ಭೂಸುಧಾರಣಾ ಕಾಯ್ದೆ ತಿದ್ದುಪಡಿಗೆ ರೈತ ಮುಖಂಡ ಸಲಾದಪುರ ತೀವ್ರ ಆಕ್ಷೇಪ
ಶಹಾಪುರಃ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರಾಜ್ಯ ಸರ್ಕಾರ ಬಡ ಜನರ ಜಮೀನುಗಳನ್ನು ಕಾರ್ಪೋರೇಟ್ ಕಂಪನಿಗಳಿಗೆ, ಬಂಡವಾಳಶಾಯಿಗಳಿಗೆ ಭೂಮಿ ಧಾರೆ ಎರೆಯುವುದಾಗಿದೆ ಎಂದು ರೈತ ಮುಖಂಡ ಶರಣಪ್ಪ ಸಲಾದಪೂರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಭೂಸುಧಾರಣ ಕಾಯ್ದೆ ತಿದ್ದುಪಡಿ ತರುವ ರಾಜ್ಯ ಸರ್ಕಾರದ ನಿರ್ಧಾರದ ಆಕ್ಷೇಪಿಸಿ ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉಳ್ಳವರೆ ಭೂಮಿಯ ಮಾಲೀಕರು ಎಂಬ ಕಾನೂನು ತರಲು ಮುಂದಾಗಿದ್ದು, ರಾಜ್ಯದ ಬಡ ರೈತರ ಜಮೀನುಗಳನ್ನು ಅತ್ಯಂತ ಸರಳ ರೀತಿಯಲ್ಲಿ ಖರೀದಿಸಲು ಕಾರ್ಪೋರೇಟ್ ಕಂಪನಿಗಳಿಗೆ ಹೊಸ ಕಾಯ್ದೆ ಅವಕಾಶ ಕಲ್ಪಿಸಲಿದೆ. ಕೂಡಲೇ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ಕೈಬಿಡಬಿಡಬೇಕು. ಇಲ್ಲವಾದಲ್ಲಿ ರೈತರೊಂದಿಗೆ ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯತೆ ಉಂಟಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಕಾರ್ಪೋರೇಟ್ ಕಂಪನಿಗಳು ಸಣ್ಣ ರೈತರ ಹಾಗೂ ಮಧ್ಯಮ ವರ್ಗದ ರೈತರ ಜಮೀನುಗಳನ್ನು ಖರೀದಿಸಿ ಇಡಿ ಕೃಷಿಯನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳುವ ಮೂಲಕ ಸಣ್ಣ ಹಿಡುವಳಿದಾರರಿಗೆ ತೊಂದರೆಯಾಗಿ ಭೂಮಿ ಕಳೆದುಕೊಂಡು ಕೃಷಿ ಕೂಲಿ ಕಾರ್ಮಿಕರಾಗಿ ಕಾರ್ಪೋರೇಟರ್ ಕೆಲಗಡೆ ದುಡಿಯುವ ಸ್ಥಿತಿ ಬರಲಿದೆ. ಇದೊಂದು ಬಹು ದೊಡ್ಡ ಅನ್ಯಾಯ ಸಣ್ಣ ಅತಿ ಸಣ್ಣ ರೈತರಿಗೆ ಇದರಿಂದ ತುಂಬಾ ದೊಡ್ಡ ಪೆಟ್ಟು ಬೀಳಲಿದೆ. ಮುಂದೆ ಕೃಷಿ ಕಾರ್ಯಕ್ಷೇತ್ರವು ಕಾರ್ಪೋರೇಟರ್ ಕಂಪನಿಗಳ ತೆಕೆಕಗೆ ಜಾರಲಿದೆ. ಕೂಡಲೇ ರಾಜ್ಯ ಸರ್ಕಾರ ರೈತರ ಹಿತಾಸಕ್ತಿ ಮೇರೆಗೆ ಕಾಯ್ದೆ ತಿದ್ದುಪಡಿಗೊಳಿಸಬಾರದು ಎಂದು ಆಗ್ರಹಿಸಿದರು.
ಅಲ್ಲದೆ ಈ ಕಾಯ್ದೆ ಕೇವಲ ರೈತರಿಗೆ ಸಂಬಂದಿಸಿದ್ದು ಎಂದು ತಿಳಿಯದೆ ಇಡಿ ರಾಜ್ಯದ ಜನತೆ ಈ ಕಾಯ್ದೆಯ ವಿರುದ್ಧ ಉಗ್ರ ಹೋರಾಟಕ್ಕೆ ಇಳಿಯುವ ಅಗತ್ಯವಿದೆ ಎಂದು ಸಲಾದಪುರ ಮನವಿ ಮಾಡಿದರು.