ಪ್ರಮುಖ ಸುದ್ದಿ

ಆದಿತ್ಯರಾವ್ ಓರ್ವ ಉಗ್ರವಾದಿ- MLC ರವಿಕುಮಾರ

ಆದಿತ್ಯರಾವ್ ಓರ್ವ ಉಗ್ರವಾದಿ- MLC ರವಿಕುಮಾರ

ಬೆಂಗಳೂರಃ ಮಂಗಳೂರು ಏರ್ ಪೋರ್ಟ್ ನಲ್ಲಿ ಬಾಂಬ್ ಇಟ್ಟ ಪ್ರಕರಣ ವಿಚಾರ ಆರೋಪಿ ಆದಿತ್ಯರಾವ್ ಓರ್ವ ಉಗ್ರಗಾಮಿ ಎಂದು ಬಿಜೆಪಿ ಎಂಎಲ್ಸಿ ರವಿಕುಮಾರ ತಿಳಿಸಿದರು.

ನಗರದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಬಾಂಬ್ ಇಟ್ಟಿದ್ದ ವ್ಯಕ್ತಿಯ ಬ್ಯಾಗ್ನಲ್ಲಿ ದೊರೆತಿರುವದು‌ ಮಿಣಿ ಮಿಣಿ ಪೌಡರ್ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಗೇಲಿ ಮಾಡಿದ್ದರು.

ಕುಮಾರಸ್ವಾಮಿ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಬೇಕು. ಮಾತನಾಡುವ ವಿಷಯದ‌ ಮೇಲೆ ಗಾಂಭೀರ್ಯತೆ ಅರಿತು ಮಾತನಾಡಬೇಕು.

ರಾಜ್ಯದ ಪೊಲೀಸ್ ಇಲಾಖೆಯನ್ನು ಗೇಲಿ ಮಾಡುವಂತ ಹೇಳಿಕೆ ನೀಡಿರುವದು‌ ಶೋಭೆ ತರುವಂತದ್ದಲ್ಲ. ಆರೋಪಿ ಪೊಲೀಸರ ಪರಿಶೀಲನೆ ಪ್ರಕಾರ ಉಗ್ರವಾದಿಯಾಗಿದ್ದಾನೆ. ಅವನ‌ ಕ್ಯಾರೆಕ್ಟರ ಹೇಳುತ್ತಿದೆ ಎಂದರು.

Related Articles

Leave a Reply

Your email address will not be published. Required fields are marked *

Back to top button