ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು DC ಡಾ.ರಾಗಪ್ರಿಯ ಸೂಚನೆ
ಯಾದಗಿರಿ-ನಗರದ ರಂಗಮಂದಿರ, ಕನ್ನಡ ಭವನ, ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಜಿಲ್ಲಾ ಕ್ರೀಡಾಂಗಣಕ್ಕೆ ಜಿಲ್ಲಾಧಿಕಾರಿಗಳಾದ ಡಾ. ರಾಗಪ್ರಿಯ ಆರ್ ಅವರು ಅ.19ರ ಗುರುವಾರ ಭೇಟಿ ನೀಡಿ ಅಲ್ಲಿನ ಕಾಮಗಾರಿಗಳನ್ನು ಪರಿಶೀಲಿಸಿದರು.
ಮೊದಲಿಗೆ ರಂಗಮಂದಿರಕ್ಕೆ ಭೇಟಿ ನೀಡಿದ ಅವರು, ರಂಗ ಮಂದಿರ ಹಾಗೂ ಕನ್ನಡ ಭವನ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಗುಣಮಟ್ಟದ ಸಾಮಗ್ರಿಗಳನ್ನು ಬಳಕೆ ಮಾಡಬೇಕು, ನೀಲನಕ್ಷೆಯಂತೆಯೇ ಕಟ್ಟಡ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು, ಎರಡೂ ಭವನಗಳ ಸುತ್ತಮುತ್ತ ಸ್ಪಚ್ಚತಾ ಕಾರ್ಯಕೈಗೊಳ್ಳುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.
ನಂತರ ಜಿಲ್ಲಾ ಕ್ರೀಡಾಗಂಣಕ್ಕೆ ಭೇಟಿ ನೀಡಿದ ಅವರು, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಕಚೇರಿ ಕಟ್ಟಡದಲ್ಲಿ ಗೋಡೆಗಳು ಸಣ್ಣ ಸಣ್ಣ ಬಿರುಕುಗಳನ್ನು ಬಿಟ್ಟಿದ್ದು, ಕೂಡಲೇ ಅದನ್ನು ದುರಸ್ತಿ ಪಡಿಸುವಂತೆ ಸೂಚಿಸಿದರು.
ಜಿಲ್ಲಾ ಕ್ರೀಡಾಗಂಣಕ್ಕೆ ದಿನನಿತ್ಯ ಕ್ರೀಡಾಪಟುಗಳು ಹಾಗೂ ಮಾಯು ವಿಹಾರಕ್ಕೆಂದು ಬರುವ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು.
ಆದ ಕಾರಣ ಕಟ್ಟಡದ ಗೋಡೆಗಳ ತ್ವರಿತವಾಗಿ ದುರಸ್ತಿ ಪಡಿಸಬೇಕು, ಕ್ರೀಡಾಗಂಣದಲ್ಲಿ ಕೈಗೊಳ್ಳಲಾಗುವ ಕಾಮಗಾರಿಗಳಲ್ಲಿ ಉತ್ತಮ ಗುಣಮಟ್ಟದ ಕಟ್ಟಡ ಸಾಮಗ್ರಿಗಳೇ ಬಳಕೆಯಾಗಬೇಕು, ವಾಕಿಂಗ್ ಪಥ ಸೇರಿದಂತೆ ಮೈದಾನದಲ್ಲಿ ಮಳೆ ನೀರು ನಿಲ್ಲದಂತೆ ಕಾಮಗಾರಿಗಳನ್ನು ಕೈಗೊಂಡು ಸಾಧ್ಯವಾದಷ್ಟು ಬೇಗ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು, ಪ್ರತಿ ತಿಂಗಳು ಟಾಸ್ಕ್ ಪೋರ್ಸ್ ಸಭೆ ನಡೆಸಿ ಬಾಕಿ ಉಳಿದ ಕಾಮಗಾರಿಗಳ ಮಾಹಿತಿ ನೀಡುವಂತೆ ಅವರು ನಿರ್ದೇಶನ ನೀಡಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೊಸದಾಗಿ ನಿರ್ಮಾಣವಾದ ಕೋಣೆಗಳನ್ನು ವೀಕ್ಷಿಸಿದ ಜಿಲ್ಲಾಧಿಕಾರಿಯವರು ಕಾಲೇಜಿನ ಆವರಣವನ್ನು ಸ್ಪಚ್ಚವಾಗಿಟ್ಟುಕೊಳ್ಳಬೇಕು, ಸ್ಪಚ್ಚ ಪರಿಸರ ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯನ್ನು ಮೂಡಿಸುವ ಕಾರಣ ಅವರ ಕಲಿಕೆ ಉತ್ತಮಗೊಳ್ಳುತ್ತದೆ ಎಂದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ದೇವಿದಾಸ್ ಚವ್ಹಾಣ್, ಕೆಆರ್ಆಯ್ಡಿಎಲ್ ಅಧಿಕಾರಿ ಧನಜಯ್, ಕಾರ್ಯನಿರ್ವಾಹಕ ಅಭಿಯಂತರ ಸಲಿಂ ಶೇಖ, ಶಿವರಾಜ, ಹಾನಪ್ಪ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.