ಪ್ರಮುಖ ಸುದ್ದಿ

ಶಾಲಾ ಬಿಟ್ಟ ಮಕ್ಕಳನ್ನು ಕರೆತರಲು ನೋಟ್‍ಬುಕ್, ಪೆನ್ ವಿತರಣೆ

ಶಹಾಪುರಃ ಮಕ್ಕಳನ್ನು ಶಾಲೆಗೆ ಕರೆತರಲು ಕರವೇ ಜಾಗೃತಿ

ಶಹಾಪುರಃ ತಾಲೂಕಿನ ಏವೂರ ತಾಂಡಾದಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆ ತರಲು ಕರವೇ ಕಾರ್ಯಕರ್ತರು ಮನೆ ಮನೆ ತಿರುಗಿ ಮಕ್ಕಳನ್ನು ಶಾಲೆಗೆ ಕರೆತರಲು ಜಾಗೃತಿ ಮೂಡಿಸಿದರು.

ಅಲ್ಲದೆ ಮನೆ ಮನೆ ತೆರಳಿ ಮಕ್ಕಳಿಗೆ ಉಚಿತ ನೋಟ್ ಬುಕ್ ಮತ್ತು ಪೆನ್ನು ನೀಡುವ ಮೂಲಕ ಶಾಲೆಗೆ ಬನ್ನಿ ಎಂದು ಸಂದೇಶ ನೀಡಿದರು.
ಅಲ್ಲದೆ ಪಾಲಕರಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಿದರು.

ಶಿಕ್ಷಣ ಪಡೆಯುವುದು ಮಕ್ಕಳ ಹಕ್ಕಿದೆ. ಅವರನ್ನು ಶಾಲೆ ಬಿಡಿಸಿ, ಕೂಲಿ ಹೊಲಕ್ಕೆ ಕರೆದುಕೊಂಡು ಹೋಗಬೇಡಿ. ಸಮರ್ಪಕ ವಯಸ್ಸಾದ ಮೇಲೆ ಅವರನ್ನು ದುಡಿಯಲು ಅಣಿಯಾಗಲು ಕರೆ ನೀಡಿ ಅಲ್ಲಿವರೆಗೂ ಅವರು ಶೈಕ್ಷಣಿಕವಾಗಿ ಕಲಿಯಲಿ. ಅಕ್ಷರಭ್ಯಾಸದಿಂದ ಅವರ ಭವಷ್ಯ ಉಜ್ವಲವಾಗಲಿದೆ. ಹಲವಾರು ಅವಕಾಶಗಳು ದೊರೆಯಲಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಂದಾಜು 15 ಮಕ್ಕಳನ್ನು ಶಾಲೆಗೆ ಮರಳಿ ಕರೆ ತಂದರು. ಶಾಲಾ ಮುಖ್ಯಗುರು ಬಾಬು ಲಮಾಣಿ, ಕರವೇ ಮುಖಂಡರಾದ ತುಳಜಾರಾಮ ಚವ್ಹಾಣ, ಕಿಶನ್ಮ ವಸಂತ, ಗೋಬು. ಅನೀಲ್ ಸೇರಿದಂತೆ ಅಶೋಕ ಇದ್ದರು.

Related Articles

Leave a Reply

Your email address will not be published. Required fields are marked *

Back to top button