ಪ್ರಮುಖ ಸುದ್ದಿ
ಅಮಿತ್ ಶಾ ಭೇಟಿಯಾಗಿಯೇ ಬಂದರಂತೆ ಸಿಎಂ ಬಿಎಸ್ ವೈ!
ಬೆಂಗಳೂರು: ಇಂದು ಮದ್ಯಾನದ ವೇಳೆಗೆ ನೂತನ ಸಚಿವರಿಗೆ ಖಾತೆ ಹಂಚಿಕೆ ಫೈನಲ್ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ನಿನ್ನೆ ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿ ಒಂದು ಗಂಟೆಕಾಲ ಚರ್ಚಿಸಿದ್ದೇನೆ. ಇಂದು ಖಾತೆ ಹಂಚಿಕೆ ಫೈನಲ್ ಮಾಡಲು ಹೈಕಮಾಂಡ್ ಸೂಚಿಸಿದೆ ಎಂದು ಅವರು ತಿಳಿಸಿದ್ದಾರೆ. ಆ ಮೂಲಕ ನಿನ್ನೆ ಸಿಎಂಗೆಅಮಿತ್ ಶಾ ಭೇಟಿ ಸಾಧ್ಯವಾಗಿಲ್ಲ ಎಂಬುದಕ್ಕೆ ತೆರೆ ಎಳೆದಿದ್ದಾರೆ.