ಮೂಲ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ
ಆಂಗ್ಲ ಶಿಕ್ಷಕರ ನೇಮಕಕ್ಕೆ ಆಗ್ರಹ
ಬಿಇಓ ಕಡೆಯಿಂದ ಲಿಖಿತ ಭರವಸೆ, ಪ್ರತಿಭಟನೆ ವಾಪಸ್
ಯಾದಗಿರಿಃ ತಾಲೂಕಿನ ಹತ್ತಿಗೂಡೂರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಆಂಗ್ರ ಶಿಕ್ಷಕರ ನೇಮಕ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಇಲ್ಲಿನ ಶರಣರಡ್ಡಿ ಹತ್ತಿಗೂಡೂರ ನೇತೃತ್ವದಲ್ಲಿ ದಲಿತ ಸೇನೆ, ಶಾಲಾ ವಿದ್ಯಾರ್ಥಿಗಳು ಶಾಲೆಗೆ ಬೀಗ ಜಡಿದು ಮಂಗಳವಾರ ಪ್ರತಿಭಟನೆ ನಡೆಸಿದರು.
ಈ ಸಂರ್ದಭದಲ್ಲಿ ಮಾತನಾಡಿದ ಮುಖಂಡ ಶರಣರಡ್ಡಿ, 2003-04 ನೇ ಸಾಲಿನಲ್ಲಿ ಗ್ರಾಮದಲ್ಲಿ ಸರ್ಕಾರಿ ಪ್ರೌಢ ಶಾಲೆ ಆರಂಭಗೊಂಡಿದ್ದು, ಇಲ್ಲಿವರೆಗೂ ಆಂಗ್ಲ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ ಎಂದು ಆಕ್ರೋಶ ವ್ಯಕ್ತಡಪಿಸಿದರು.
ಶಾಲಾ ಆರಂಭವಾದಾಗಿನಿಂದ ಆಂಗ್ಲ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳ ಫಲಿತಾಂಶ ತೀರ ಕಳಪೆ ಮಟ್ಟದ್ದಾಗಿದೆ. ಆಂಗ್ಲ ವಿಷಯ ಬೋಧನೆ ಇಲ್ಲದೆ ಮಕ್ಕಳು ಹೇಗೆ ಪಾಸಾಗಲು ಸಾಧ್ಯ. ಆರಂಭದಿಂದಲೂ ಆಂಗ್ಲ ಬೋಧಕರನ್ನು ನೇಮಿಸದೆ ಶಿಕ್ಷಣ ಇಲಾಖೆ ಗ್ರಾಮದ ಮಕ್ಕಳ ಶೈಕ್ಷಣಿಕ ಮಟ್ಟ ಕುಸಿಯುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.
ಸರ್ಕಾರಿ ಶಾಲೆಯಲ್ಲಿ ಹಿಂದುಳಿದವರು, ಬಡವರು ದೀನ ದಲಿತರ ಮಕ್ಕಳೇ ಹೆಚ್ಚು ಪ್ರವೇಶ ಪಡೆಯವುದು. ಹೀಗಾಗಿ ಶಿಕ್ಷಣ ಅಧಿಕಾರಿಗಳು ಇತ್ತ ಗಮನ ಹರಿಸದೆ ಇರುವದರಿಂದ ಬಡ ಮಕ್ಕಳ ಶೈಕ್ಷಣಿಕ ಹದಗೆಟ್ಟಿದೆ.
ಇನ್ನಾದರೂ ಶಿಕ್ಷಣ ಇಲಾಖೆ ಕೂಡಲೇ ಆಂಗ್ಲ ಬೋಧಕರ ಸಮೇತ ಮೂಲ ಸೌಲಭ್ಯ ಕಲ್ಪಿಸಬೇಕು. ಶಾಲೆ ಸುತ್ತಲೂ ಸಮರ್ಪಕ ಕಂಪೌಂಡ್ ನಿರ್ಮಾಣ ಮಾಡಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಜೊತೆಗೆ ಶೌಚಾಲಯ ನಿರ್ಮಿಸಬೇಕೆಂದು ಆಗ್ರಹಿಸಿದರು.
ಮತ್ತು ನೀರಿನ ಟ್ಯಾಂಕನಿಂದ ಸೋರಿಕೆಯಾಗುವ ನೀರು ಶಾಲಾ ಆವರಣದಲ್ಲಿ ಸಂಗ್ರಹಗೊಂಡಿದ್ದು, ಅಪಾಯಕ್ಕೆ ಆಹ್ವಾನಿಸುತ್ತಿದೆ ಕೂಡಲೇ ಆವರಣ ಸ್ವಚ್ಛತೆಗೊಳಿಸಿ ಸುತ್ತಲೂ ಕಂಪೌಂಡ ನಿರ್ಮಿಸಬೇಕೆಂದು ಮನವಿ ಮಾಡಿದರು.
ಸ್ಥಳಕ್ಕೆ ಆಗಮಿಸಿದ ಬಿಇಓ ಬೇಡಿಕೆ ಕುರಿತು ಕೂಡಲೇ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಇಷ್ಟಕ್ಕೆ ಬಿಡದ ಪ್ರತಿಭಟನಾ ನಿರತರು ಬಿಇಓ ಮತ್ತು ಮುಖ್ಯಗುರುಗಳಿಂದ ಲಿಖಿತ ರೂಪದಲ್ಲಿ ಬೇಡಿಕೆ ಈಡೇರಿಸುವುದಾಗಿ ಬರೆದುಕೊಟ್ಟ ನಂತರ ಪ್ರತಿಭಟನೆ ವಾಪಸ್ ಪಡೆಯಲಾಯಿತು ಎಂದು ವಿದ್ಯಾರ್ಥಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಹೊನ್ನರಾಜ ನಾಟೇಕಾರ, ನಾಗಪ್ಪ ಗಂಟಿ, ಅಶೋಕ ನಾಟೆಕಾರ, ಮಹೇಶ ಮಹಾಮನಿ, ಸಂತೋಷ ಗೌಡ, ಶರಣು ಗ್ಯಾಂಗಿನ್, ಹಣಮಂತ ಹೊಸ್ಮನಿ, ನಾಗಪ್ಪ ಗಂಟಿ, ಮರೆಪ್ಪ ಗಂಟಿ, ಚಂದ್ರು ಪೂಜಾರಿ, ಮರೆಪ್ಪ ಪೂಜಾರಿ, ಸಿದ್ದು ನಾಟೇಕಾರ ಸೇರಿದಂತೆ ವಿದ್ಯರ್ಥಿಗಳು ಭಾಗವಹಿಸಿದ್ದರು.