ಪ್ರಮುಖ ಸುದ್ದಿ
ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು!
ಖಾಜಾ ಬಂದೇನವಾಜ ಜಾತ್ರೆ ವೇಳೆ ಗಾಳಿಯಲ್ಲಿ ಗುಂಡು
ವಿಜಯಪುರ: ಎರಡು ದಿನದ ಹಿಂದಷ್ಟೇ ನ್ಯಾಯಾಲಯದ ಆವರಣದಲ್ಲಿ ಪಾತಕಿ ಬಾಗಪ್ಪ ಹರಿಜನ ಮೇಲೆ ಗುಂಡಿನ ದಾಳಿ ನಡೆದಿತ್ತು. ಘಟನೆ ಬಳಿಕ ಮತ್ತೆ ಇಂಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ಗುಂಡಿನ ಸದ್ದು ಕೇಳಿದೆ. ಗ್ರಾಮದಲ್ಲಿ ಬಂದೇನವಾಜ್ ಜಾತ್ರೆ ಆಚರಣೆ ವೇಳೆ ಕಲ್ಲಪ್ಪ ಗುಡಚಿ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ.
ಪರಿಣಾಮ ವಿಜಯಪುರದ ಜನ ಮತ್ತೊಮ್ಮೆ ಬೆಚ್ಚಿಬಿದ್ದಿದ್ದಾರೆ. ಸದ್ಯ ಕುಡಿದ ಅಮಲಿನಲ್ಲಿದ್ದ ಕಲ್ಲಪ್ಪ ಬಡಚಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ವಿಷಯ ತಿಳಿದ ಚಡಚಣ ಪೊಲೀಸರು ಕಲ್ಲಪ್ಪನನ್ನು ವಶಕ್ಕೆ ಪಡೆದು ಪಿಸ್ತೂಲ್ ವಶ ಪಡಿಸಿಕೊಂಡಿದ್ದಾರೆ. ಕಲ್ಲಪ್ಪನ ಬಳಿ ಪರವಾನಿಗೆ ಪಡೆದ ಪಿಸ್ತೂಲ್ ಇತ್ತೆಂದು ತಿಳಿದುಬಂದಿದೆ.