ಗೋವಾ ಕಾಂಗ್ರೆಸ್ ನಾಯಕರ ಜೊತೆ ರಾಹುಲ್ ಮಾತುಕತೆ ನಡೆಸಲಿಃ ಬಿಜೆಪಿ ಆಗ್ರಹ
ಬೆಂಗಳೂರಃ ಮಹದಾಯಿ ವಿಚಾರ ಸಂಬಂಧಿಸಿದಂತೆ ಸಿಎಂ ಸಿದ್ರಾಮಯ್ಯ ಕರೆದ ಸರ್ವ ಪಕ್ಷ ಸಭೆಯಲ್ಲಿ ಬಿಜೆಪಿ ನಾಯಕರಾದ ಈಶ್ವರಪ್ಪ ಹಾಗೂ ಜಗಧೀಶ ಶೆಟ್ಟರ್ ಕಾಂಗ್ರೆಸ್ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಜರುಗಿತು.
ಬಿಜೆಪಿ ಪರಿವರ್ತನೆ ಯಾತ್ರೆ ಸಮಾರೋಪ ಸಮಾರಂಭ ಯಶಸ್ವಿಯಾಗಬಾರದು ಎಂಬ ಕಾರಣಕ್ಕೆ ಅಂದು ಕರ್ನಾಟಕ ಬಂದ್ ಆಚರಣೆಗೆ ಪ್ರೋತ್ಸಾಹಿಸಿದ್ದೀರಿ, ಇಂತಹ ಕೀಳುಮಟ್ಟ ರಾಜಕಾರಣ ಸರಿಯಲ್ಲ. ರೈತರನ್ನು ಕನ್ನಡಪರ ಸಂಘಟನೆಗಳನ್ನು ಕಟ್ಟಿಕೊಂಡು ಬಂದ್ ಗೆ ಬೆಂಬಲ ಸೂಚಿಸುವುದು ಸರಿಯಲ್ಲ. ಇದು ಆರೋಗ್ಯಕರ ರಾಜಕೀಯವಲ್ಲ ಎಂದು ಗುಡುಗಿದರು.
ನಮಗೂ ರಾಜಕೀಯ ಮಾಡಲು ಬರುತ್ತದೆ ಎಂದು ನೀರಾವರಿ ಸಚಿವ ಎಂ.ಬಿ.ಪಾಟೀಲರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಜರುಗಿತು.
ಅಲ್ಲದೆ ಮಹದಾಯಿ ವಿಚಾರ ಅಂಗವಾಗಿ ಅಮಿತ್ ಶಾ ಅವರು ಗೋವಾ ಬಿಜೆಪಿ ಮುಖಂಡರ ಜೊತೆ ಚರ್ಚಿಸಿದ್ದಾರೆ. ಅದರಂತೆ ರಾಹುಲ್ ಗಾಂಧಿ ಸಹ ಗೋವಾದ ಕಾಂಗ್ರೆಸ್ ಮುಖಂಡರ ಜೊತೆ ಮಾತುಕತೆ ನಡೆಸಬೇಕು ಎಂದು ಕೇಳಿದಾಗ, ಮುಖ್ಯಮಂತ್ರಿ ಸಿದ್ರಾಮಯ್ಯ ಅದು ಆಗಲ್ಲ ಆ ವಿಷಯ ಮಾತನಾಡಬೇಡಿ ಎಂದರು.
ತಕ್ಷಣ ಆಕ್ರೋಶಗೊಂಡ ಬಿಜೆಪಿ ನಾಯಕರು ಕೆಂಡಮಂಡಲವಾದರು. ಸಭೆಯಲ್ಲಿ ಗದ್ದಲ ಶುರುವಾಯಿತು.
ಮಹದಾಯಿಗೆ ಸಂಬಂಧಿಸಿದಂತೆ ಈಗಾಗಲೇ ಮುರೂ ರಾಜ್ಯದ ಮುಖ್ಯಮಂತ್ರಿ ಗಳ ಸಭೆ ಸಾಕಷ್ಟು ಬಾರಿ ಕರೆಯಲಾಗಿದೆ. ಯಾವುದೆ ನಿರ್ಧಾರಕೈಗೊಳ್ಳಲು ಆಗಿಲ್ಲ.
ಗೋವಾದಲ್ಲಿನ ಕಾಂಗ್ರೆಸ್ ನವರು ಒಂದು ಹನಿ ನೀರು ಕರ್ನಾಟಕಕ್ಕೆ ಬಿಡಲ್ಲ ಎಂದು ಹೇಳುತಿದ್ದಾರೆ, ಅವರ ಮನವೊಲಿಸಲು ರಾಹುಲ್ ಪ್ರಯತ್ನ ಅಗತ್ಯ ಆ ಕೆಲಸವನ್ನು ಮೊದಲು ಸಿಎಂ ಮಾಡಿಸಲಿ ಎಂದು ಒತ್ತಾಯಿಸಿದರು.
ಈಗಾಗಲೇ ಅಲ್ಲಿನ ಬಿಜೆಪಿಯವರ ಜೊತೆ ಅಮೀತ್ ಶಾ ಮಾತುಕತೆ ನಡೆಸಿದ್ದಾರೆ, ಈ ಮೊದಲು ಮನಮೋಹನಸಿಂಗ್ ಪ್ರಧಾನಿ ಇದ್ದಾಗಲೂ ಗೋವಾಕಾಂಗ್ರೆಸ್ಗಗಿರುತೀವ್ರ ತೀವ್ರವಿರೋಧ ವ್ಯಕ್ತಪಡಿಸಿತ್ತು. ಅದನ್ನೆ ಮುಂದುವರೆಸಿದೆ ಎಂದು ತಿಳಿಸಿದರು. ಈ ಹಿಂದಿನ ಸಭೆಯಲ್ಲಿ ಮಾತು ನೀಡಿದಂತೆ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿತು