
ಗಂಜಿ ಕೇಂದ್ರ ಹುಡುಕುತ್ತಿರುವ ಸಿದ್ರಾಮಯ್ಯ – ಜೋಷಿ ವಾಗ್ದಾಳಿ
ವಿವಿ ಡೆಸ್ಕ್ಃ ಸಿದ್ರಾಮಯ್ಯ ಇಟಲಿ ನಾಯಕರ ಮನವೊಲಿಸಿ ಮತ್ತೆ ಸಿಎಂ ಆಗುವ ಭ್ರಮೆಯಲ್ಲಿದ್ದಾರೆ ಎಂದು ಸಂಸದ ಪ್ರಹ್ಲಾದ್ ಜೋಷಿ ವಾಗ್ದಾಳಿ ನಡೆಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಓರ್ವ ಸಿಎಂ ಆಗಿದ್ದ ಸಿದ್ರಾಮಯ್ಯನವರನ್ನು 20-30 ಸಾವಿರ ಮತಗಳ ಅಂತರದಿಂದ ಮತದಾರರು ಸೋಲಿಸಿದ್ದಾರೆ ಅವರದ್ದೇ ಕ್ಷೇತ್ರದಲ್ಲಿ. ಈಗ ಪುನರ್ವಸತಿಗಾಗಿ, ಗಂಜಿ ಕೇಂದ್ರಕ್ಕಾಗಿ ಅವರು ಪರದಾಡುತ್ತಿದ್ದಾರೆ. ಹೀಗಾಗಿ ಹಾಗೆಲ್ಲ ಮಾತನಾಡುತ್ತಿದ್ದಾರೆ ಎಂದು ಕುಟುಕಿದರು.