ನೀರು ಮಿತವಾಗಿ ಬಳಸಲು ವಿದ್ಯಾರ್ಥಿಗಳಿಗೆ ಸಂಗಮೇಶ ಉಪಾಸೆ ಸಲಹೆ
ಯಾದಗಿರಿ : ಮನುಷ್ಯನ ಬಗುಕಿನಲ್ಲಿ ನೀರು, ಪರಿಸರ ಮತ್ತು ಆರೋಗ್ಯ ಬಹು ಪ್ರಮುಖವಾಗಿದೆ. ಅದಕ್ಕಾಗಿ ಇವುಗಳ ಬಗ್ಗೆ ನಾವೆಲ್ಲರೂ ಜಾಗೃತಯಿಂದ ರಕ್ಷಣೆ ಮಾಡಿಕೊಂಡು ಸ್ವಾಸ್ಥ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ನಗರಸಭೆ ಪೌರಯುಕ್ತ ಸಂಗಪ್ಪ ಉಪಾಸೆ ಹೇಳಿದರು.
ಅವರು ನಗರದ ಕೋಲಿವಾಡ ಸರಕಾರಿ ಶಾಲೆಯಲ್ಲಿ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮ್ತು ಹಣಕಾಸು ಸಂಸ್ಥೆ ನಿಯಮಿತ, ಉತ್ತರ ಕರ್ನಾಟಕ ನಗರ ವಲಯ ಬಂಡವಾಳ ಹೂಡಿಕಾ ಕಾರ್ಯಕ್ರಮ, ಸಗರ ಸಭೆ ಯಾದಗಿರಿ ಮತ್ತು ಮಹಿಳಾ ಅಭಿವೃದ್ಧಿ ಶಿಕ್ಷಣ ಸಂಸ್ಥೆ ಸಂಯಕ್ತಾಶ್ರಯದಲ್ಲಿ ಹಮ್ಮಿಕೊಂಡ ನೀರಿನ ಸಂರಂಕ್ಷಣೆ ಮತ್ತು ವೈಯಕ್ತಿಕ ಶೌಚಾಲಯದ ಅನುಕೂಲಗಳ ಕುರಿತು ಕೊಳಚೆ ಪ್ರದೇಶದ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೋಲಿವಾಡಾ ಶಾಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆಯಿತ್ತು. ಪ್ರಸಕ್ತ ನಳದ ಸಂಪರ್ಕ ಒದಗಿಸಿ ಆ ಸಮಸ್ಯೆಯನ್ನು ನೀಗಿಸಲಾಗಿದೆ. ಮಕ್ಕಳು ಕುಡಿಯುವ ನೀರನ್ನು ಸಮಪರ್ಕವಾಗಿ ಬಳಕೆ ಮಾಡಿ ಪೋಲಾಗದಂತೆ ಕಾಪಾಡಿಕೊಳ್ಳಲು ತಿಳಿಸಿದರು. ಬರುವ ದಿನಗಳಲ್ಲಿ ನಗರದ ಎಲ್ಲಾ ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಹೋಗಲಾಡಿಸಲಾಗುವುದು. ಪರಿಸರ ಮತ್ತು ಆರೋಗ್ಯದ ದೃಷ್ಠಯಿಂದ ಸರಕಾರ ಪ್ರತಿಯೊಬ್ಬರಿಗೂ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ರೂ 15000 ನೆರವು ನೀಡುತ್ತಿದೆ. ಈ ಕುರಿತು ಜನತೆಯಲ್ಲಿ ಜಾಗೃತಿ ಮೂಡಿಸಿ ಶೌಚ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದು ಮನವಿ ಮಾಡಿಕೊಂಡರು.
ಮುಖಂಡ ನಾಗರಾಜ ಬೀರನೂರು ಮಾತನಾಡಿ ನಗರಸಭೆಯ ಬಹು ದಿನದ ಸಮಸ್ಯಗೆ ಇಂದು ಸ್ಪಂಧಿಸಿ ಕುಡಿಯುವ ನೀರಿನ ಸವಲತ್ತು ಒದಗಿಸಿದೆ. ಅದಕ್ಕಾಗಿ ಮಕ್ಕಳು ನೀರಿನ್ನು ಮಿತವಾಗಿ ಬಳಕೆ ಮಾಡಬೇಕು. ಅಲ್ಲದೆ ಬಡಾವಣೆಯಲ್ಲೂ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಲು ಕರೆ ನೀಡಿದರು.
ಶಾಲಾ ಮುಖ್ಯೋಪದ್ಯಾಯನಿ ಸರೋಜಾ ಪ್ರಭುದಾಸ ಮಾತನಾಡಿ, ಕುಡಿಯುವ ನೀರು ಮತ್ತು ಪರಿಸರ ರಕ್ಷಣೆ ಮಾಡುವುದು ನಮ್ಮೆಲ್ಲತ ಕರ್ತವ್ಯವಾಗಿದೆ. ಇಂದು ಪರಿಸರ ನಾಶದಿಂದ ನೀರಿನ ಅಭಾವ ಎದರಿಸುತ್ತಿದ್ದೇವೆ. ಅದಕ್ಕಾಗಿ ಮರಗಳ ರಕ್ಷಣೆ ಮಾಡುವುದರ ಜೊತೆಗೆ ಪರಸಿದಲ್ಲಿ ಸ್ವಚತೆಯ ಬಗ್ಗೆ ಗಮನ ಹರಿಸಬೆಕು ಎಂದು ಹೇಳಿದರು.
ಸಮಾರಂಧ ಅಧ್ಯಕ್ಷತೆಯನ್ನು 10 ನೆಯ ವಾರ್ಡ ಸದಸ್ಯೆ ಮಹಾದೇವಮ್ಮ ಬೀರನೂರು ವಹಿಸಿದ್ದರು. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಅಶೋಕ ಚಟ್ಟರಕಿ, ಮುಖಂಡರಾದ ಶಂಕರ ಗೋಸಿ, ಸಹಾಯಕ ಅಭಿಯಂರಾದ ರವೀಂದ್ರ ಪಾಟೀಲ ಅತಿಥಿಗಳಾಗಿ ಆಗಮಿಸಿದ್ದರು.
ಯೋಜನಾ ಸಂಯೋಜಕ ದೇವಿಂದ್ರಪ್ಪ ಬೋಯಿನ್ ಪ್ರಾಸ್ತವಿಕ ಮಾತನಾಡಿದರು. ರೇಣುಕಾ ಮತ್ತು ಆವ್ವಮ್ಮ ಪ್ರಾರ್ಥನೆ ಹಾಡಿದರು, ಸಾಬಮ್ಮ ಸ್ವಾಗತಿಸಿದರೆ, ದೇವಮ್ಮ ಅಬ್ಬೆತುಮಕೂರು ನಿರೂಪಿಸಿದರು. ಸಯಬಣ್ಣ ವಂದಿಸಿದರು,