ಪ್ರಮುಖ ಸುದ್ದಿ
ನಾಳೆ ಭಾರತ ಬಂದ್ -ಹಲವು ಸಂಘಟನೆ ನೇತೃತ್ವ
ಬೆಂಗಳೂರಃ ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ರಸ್ತೆ ಸುರಕ್ಷತೆ ಕಾಯ್ದೆ ವಿರೋಧಿಸಿ ಎಡಪಕ್ಷಗಳು ಜ.8 ರಿಂದ ಎರಡು ದಿನಗಳಕಾಲ ಕರೆ ನೀಡಿದ್ದ ಭಾರತ ಬಂದ್ ವೇಳೆ ಸಂಚಾರ ಅಸ್ತವ್ಯಸ್ತವಾಗುವ ಸಾಧ್ಯತ ಜಾಸ್ತಿ ಇದೆ.
ಕೆಎಸ್ಆರ್ಟಿಸಿ, ಬಿಎಂಟಿಸಿ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರು ಮತ್ತು ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕಾರ್ಮಿಕ ಮಹಾಮಂಡಳ, ಅಕ್ಷರದಾಸೋಹ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ಬಂದ್ ಗೆ ಬೆಂಬಲವ್ಯಕ್ತಪಡಿಸಿವೆ.
ಎಐಟಿಯುಸಿ, ಸಿಐಟಿಯು, ಐಎನ್ಟಿಯುಸಿ ಮತ್ತು ಎಲ್ಸಿಎಫ್ ಸೇರಿದಂತೆ ಇತರೆ ಸಂಘಟನೆಗಳು ಬಂದ್ ನೇತೃತ್ವವಹಿಸಲಿವೆ.
ಸರ್ಕಾರಿ ವಿವಿಧ ಇಲಾಖೆಗಳು ಸೇರಿದಂತೆ ಶಾಲಾ ಕಾಲೇಜುಗಳಿಗೆ ರಜೆ ಕುರಿತು ಸರ್ಕಾರ ಯಾವುದೇ ಘೋಷಣೆ ಮಾಡಿಲ್ಲ.
ಆಯಾ ಜಿಲ್ಲೆಯಲ್ಲಿ ಬಂದ್ ಯಾವ ರೀತಿ ಬಿಸಿ ತಟ್ಟಲಿದೆ ಎಂಬುದನ್ನು ಮನಗಂಡು ಜಿಲ್ಲಾಡಳಿತ ರಜೆ ಘೋಷಣೆ ಬಗ್ಗೆ ನಿಗಾವಹಿಸಿ ಆದೇಶ ನೀಡಲಿದೆ ಎಂದು ತಿಳಿದು ಬಂದಿದೆ.