ಶಹಾಪುರ ಪ್ರೀಮಿಯರ್ ಲೀಗ್ ಆಟಗಾರರ ಆಯ್ಕೆ ಪ್ರಕ್ರಿಯೆಗೆ ಚಾಲನೆ
ಯುವಕರ ಸಾಮರಸ್ಯಕ್ಕೆ ಸ್ಪರ್ಧಾತ್ಮಕ ಕ್ರಿಕೆಟ್ ಕ್ರೀಡಾಕೂಟ ಮೇಲ್ಪಂಕ್ತಿ :
ಶಹಾಪುರ: ನಗರದ ಸರ್ವ ಯುವಕರನ್ನು ಒಗ್ಗೂಡಿಸಿ, ಸಾಮರಸ್ಯದ ವಾತಾವರಣ ನಿರ್ಮಾಣ ಮಾಡುವುದರ ಜೊತೆಗೆ ದೈಹಿಕ ಗಟ್ಟಿತನಕ್ಕೆ ಮತ್ತು ಉತ್ತಮ ಪ್ರತಿಭೆಯಿರುವ ಆಟಗಾರರನ್ನು ಗುರುತಿಸಲು, ಕ್ರಿಕೆಟ್ ಟೂರ್ನಾಮೆಂಟ್ ಮೇಲ್ಪಂಕ್ತಿಯಾಗಲಿ ಎಂದು ಹಿರಿಯ ಮುಖಂಡ ಶರಣಪ್ಪ ಸಲಾದಪುರ ತಿಳಿಸಿದರು.
ದಿ.ಬಾಪುಗೌಡ ದರ್ಶನಾಪುರ ಅವರ ಸವಿ ನೆನಪಿಗಾಗಿ ನಗರದ ಉತ್ಸಾಹಿ ಕ್ರೀಡಾಪಟುಗಳ ಎಂ.ಸಿ.ಸಿ ಗ್ರೂಪ್ ವತಿಯಿಂದ ಚಾಂದ್ ಪ್ಯಾಲೇಸ್ ನಲ್ಲಿ ಆಯೋಜಿಸಿದ್ದ ಶಹಾಪುರ ಪ್ರೀಮಿಯರ್ಲೀಗ್ (ಎಸ್ಪಿಎಲ್) ಆಟಗಾರರ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕ್ರಿಕೆಟ್ ಪಂದ್ಯವು ಕ್ರೀಡಾಕ್ಷೇತ್ರದಲ್ಲಿ ವಿಶೇಷತೆ ಮತ್ತು ಕ್ರಿಯಾಶೀಲವಾದ ಆಟವಾಗಿದ್ದು, ಇದು ವಿಶೇಷವಾದ ಸ್ಥಾನ ಪಡೆದಿದೆ. ಪ್ರತಿಯೊಬ್ಬರೂ ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಿಕೊಂಡು ಸ್ಪರ್ಧಾ ಮನೋಭಾವನೆಯಿಂದ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ನಗರದ poಲೀಸ್ ಠಾಣೆಯ ಪಿಐ ಹನುಮರೆಡ್ಡಪ್ಪ ಅವರು ಮಾತನಾಡಿ, ಕ್ರೀಡಾಕ್ಷೇತ್ರದಲ್ಲಿ ಕ್ರಿಕೆಟ್ ತನ್ನದೇಯಾದ ವೈಶಿಷ್ಟ್ಯ ಹೊಂದಿದ್ದು,
ಜನಮಾನಸದಲ್ಲಿ ಬೇರೂರಿದೆ. ಐಪಿಎಲ್ ಟೂರ್ನಮೆಂಟ್ ಆಟಗಾರರ ಆಯ್ಕೆ ಪ್ರಕ್ರಿಯೆ ನೋಡಿದರೆ, ಆಯೋಜಕರ ಕಾಳಜಿಗೆ ಸಾಕ್ಷಿಯಾಗಿದೆ. ಸಗರನಾಡಿನಿಂದ ಉತ್ತಮ ಕ್ರಿಕೆಟ್ ಪಟುಗಳು ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಮಿಂಚುವಂತೆ ಆಗಲಿ, ಪ್ರತಿಯೊಂದು ತಂಡಗಳ ಮಾಲೀಕರು ಉತ್ಸಾಹ ಪ್ರೇರಣೆಯಿಂದ ಪಾಲ್ಗೊಳ್ಳಲಿ, ಕ್ರೀಡಾಪಟುಗಳಿಗೆ protsaha ಸಲಹೆ ನೀಡಿ ಎಂದರು.
ಕಾರ್ಯಕ್ರಮವನ್ನು ಯುವ ಮುಖಂಡ ಅಮರೇಶಗೌಡ ದರ್ಶನಾಪುರ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು.
ವೇದಿಕೆ ಮೇಲೆ ಪಿಎಸ್ಐ ರಾಜಕುಮಾರ ಜಾಮಗೊಂಡ, ಯುವ ಮುಖಂಡ ರಾಯಪ್ಪ ಸಾಲಿಮನಿ, ಇಬ್ರಾಹಿಂ ಶಿರವಾಳ, ನಗರಸಭೆ ಸದಸ್ಯ ಸಿದ್ದಣ್ಣ ಆರಬೋಳ, ಸೋಮಲಿಂಗ ವಡೆಯರ, ಮಹಾದೇವಪ್ಪ ನಾಟೇಕಾರ, ಸೈಯದ ಬಾಬಾಪಟೇಲ, ಬಸವರಾಜ ಚನ್ನೂರ, ಮಹೇಶ ಮಡಿವಾಳಕರ, ಸಾಯಬಣ್ಣ ಪುರ್ಲೆ, ಮುಸ್ತಫಾ ಬಾಂಬೆಸೇಠ, ರಫಿಕ ಚೌದರಿ, ಸುನೀಲಕುಮಾರ, ಚನ್ನು ಪಾಟೀಲ, ಭಾsha ಪಟೇಲ, ಖಲೀಲ ಚಾಂದ, ಬಸವರಾಜ ದರಿಯಾಪುರ ಸೇರಿದಂತೆ ಇತರರಿದ್ದರು.
ಎಂ.ಸಿ.ಸಿ ಗ್ರೂಪ್ನ ಮುಖ್ಯಸ್ಥರಾದ ಮೌನೇಶ ನಾಟೇಕಾರ ಮತ್ತು 10 ತಂಡಗಳ ಮಾಲೀಕರು ಭಾಗವಹಿಸಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ಯುವ ಮುಖಂಡ ದೇವು ಭೀ.ಗುಡಿ ನಡೆಸಿಕೊಟ್ಟರು. ಎಂ.ಸಿ.ಸಿ ಗ್ರೂಪ್ನ ಅಭಿಮಾನಿ ಬಳಗದವರು, ಕ್ರಿಕೆಟ್ ಪಟುಗಳು ಇದ್ದರು. ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆ ಜರುಗಿತು.