ಪ್ರಮುಖ ಸುದ್ದಿ

ಓಕುಳಿ ಬಳಿಕ ಈಜಲು ಹೋಗಿ ಓರ್ವನ ಸಾವು

ಯಾದಗಿರಿಃ ಬಣ್ಣದೋಕುಳಿ ಬಳಿಕ ಸ್ನಾನಕ್ಕಾಗಿ ಬಾವಿಯೊಳಗೆ ಈಜಲೂ ಇಳಿದಿದ್ದ ಯುವಕನೋರ್ವ ನೀರಿನೊಳಗೆ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಸೈದಾಪುರ ಸಮೀಪದ ಕೊಂಡಾಪುರ ಗ್ರಾಮದಲ್ಲಿ ನಡೆದಿದೆ.

ರವಿಗೌಡ(38) ಮೃತ ದುರ್ದೈವಿ. ಈತ ಸೈದಾಪುರ ಗ್ರಾಮ ನಿವಾಸಿಯಾಗಿದ್ದು, ಶುಕ್ರವಾರ ಮದ್ಯಾಹ್ನ ಹೋಳಿ ಹಬ್ಬದಂಗವಾಗಿ ಬೆಳಗ್ಗೆಯಿಂದ ಸ್ನೇಹಿತರೊಡನೆ ಬಣ್ಣದಾಟವಾಡಿ ನಂತರ ಮದ್ಯಾಹ್ನ ಕೊಂಡಾಪುರ ಗ್ರಾಮದ ಬಾವಿಯೊಂದಕ್ಕೆ ಸ್ನಾನಕ್ಕಾಗಿ ತೆರಳಿದ್ದಾಗ ಘಟನೆ ನಡೆದಿದೆ. ಮೃತ ರವಿಗೌಡ ಕುಡಿದ ಅಮಲಿನಲ್ಲಿ ಬಾವಿಗೆ ಇಳಿದ ಪರಿಣಾಮ ನೀರಿನಿಂದ ಮೇಲೇಳಲಾಗದ ಕಾರಣ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಮೂಲಗಳು ತಿಳಿಸಿವೆ.

Related Articles

Leave a Reply

Your email address will not be published. Required fields are marked *

Back to top button