ಪ್ರಮುಖ ಸುದ್ದಿ

ಬಿಜೆಪಿ ಅಧಿಕಾರ ಹಿಡಿದರೂ ಗಟ್ಟಿಯಾಗಿರುವ ಗ್ಯಾರಂಟಿ ಇಲ್ಲ – ಪೇಜಾವರಶ್ರೀ

ಕೊಪ್ಪಳ : ಯಾವ ಪಕ್ಷಕ್ಕೀ ಸರಳ ಬಹುಮತ ಬರದಿದ್ದಾಗ ಸರ್ವ ಪಕ್ಷಗಳು ಸೇರಿ ಅಧಿಕಾರ ನಡೆಸಬೇಕು ಎಂದು ನಗರದಲ್ಲಿ ಮಾಧ್ಯಮಗಳಿಗೆ ಪೇಜಾವರಶ್ರೀಗಳು ಪ್ರತಿಕ್ರಿಯಿಸಿದ್ದಾರೆ. ಸರಳ ಬಹುಮತಕ್ಕೆ ಯಾವುದೇ ಪಕ್ಷಕ್ಕೆ ಏಳೆಂಟು ಮತಗಳು ಕಡಿಮೆ ಆದ ಸಂದರ್ಭದಲ್ಲಿ ಸರ್ವ ಪಕ್ಷಗಳು ಸೇರಿ ಅಧಿಕಾರ ಮಾಡುವುದೇ ಒಳಿತು ಎಂದಿದ್ದಾರೆ.

ಯಾಕೆಂದರೆ ಸದ್ಯದ ಸ್ಥಿತಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೇರಿದರೂ ಗಟ್ಟಿಯಾಗಿರತ್ತೆ ಅನ್ನೋದು ಗ್ಯಾರಂಟಿ ಇಲ್ಲ. ಸರ್ಕಾರದಲ್ಲಿ ಎಲ್ಲರನ್ನೂ ಮಂತ್ರಿ ಮಾಡಲು ಆಗುವದಿಲ್ಲ . ಪರಿಣಾಮ ಸಹಜವಾಗಿಯೇ ಎಲ್ಲ ಪಕ್ಷಗಳಲ್ಲೂ ಅಸಮಾಧಾನ, ಅತೃಪ್ತತೆ ಇದ್ದೆ ಇರುತ್ತದೆ. ಹೀಗಾಗಿ, ರಾಷ್ಟ್ರಪತಿ ಆಡಳಿತ, ಮರು ಚುನಾವಣೆಗಿಂತ ಸರ್ವ ಪಕ್ಷಗಳು ಅಧಿಕಾರ ಮಾಡುವುದೇ ಒಳ್ಳೆಯದು ಎಂದು ಪೇಜಾವರಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button