ಪ್ರಮುಖ ಸುದ್ದಿ

ಗ್ರಾಪಂ ಚುನಾವಣೆಃ ತಹಸೀಲ್ ಕಚೇರಿ ಎದುರು ಜನಜಂಗುಳಿ

ಗ್ರಾಪಂ ಚುನಾವಣೆ ಸ್ಪರ್ಧೆಗೆ ಆಕಾಂಕ್ಷಿಗಳು ಹೆಚ್ಚು, ಲೆಕ್ಕಿಸದ ಕೊರೊನಾ ಭೀತಿ

-ಮಲ್ಲಿಕಾರ್ಜುನ ಮುದ್ನೂರ.

yadgiri, ಶಹಾಪುರಃ ಗ್ರಾಮ ಪಂಚಾಯತಿ ಚುನಾವಣೆಗೆ ಈ ಭಾಗದಲ್ಲಿ ನಿನ್ನೆ ಸೋಮವಾರದಿಂದಲೇ ಆಯಾ ಗ್ರಾಮ ಪಂಚಾಯತ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಶುರುವಾಗಿದ್ದು, ನಗರ ಪ್ರದೇಶದ ಹೊಸ ತಹಶೀಲ್ ಕಚೇರಿ ಮತ್ತು ಹಳೇ ತಹಸೀಲ್ ಕಚೇರಿ ಮುಂಭಾಗದಲ್ಲಿ ಕೊರೊನಾ ನಿಯಮಾವಳಿಯನ್ನು ಮರೆತ ಜನ ಜಂಗುಳಿಯೇ ಸೇರಿರುವದು ಕಂಡು ಬಂದಿತು.

ಸದ್ಯ ಚುನಾವಣೆ ಅಮಲಿನಲ್ಲಿರುವ ಗ್ರಾಮೀಣ ಭಾಗದ ಜನರು ಕೊರೊನಾ ಮಹಾಮಾರಿ ಲೆಕ್ಕಸಿದೆ ನಿಯಮವಳಿಯನ್ನು ಪಾಲಿಸದೆ ತಿರುಗುತ್ತಿರುವದು ಕಂಡು ಬಂದಿತು. ನಗರದ ಹಳೇ ತಹಸೀಲ್ ಕಚೇರಿ ಮುಂಭಾಗದಲ್ಲಿ ವಾಹನ ಪಾರ್ಕಿಂಗ್‍ಗೂ ಜಾಗವಿಲ್ಲದೆ, ಜನಸ್ತೋಮವೇ ನೆರದಿರುವದು, ಗ್ರಾಪಂ ಸದಸ್ಯ ಸ್ಥಾನದ ಆಕಾಂಕ್ಷಿಯಾಗಿ ಸ್ಪರ್ಧಿಸಲು ಬೇಕಾದ ಕಾಗದ ಪತ್ರಗಳನ್ನು ತೆಗೆಸಿಲು ಜನ ಸೇರಿತ್ತು.

ಜಾತಿ ಪ್ರಮಾಣ ಪತ್ರ, ಶೌಚಾಲಯ ಇರುವ ದೃಢಿಕರಣ ಸೇರಿದಂತೆ ಇತರೆ ಚುಣಾವಣೆ ಕಾರ್ಯಚಟುವಟಿಕೆಯಲ್ಲಿ ಜನ ಮಗ್ನರಾಗಿರುವದು ಕಂಡಿತು.

ಈ ಮಧ್ಯ ಕೊರೊನಾ ಮಹಾಮಾರಿ ಮತ್ತು ಅತಿವೃಷ್ಠಿ ಜೊತೆಗೆ ಪ್ರವಾಹದಿಂದ ಸಂಕಷ್ಟಗಳನ್ನು ಎದುರಿಸುತ್ತಿದ್ದು ಇನ್ನೂ ಚೇತರಿಕೆ ಕಂಡಿಲ್ಲ ಅಷ್ಟರಲ್ಲಿ ಈ ಗ್ರಾಪಂ ಚುನಾವಣೆ ಬಂದೆರಗಿದ್ದು, ಯಾರೊಬ್ಬರು ಅದ್ಯಾವುದು ನೆನಪಿಲ್ಲವೆಂಬಂತೆ ಚುನಾವಣೆಗೆ ಸಿದ್ಧರಾಗುತ್ತಿರುವದು ಸೋಜಿಗವಾಗಿದೆ. ಯಥಾಪ್ರಜೆಗಳು ತಥಾ ರಾಜಾ ಎಂಬ ಮಾತು ನಿಜವೆನಿಸುತ್ತಿದೆ. ತಾಲೂಕಿನ ಸಗರ ಮತ್ತು ಗೋಗಿ ಗ್ರಾಮ ಪಂಚಾಯತ್ ನಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಸೆಡ್ಡು ಒಡಿಯಲಿದೆ ಎಂಬ ಮಾತುಗಳು ಜೋರಾಗಿ ಕೇಳಿ ಬರುತ್ತಿವೆ. ಎಲ್ಲೆಂದರಲ್ಲಿ ಗಾಪಂ ಚುನಾವಣೆಯದ್ದೆ ಮಾತುಗಳು. ಅಲ್ಲದೆ ವಿಶೇಷವೆಂದರೆ ಯುವಕರೇ ಈ ಬಾರಿ ಹೆಚ್ಚಿನ ಸ್ಪರ್ಧಾಳುಗಳಾದರೂ ಅಚ್ಚರಿ ಪಡುವಂತಿಲ್ಲ.

ಗ್ರಾಪಂ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಅದಕ್ಕೆ ಬೇಕಾದ ಸ್ಟಾಂಪ್ ಡ್ಯೂಟಿ, ನೋಟರಿ ಮತ್ತು ಶೌಚಾಲಯ ಇರುವ ದೃಢಿಕರಣ, ಜಾತಿ ಪ್ರಮಾಣ ಪತ್ರ ಮತ್ತು ನಾಮಪತ್ರ ತುಂಬಿಸಿಕೊಳ್ಳಲು ವಕೀಲರ ಹತ್ತಿರ ಕೆಲಸ ಇರುವ ಕಾರಣ ಸಹಜವಾಗಿ ಸೇರಿದ್ದೇವೆ. ನಮ್ಮ ಸ್ನೇಹಿತನನ್ನ ನಿಲ್ಲಿಸುತ್ತಿದ್ದೇವೆ. ಅದಕ್ಕೆ ಸಂಬಂದಪಟ್ಟ ಕಾಗದ ಪತ್ರಗಳನ್ನು ಸಿದ್ಧ ಪಡಿಸಲು ಬಂದಿದ್ದೇವೆ.
-ಕಳಸಪ್ಪಗೌಡ ಶಖಾಪುರ.

Related Articles

Leave a Reply

Your email address will not be published. Required fields are marked *

Back to top button