ಪ್ರಮುಖ ಸುದ್ದಿ

ಬಾವಿಗೆ ಹಾರಿದ ಮೂವರಲ್ಲಿ ಇಬ್ಬರು ಬಚಾವ್, ಓರ್ವ ವ್ಯಕ್ತಿ ಸಾವು

ಗಣೇಶ ವಿಸರ್ಜನೆ ವೇಳೆ ಅವಘಡ : ವ್ಯಕ್ತಿ ಸಾವು

ಯಾದಗಿರಿಃ ಗಣೇಶ ವಿಸರ್ಜನೆ ವೇಳೆ ಅವಘಡ ಸಂಭವಿಸಿ ಬಾವಿಗಿಳಿದ ಮೂವರಲ್ಲಿ ಓರ್ವ ಮೇಲೇಳಲು ಆಗದೆ ನೀರಲ್ಲಿ ಮುಳುಗಿ ಅಸುನೀಗಿದ ಘಟನೆ ಶನಿವಾರ ರಾತ್ರಿ ತಾಲೂಕಿನ ಸೈದಾಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಶನಿವಾರ 9 ನೇ ದಿನದ ಗಣೇಶ ವಿಸರ್ಜನೆ ಸಂಭ್ರಮದಲ್ಲಿ, ಮುಳುಗಿದ್ದರು. ಇನ್ನೇನು ಗಣಪನನ್ನು ಪೂಜಿಸಿ ಬಾವಿಗೆ ಹಾಕಬೇಕೆಂದಾಗ ಮೂವರು ಸ್ನೇಹಿತರು ಬಾವಿಗೆ ಹಾರಿದ್ದರು ಎನ್ನಲಾಗಿದೆ. ಗಣಪನನ್ನು ನೀರಲಿ ಇಳಿಸುತ್ತಿದ್ದಂತೆ ಎಲ್ಲರೂ ಜೈಕಾರವು ಹಾಕಿದ್ದಾರೆ. ಆದರೆ ನೀರಲ್ಲಿ ಗಣಪನ ಮುಳುಗಿಸಿದ ಮೂವರಲ್ಲಿ ಓರ್ವ ವ್ಯಕ್ತಿ ಕಾಣದಾದಾಗ ಹುಡುಕಾಟ, ಚೀರಾಟ ಶುರುವಾಗಿದೆ.

ಅಷ್ಟರಲ್ಲಿ ನೀರಲ್ಲಿ ಮುಳುಗಿದ್ದ ಸೈದಾಪೂರ ಗ್ರಾಮದ ಖತಲಸಾಬ (32) ಮೃತಪಟ್ಟಿದ್ದ ತಿಳಿದು ಬಂದಿದೆ.
ಮೃತ ದುರ್ದೈವಿ ಖತಲಸಾಬ ಎಸ್.ಟಿ. ಸಮಾಜದ ಯುವ ಮುಖಂಡನಾಗಿ ಬೆಳೆಯತೊಡಗಿದ್ದ, ಸ್ನೇಹಿತರೆಲ್ಲರೊಡಗೂಡಿ ಗಣೇಶ ಪ್ರತಿಷ್ಟಾಪನೆಯನ್ನು ರೈಲ್ವೆ ಸ್ಟೇಷನ್ ಹತ್ತಿರ ಮಾಡಿದ್ದರು. ಮೆರವಣಿಗೆ ವಿಜೃಂಭಣೆಯಿಂದಲೆ ಸಾಗಿತ್ತು, ಕೊನೆಗಳಿಗೆಯಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ದುರ್ಘಟನೆ ಯಿಂದಾಗಿ ಗ್ರಾಮದ ಜನರಲ್ಲಿ ದುಖಃ ಮಡುಗಟ್ಟುವಂತೆ ಮಾಡಿದೆ.

ಹೀಗಾಗಿ ಗಣೇಶ ವಿಸರ್ಜನೆಗೆ ಮೂರು ಜನ ಬಾವಿಗೆ ಹಾರಿದ್ರು ಇಬ್ಬರು ಬಚಾವ, ಓರ್ವ ಸಾವನ್ನಪ್ಪಿದಂತಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಇಡಿ ರಾತ್ರಿ ಹುಡುಕಾಟ ನಡೆಸಿ ಶವ ಹೊರತೆಗೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಸೈದಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button