ಪ್ರಮುಖ ಸುದ್ದಿ

ಸಿಎಂ ತವರಲ್ಲಿ ನಟ ಉಪೇಂದ್ರ ಸುದ್ದಿಗೋಷ್ಠಿ, ಸೂಪರ್ ಡೈಲಾಗ್ಸ್…

ಮೈಸೂರು: ರಾಜಕೀಯ ನನಗೆ ಉದ್ಯಮ ಅಲ್ಲ, ಸಮಾಜ ಸೇವೆಗಾಗಿ, ಆತ್ಮತೃಪ್ತಿಗಾಗಿ ಕ್ಯಾಶ್ ಲೆಸ್ ಮೂಲಕವೇ ಪ್ರಜಾಕೀಯ ಆರಂಭಿಸಿದ್ದೇನೆ ಎಂದು ನಟ ಹಾಗೂ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಮುಖ್ಯಸ್ಥ ಉಪೇಂದ್ರ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದರ ಹಿಂದೆ ಯಾವುದೇ ಸ್ಟ್ಯಾಟಜಿ ಇಲ್ಲ ಎಂದಿದ್ದಾರೆ. ನನಗೆ ನಾಯಕರು ಬೇಕಾಗಿಲ್ಲ, ಕಾರ್ಮಿಕರು ಬೇಕು. ನಾಯಕರು ಚುನಾವಣೆ ಸಂದರ್ಭದಲ್ಲಿ ಮಾತ್ರ ಪ್ರಚಾರಕ್ಕಾಗಿ ಶ್ರಮವಹಿಸುತ್ತಾರೆ. ಆದರೆ, ಕಾರ್ಮಿಕರು ಸದಾಕಾಲಾ ಕೆಲಸ ಮಾಡುತ್ತಾರೆ. ಹೀಗಾಗಿ, ನಮ್ಮದು ಕನ್ಫ್ಯೂಷಿಯಸ್ ಸಿನೆಮಾ ಅಲ್ಲ, ಥ್ರಿಲ್ಲರ್ ಸಿನೆಮಾನೂ ಅಲ್ಲ. ಅರ್ಥ ಆಗದೆ ಇರೋರಿಗೆ ಇದೊಂದು ಹಾರರ್ ಸಿನೆಮಾ ಎಂದು ಥೇಟ್ ಸಿನೆಮಾ ಶೈಲಿಯಲ್ಲಿ ನಟ ಉಪೇಂದ್ರ ಡೈಲಾಗ್ ಡರಲೆವರಿ ಮಾಡಿದ್ದಾರೆ.

ನನಗೆ ಓಟ್ ಮಾಡಿ ಎಂದು ಮತಭಿಕ್ಷೆಗೆ ಬಂದಿಲ್ಲ. ದೇಶ ಸೇವೆ ಮಾಡಲು ಬಂದಿದ್ದೇನೆ. ನೀವೂ ಗೆಲ್ಲಿಸಬೇಕು ಹೊರತು ನಾನೂ ಗೆಲ್ಲುತ್ತೇನೆ ಎಂದು ಹೇಳುತ್ತಿಲ್ಲ ಎಂದು ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button