರಸ್ಥಾನ ಅಲ್ಲ. ಏನು ಮಾಡಲಾದು ಎಂದು ಕೈಚಲ್ಲಿದ್ದಾರೆ. ಸ್ಥಳದಲ್ಲಿ 300 ಕ್ಕೂ ಹೆಚ್ಚು ಮುಸ್ಲಿಂ ಸಮದಾಯದ ಗೋರಿಗಳಿವೆ. ಅವುಗಳಿಗೆ ಧಕ್ಕೆಯಾದಲ್ಲಿ ಮುಸ್ಲಿಂರ ಭಾವನೆಗಳಿ ಧಕ್ಕೆಯಾಗಲಿದೆ. ಒಂದು ಧರ್ಮದ ನಂಬಿಕೆ ಭಾವನೆಗಳೊಡನೆ ಆಟವಾಡುವದು ಸರಿಯಲ್ಲ.
–ಸಯ್ಯದ್ಸಾಬ ಖಾದ್ರಿ. ಮುಸ್ಲಿಂ ಮುಖಂಡ.




