ಪ್ರಮುಖ ಸುದ್ದಿ

ಛತ್ರಪತಿ ಶಿವಾಜಿ ಆಡಳಿತ ಐತಿಹಾಸಿಕ ಚರಿತ್ರೆ ಪಡೆದಿದೆ- ಲಾಳಸಗೇರಿ

ರಾಜರಲ್ಲಿಯೇ ಆದರ್ಶ ರಾಜರೆಂದರೇ ಶಿವಾಜಿ ಮಹಾರಾಜರು- ಲಾಳಸಗೇರಿ

ಯಾದಗಿರಿ, ಶಹಾಪುರಃ ಛತ್ರಪತಿ ಶಿವಾಜಿ ಮಹಾರಾಜರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಲ್ಲ. ಇಡಿ ದೇಶಕ್ಕೆ ಬೇಕಾದಂತ ವ್ಯಕ್ತಿ. ಭಾರತಾಂಬೆಯ ವೀರಪುತ್ರರಾಗಿದ್ದರು, ಅವರ ರಾಜನೀತಿ ಅತ್ಯಂತ ಉತ್ಕøಷ್ಠವಾಗಿತ್ತು. ರಾಜಧರ್ಮವನ್ನು ಅತ್ಯುತ್ತಮವಾಗಿ ಪಾಲನೆ ಮಾಡಿದವರು, ರಾಜರಲ್ಲಿಯೇ ಆದರ್ಶ ರಾಜರು ಯಾರಾದರೂ ಇದ್ರೆ ಅದು ಶಿವಾಜಿ ಮಹಾರಾಜರು ಮಾತ್ರ ಎಂದು ಶಿಕ್ಷಕ ಲಕ್ಷ್ಮಣ ಲಾಳಸಗೇರಿ ಅಭಿಪ್ರಾಯ ವ್ಯಕ್ತಪಡಿಸಿದರು.

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ತಾಲೂಕು ಆಡಳಿತ ನಗರಸಭೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದರು.

ಶಿವಾಜಿ ಶೌರ್ಯ ಇಡಿ ಪ್ರಪಂಚಕ್ಕೆ ಗೊತ್ತಾಗಿದೆ. ಇತಿಹಾಸಕಾರರ ಬಾಯಿಯಿಂದ ಶಿವಾಜಿ ಅವರ ಹೋರಾಟ, ಅವರ ಶೌರ್ಯ ಧೀರತನ ಬಗ್ಗೆ ಮತ್ತು ತಮ್ಮ ರಾಜ್ಯದ ಮೇಲೆ ಬೇರೊಂದು ರಾಜರು ಸೈನ್ಯ ಸಮೇತ ದಂಡೆತ್ತಿ ಬಂದಾಗ ಹೋರಾಡಿದ ಧೀರತನ ಮೆಚ್ಚುವಂತಹದ್ದು, ಬಾಲ್ಯದಿಂದಲೇ ಆತ ತನ್ನ ತಾಯಿ ಹೇಳುತ್ತಿದ್ದ ಶೌರ್ಯತನದ ಕಥೆ,  ಅದರಲ್ಲಿಯೂ ನಡೆಯುತ ನಡೆಯುತ ತಪ್ಪು ಮಾಡುವವರನ್ನು ಕ್ಷಮಿಸು ಆದರೆ ತಪ್ಪನ್ನೆ ಜೀವನ ಮಾಡಿಕೊಂಡವರನ್ನು ಎಂದಿಗೂ ಕ್ಷಮಿಸದಿರು ಅಲ್ಲದೆ ಅಂತವರನ್ನು ನಾಶಮಾಡು ಎಂದು ತಾಯಿ ಜೀಜಾಬಾಯಿ ಹೇಳುತ್ತಿದ್ದ ಮಾತನ್ನು ಮಗ ಶಿವಾಜಿ ಚಾಚು ತಪ್ಪದೆ ನೆರವೇರಿಸುವ ಮೂಲಕ ಬೆಳೆದು ನಿಂತರು ಎಂದರೆ ತಪ್ಪಾಗಲಾರದು.

ಹಿಂದುಸ್ಥಾನದ ಸಂದಿಗ್ಧದ ಸ್ಥಿತಿಯಲ್ಲಿ ಶಿವಾಜಿ ಮಹಾರಾಜರು ಅಖಂಡ ಹಿಂದೂ ಸಾಮ್ರಾಜ್ಯವನ್ನು ಕಟ್ಟಲು ನಿಂತಿದ್ದರು, ಅವರ ಅವಿರತ ಶ್ರಮ ಸ್ವಾಭಿಮಾನದ ಕಿಚ್ಚು, ಶೂರತನದಿಂದ ಹಿಂದೂ ಹೃದಯ ಸಾಮ್ರಾಟನಾಗಿ ಇಂದಿಗೂ ಜೀವಂತವಾಗಿ ಉಳಿದಿದ್ದಾರೆ. ಇಂತಹ ಮಹಾತ್ಮರ ಸಾಧಕರ ಆದರ್ಶಗಳನ್ನು ಯುವಕರು ಬೆಳೆಸಿಕೊಳ್ಳಬೇಕಿದೆ.

ಶಿವಾಜಿ ಮಹಾರಾಜ, ರಾಜಗುರು, ಭಗತ್ ಸಿಂಗ್, ಸ್ವಾಮಿ ವಿವೇಕಾನಂದರ ಚರಿತ್ರೆಯನ್ನು ಓದಬೇಕು. ಅವತು ತೋರಿದ ಮಾರ್ಗವನ್ನು ನಾವೆಲ್ಲ ಕಂಡುಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಜೊತೆಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.

ತಾಲೂಕು ದಂಡಾಧಿಕಾರಿ ಜಗನ್ನಾಥರಡ್ಡಿ ಮಾತನಾಡಿ, ಶಿವಾಜಿ ಮಹಾರಾಜರು ಅಪ್ಪಟ ದೇಶಪ್ರೇಮಿಗಳು, ಅವರ ಆದರ್ಶವನ್ನು ಯುವಕರು ಮೈಗೂಡಿಸಿಕೊಳ್ಳಬೇಕು. ಯುವ ಸಮೂಹಕ್ಕೆ ಶಿವಾಜಿ ಮಹಾರಾಜರು ಮಾದರಿಯಾಗಿದ್ದಾರೆ. ಬಾಲ್ಯದಿಂದಲೇ ತಾಯಿಯವರ ಸಂಸ್ಕಾರದಿಂದ ಧೀರತನ, ಸ್ವಾಭಿಮಾನ, ದೇಶಪ್ರೇಮ ಬೆಳೆದು ಬಂದಿದೆ. ಹೀಗಾಗಿ ಅಪ್ರತಿಮ ದೇಶಭಕ್ತರಾಗಿ ಉತ್ತಮ ಸಮಾಜ ನಿರ್ಮಾಣಕ್ಕೆ ಅವರು ಶ್ರಮಿಸಿದರು. ಅವರ ರಾಜಧರ್ಮ, ರಾಜನೀತಿ ಪಾಲನೆ ಎಲ್ಲರಿಗೂ ಮಾದರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಬಸವರಾಜ ಶಿವಪೂಜೆ, ಗೋಪಾಲರಾವ್ ಬಾಸುತ್ಕರ್, ತಾಲೂಕು ಬಿಜೆಪಿ ಘಟಕ ಅಧ್ಯಕ್ಷ ರಾಜುಗೌಡ ಉಕ್ಕಿನಾಳ, ಸುಧೀರ ಚಿಂಚೋಳಿ, ಮಲ್ಲಯ್ಯ ಫಿರಂಗಿ ಉಪಸ್ಥಿತರಿದ್ದರು. ಮುಂಚಿತವಾಗಿ ಶಿವಾಜಿ ಅವರ ಭಾವಚಿತ್ರ ನಗರದ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ಜರುಗಿತು. ಸ್ವಕುಳ ಸಾಳಿ ಸಮಾಜದ ಅಧ್ಯಕ್ಷ ರಾಜು ಚಿಲ್ಲಾಳ, ನಗರಸಭೆÀ ಸದಸ್ಯರಾದ ಅಪ್ಪಣ್ಣ ದಶವಂತ, ಸತೀಶ ಪಂಚಬಾವಿ, ಶಿವಕುಮಾರ ತಳವಾರ, ಬಿಜೆಪಿ ಮುಖಂಡ ಗುರು ಕಾಮಾ, ಅರವಿಂದ ಉಪ್ಪಿನ್, ಸುನೀಲ ಮಾನು, ರಮೇಶ ನಗನೂರ, ಮಲ್ಲಿಕಾರ್ಜುನ ಚಿಲ್ಲಾಳ ಇತರರಿದ್ದರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button