ಪ್ರಮುಖ ಸುದ್ದಿ
ಕಾಳಿ ನದಿಗೆ ಕಾಲು ಜಾರಿಬಿದ್ದ ನಾಲ್ವರ ದುರ್ಮಣ
ನಾಲ್ವರನ್ನು ಬಲಿ ತೆಗೆದುಕೊಂಡ ಕಾಳಿ
ದಾಂಡೇಲಿಃ ಹಳಿಯಾಳ ತಾಲೂಕಿನ ಬೊಮ್ಮನಹಳ್ಳಿ ಗ್ರಾಮ ಬಳಿ ಕಾಳಿ ನದಿಗೆ ಬಟ್ಟೆ ಹೊಗೆಯಲು ಇಳಿದಿದ್ದ ಒಂದೇ ಕುಟುಂಬದ ನಾಲ್ವರು ದುರ್ಮರಣ ಹೊಂದಿದ್ದಾರೆ.
ಸಂಜೆ ವೇಳೆ ಬಟ್ಟೆ ಒಗೆಯಲು ನದಿಗೆ ತೆರಳಿದ್ದ ಒಂದೇ ಕುಟುಂಬದ ಐವರಲ್ಲಿ ನಾಲ್ವರು ಕಾಲು ಜಾತಿ ನದಿ ಪಾಲಾದ ಘೋರ ಘಟನೆ ನಡೆದಿದೆ.
ಕೃಷ್ಣಾ ಧೂದಗಾವಡೆ, ಗಾಯತ್ರಿ ಧೂದಗಾವಡೆ, ಸತೀಶ ಬೀರುಗಾವಡೆ ಮತ್ತು ಧೂಳು ಗಾವಡೆ ನೀರಲ್ಲಿ ಮುಳುಗಿ ದುರಂತಕ್ಕೀಡಾಗಿದ್ದಾರೆ.
ಆದರೆ ಅದೃಷ್ಟವಶಾತ್ ರಮಾಬಾಯಿ ಎನ್ನುವರು ಬದುಕುಳಿದಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.



