ಪ್ರಮುಖ ಸುದ್ದಿ
ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆ, ಕರಾವಳಿ ಭಾಗ ಮುನ್ನೆಚ್ಚರಿಕೆ.?
ಬೆಂಗಳೂರಃ ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ನೈಋತ್ಯ ಮುಂಗಾರು ಚುರುಕಾಗಿದೆ.
ಹೊನ್ನಾವರ, ಮಂಗಳೂರು ಏರ್ಪೋರ್ಟ್, ಪಣಂಬೂರ್, ಅಂಕೋಲಾ, ಕಾರ್ಕಳ, ಶಿರಾಲಿ, ಚಿಂಚೋಳಿಯಲ್ಲಿ ಭಾರಿ ಮಳೆಯಾಗಿದೆ.
ಭಟ್ಕಳ, ಮುಲ್ಕಿ, ಉಪ್ಪಿನಂಗಡಿ, ಗೋಕರ್ಣ, ಕಾರವಾರ, ಕುಮಟಾ, ಸುಬ್ರಹ್ಮಣ್ಯ, ಸುಳ್ಯ, ಮಂಕಿ, ಪುತ್ತೂರು, ತಾಳಗುಪ್ಪ, ಕೊಟ್ಟಿಗೆಹಾರ, ಭಾಗಮಂಡಲದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು, ಮುನ್ಸೂಚನೆಯಾಗಿ ಯಲ್ಲೋ ಅಲರ್ಟ ಘೋಷಿಸಿದೆ.
ಉತ್ತರ ಒಳನಾಡಿನಲ್ಲಿ ಮೋಡಕವಿದ ವಾತಾವರಣ ಮುಂದುವರೆಯಲಿದ್ದು, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನದಲ್ಲಿ ಅಲ್ಪ ಪ್ರಮಾಣದ ಮಳೆಯಾಗಲಿದೆ.
ದಕ್ಷಿಣ ಒಳನಾಡಿನ ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರಗಿ, ರಾಯಚೂರು, ಯಾದಗಿರಿಯಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.