ಪ್ರಮುಖ ಸುದ್ದಿ

ಯಕ್ಷಿಂತಿ ಗ್ರಾಮಗಳ 200 ಮನೆ ಸ್ಥಳಾಂತರಕ್ಕೆ ಮನವಿ

ಯಕ್ಷಿಂತಿ ಗ್ರಾಮದ 200 ಮನೆಗಳಿಗೆ ಶಾಶ್ವಾತ ಪರಿಹಾರಕ್ಕೆ ಜನರ ಆಗ್ರಹ

ಯಾದಗಿರಿ, ಶಹಾಪುರಃ ಅತಿವೃಷ್ಟಿ ಅಥವಾ ಅನಾವೃಷ್ಟಿ ಆದಾಗಲೆಲ್ಲ ತಾಲೂಕಿನ ಯಕ್ಷಿಂತಿ ಗ್ರಾಮದ ಸುಮಾರು ಎರಡು ನೂರು ಮನೆಗಳ ಸ್ಥಿತಿ ಗಂಭೀರವಾಗುತ್ತದೆ. ಪ್ರವಾಹ ಬಂದಾಗೊಮ್ಮೆ ಕೃಷ್ಣಾ ನದಿ ನೀರಿನಿಂದ ಇಲ್ಲಿನ ಜನರ ಸ್ಥಿತಿ ಅಧೋಗತಿಗೆ ತಲುಪುತ್ತದೆ.

ಪುನಃ ಇವರ ಬದುಕು ತಹಬಂದಿಗೆ ಬರಲು ಕನಿಷ್ಟ ಐದಾರು ತಿಂಗಳಬೇಕು. ಇಂತಹ ಸ್ಥಿತಿಯಲ್ಲಿ ಜನರಿದ್ದಾರೆ. ಪ್ರಸ್ತುತ ಪ್ರವಾಹದಿಂದ ಯಕ್ಷಿಂತಿ ಗ್ರಾಮದ ಸಾವಿರಾರು ಎಕರೆ ಜಮೀನು ಮುಳುಗಡೆಯಾಗಿದೆ. ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ.

ಮನೆಗಳೆಲ್ಲ ಕೃಷ್ಣಾ ನೀರಿನಲ್ಲಿ ಮುಳುಗಿದ್ದು, ಗ್ರಾಮದಲ್ಲಿ ಜಾನುವಾರುಗಳು ಅನಾಥವಾಗಿ ತಿರುಗುತ್ತಿವೆ. ಕೆಲವೊಬ್ಬರು ಯಕ್ಷಿಂತಿ ಗ್ರಾಮಸ್ಥರನ್ನು ಹತ್ತಿಗೂಡೂರ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದು, ಜಾನುವಾರುಗಳು ಮಾತ್ರ ಗ್ರಾಮದಲ್ಲಿ ಮೂಕರೋದನೆ ವ್ಯಕ್ತವಾಗುತ್ತಿದೆ.

ಕೆಲವೊಬ್ಬರು ಜಾನುವಾರುಗಳನ್ನು ಗ್ರಾಮದಲ್ಲಿ ಬಿಟ್ಟು ಹೊಡೆದಿದ್ದು, ಇನ್ನೂ ಕೆಲವರು ಹಸು, ಎಮ್ಮೆಗಳನ್ನು ಟ್ರ್ಯಾಕ್ಟರ್‍ನಲ್ಲಿ ಹೊತ್ತೊಯ್ದಿದ್ದಾರೆ. ಕೆಲವು ಗ್ರಾಮದಲ್ಲಿ ಸಂಚರಿಸುತ್ತಿದ್ದು, ಹಾಳು ಬಿದ್ದ ಗ್ರಾಮದಂತಾಗಿದೆ. ಮೂಕ ಪ್ರಾಣಿಗಳು ಸಮರ್ಪಕ ಆಹಾರವಿಲ್ಲದೆ ತಮ್ಮ ಮಾಲೀಕರು ಇಲ್ಲದೆ ನರಳುತ್ತಿವೆ.

ಕೂಡಲೇ ಗ್ರಾಮದಲ್ಲಿ ಕನಿಷ್ಟ 50 ಹಸುಕರುಗಳಿದ್ದ, ಅವುಗಳನ್ನು ತಾಲೂಕಾ ಆಡಳಿತ ರಕ್ಷಿಸಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಗ್ರಾಮದಲ್ಲಿ ಹಾವು, ಚೇಳು ಕ್ರಿಮಿಕೀಟಗಳು ಹೊಕ್ಕಿವೆ. ಪ್ರವಾಹ ಕಡಿಮೆಯಾದರು ಜನ ಜೀವನ ತಹಬಂದಿಗೆ ಬರಲು ತಿಂಗಳುಗಳೇ ಬೇಕಿದೆ. ಸುಮಾರು 200 ಮನೆಗಳು ಜಲಾವೃತವಾಗಿದ್ದು, ನೂರಾರು ಮನೆಗಳಿಗೆ ಕೀಲಿ ಹಾಕಿಕೊಂಡು ಗ್ರಾಮವನ್ನು ತೊರೆದಿದ್ದಾರೆ.

——————————

ನೆರೆ ಹಾವಳಿಃ ಶಾಶ್ವತ ಪರಿಹಾರಕ್ಕೆ ಆಗ್ರಹ

ಯಕ್ಷಿಂತಿ ಗ್ರಾಮಕ್ಕೆ ಪ್ರತಿ ಸಲ ಪ್ರವಾಹ ಬಂದಾಗ ಈ ಸ್ಥಿತಿ ಇದ್ದದೆ. ಹೀಗಾಗಿ ಜನರ ಬದುಕು ಮೂರಾಬಟ್ಟೆಯಾಗುತ್ತಿದೆ. ಜಿಲ್ಲಾ ಆಡಳಿತ ಕೂಡಲೇ ಗ್ರಾಮದ ಕನಿಷ್ಠ 200 ಮನೆಗಳನ್ನು ಸ್ಥಳಾಂತರಿಸಬೇಕು. ಸೂಕ್ತ ಜಮೀನು ಪಡೆದು ಅವರಿಗೆ ವಾಸಿಸಲು ಆಶ್ರಯ ಮನೆ ಸೌಲಭ್ಯ ಕಲ್ಪಿಸಬೇಕು. ಶಾಶ್ವತ ಪರಿಹಾರ ಅಗತ್ಯವಿದೆ. 200 ಮನೆಗಳ ಬಡತನ ರೇಖೆಗಿಂತ ಕೆಳಗಿನವರೇ ಆಗಿದ್ದು, ಕೂಡಲೇ ಅವರಿಗೆ ಶಾಶ್ವತ ಪರಿಹಾರ ಒದಗಿಸಬೇಕು.

ಮಲ್ಲಿಕಾರ್ಜುನ ಬಾಗಲಿ. ಮಾಜಿ ಗ್ರಾಪಂ ಅಧ್ಯಕ್ಷ ಯಕ್ಷಿಂತಿ.

Related Articles

Leave a Reply

Your email address will not be published. Required fields are marked *

Back to top button