ಭಾಗಪ್ಪ ಹರಿಜನ ಮೇಲೆ ಗುಂಡಿನ ದಾಳಿ
ಭಾಗಪ್ಪ ಹರಿಜನ ಮೇಲೆ ಗುಂಡಿನ ದಾಳಿ
ವಿಜಯಪುರ: ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ನಗರದ ನ್ಯಾಯಾಲಯಕ್ಕೆ ಆರೋಪಿ ಭಾಗಪ್ಪ ಹರಿಜನನನ್ನು ಕರೆ ತಂದ ಪೊಲೀಸ್ರು ನ್ಯಾಯಾಲಯದ ಆವರಣದಲ್ಲಿ ನಿಂತಿರುವಾಗ ಆರೋಪಿ ಭಾಗಪ್ಪನ ಮೇಲೆ ಅಪರಿಚಿತರಿಂದ ಮೂರ್ನಾಲ್ಕು ಸುತ್ತಿನ ಗುಂಡಿನ ದಾಳಿ ನಡೆದಿದೆ.
ಗುಂಡಿನ ಸದ್ದಿಗೆ ಬೆಚ್ಚಿ ಬಿದ್ದ ಸಾರ್ವಜನಿಕರು ಚಲ್ಲಾಪಿಲ್ಲಿಯಾಗಿ ಓಡಿ ಹೋಗಿದ್ದಾರೆ. ಭೀಮಾ ತೀರದ ಹಂತಕ ಗ್ಯಾಂಗ್ನವರಾದ ಭಾಗಪ್ಪ ಹರಿಜನ, ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ, ಅಲ್ಲದೆ ಒಂದು ಬಾರಿ ಜೈಲಿನಿಂದಲೂ ಆತ ತಪ್ಪಿಸಿಕೊಂಡು ಪರಾರಿಯಾಗಿದ್ದ ಎನ್ನಲಾಗಿದೆ.
ಆರೋಪಿ ಭಾಗಪ್ಪ ಹರಿಜನ ಭೀಮಾ ತೀರದ ಹಂತಕ ಕುಖ್ಯಾತಿ ಚಂದಪ್ಪ ಹರಿಜನನ ದೂರದ ಸಂಬಂಧಿಯೂ ಹೌದು ಎನ್ನಲಾಗಿದೆ. ಆರೋಪಿ ಭಾಗಪ್ಪ ಹರಿಜನ ಬಸವರಾಜ ಹರಿಜನ ಎಂಬಾತನನ್ನು ಕೊಲೆಗೈದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಲನಗರ ಪೊಲೀಸರು ವಿಜಯಪುರ ನ್ಯಾಯಾಲಯಕ್ಕೆ ಹಾಜರು ಪಡಿಸಲು ಬಂದಿದ್ದರು ಎನ್ನಲಾಗಿದೆ.
ಗುಂಡಿನ ದಾಳಿಗೊಳಗಾದ ಭಾಗಪ್ಪ ಹರಿಜನ ಈತನನ್ನು ತಕ್ಷಣ ನಗರದ ಬಿಎಲ್ಡಿಇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರಿಂದ ತಿಳಿದು ಬಂದಿದ್ದು. ಮೂರು ಸುತ್ತಿನ ಗುಂಡಿನ ದಾಳಿಯಿಂದ ಭಾಗಪ್ಪ ರಕ್ತಸಿಕ್ತದಲ್ಲಿ ಮುಳುಗಿದ್ದು, ಚಿಕಿತ್ಸೆ ಫಲಿಸುವುದೇ ಕಾದು ನೋಡಬೇಕು.
ಗುಂಡಿನ ದಾಳಿ ನಡೆಸಿದವರು ಯಾರು..? ಏಕೆ ಎಂಬುದು ತಿಳಿದು ಬಂದಿಲ್ಲ. ಈತ ಹತ್ತಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಈತನನ್ನು ಬಂಧಿಖಾನೆಯಿಂದ ಇಂದು ಪೊಲೀಸರು ಬಸವರಾಜ ಹರಿಜನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರು ಪಡಿಸಲು ಕರೆ ತಂದಿದ್ದಾಗ ಈ ಘಟನೆ ಜರುಗಿದೆ ಎಂದು ತಿಳಿದು ಬಂದಿದೆ.
ಭಾಗಪ್ಪ ಒಂದು ಕಾಲದಲ್ಲಿ ಚಂದಪ್ಪ ಹರಿಜನನ ಸಹಚರ, ಚಂದಪ್ಪ ಹರಿಜನನ ಶೂಟೌಟ್ ನಂತರ ಬದಲಾದ ದಿನಗಳಲ್ಲಿ ಚಂದಪ್ಪ ಹರಿಜನನ ಇತರೆ ಸಹಚರರು ಮತ್ತು ಈತನ ನಡುವೆ ವೈಷ್ಯಮ್ಯ ಉಂಟಾಗಿತ್ತು ಎಂದು ಸುದ್ದಿ ಕೇಳಿ ಬರುತ್ತಿದೆ. ಆ ಕಾರಣಕ್ಕಾಗಿ ಈತನ ಮೇಲೆ ಶೂಟೌಟ್ ನಡೆಸಿದವರು ಯಾರು ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ. ಒಟ್ಟಾರೆ ಮತ್ತೇ ಭೀಮಾ ತೀರದಲ್ಲಿ ಗುಂಡಿನ ಸದ್ದು ಕೇಳಿ ಬಂದಿದ್ದು ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿದೆ.
ಪ್ರಸ್ತುತ ಗುಂಡಿನ ದಾಳಿಗೊಳಗಾದ ಭಾಗಪ್ಪ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.