ಜಲಪಾತ ನೋಡಲು ಬಂದಿದ್ದ ಆರು ಜನ ನೀರುಪಾಲು!
ನಾಗರಮರಡಿ ಜಲಪಾತ ನೋಡಲು ಬಂದಿದ್ದ ಆರು ಜನ ನೀರುಪಾಲು
ಉತ್ತರಕನ್ನಡ: ಕಾರವಾರ ತಾಲೂಕಿನ ನಾಗರ ಮರಡಿ ಜಲಪಾತ ವೀಕ್ಷಿಸಲು ಗೋವಾ ಮೂಲದ ಪ್ರವಾಸಿಗರು ಎರಡು ತಂಡಗಳಲ್ಲಿ ಬಂದಿದ್ದರು. ಹರಿಯುವ ಜಲಪಾತದಲ್ಲಿ ಸಹಜವಾಗಿ ಏಂಜಾಯ್ ಮಾಡುತ್ತಿದ್ದರು. ಅದೇ ವೇಳೆ ಏಕಾಏಕಿ ಜಲಪಾತ ಉಕ್ಕಿಬಂದಿದೆ. ಭೋರ್ಗರೆಯ ತೊಡಗಿದೆ. ಪರಿಣಾಮ ಜಲಪಾತದಲ್ಲಿದ್ದ ನಾಲ್ವರು ಮಹಿಳೆಯರು, ಇಬ್ಬರು ಪುರುಷರು ನೀರಿನ ರಭಸ ಎದುರಿಸಿ ಹೊರಬರಲಾಗದೆ ನೀರು ಪಾಲಾಗಿದ್ದಾರೆ.
ಭೋರ್ಗರೆಯುವ ಜಲಪಾತದಲ್ಲಿ ನಾಲ್ವರು ಮಹಿಳೆಯರು ಒಬ್ಬರಿಗೊಬ್ಬರು ತಬ್ಬಿಕೊಂಡು ಕೆಲಕಾಲ ನಿಂತಿದ್ದಾರೆ. ದಡದಲ್ಲಿದ್ದವರು ಜೀವ ಕೈಯಲ್ಲಿಡಿದುಕೊಂಡು ನಿಂತ ಮಹಿಳೆಯರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದ್ರೆ, ಕೆಲಹೊತ್ತಿನಲ್ಲಿ ನೀರಿನ ರಭಸ ಎದುರಿಸಲಾಗದೆ ನಾಲ್ವರು ಮಹಿಳೆಯರು ನೀರಿನಲ್ಲಿ ಕೊಚ್ಚಿಕೊಂಡು ಹೋದ ದಾರುಣ ಘಟನೆ ನಡೆದಿದೆ.
ನೀರುಪಾಲದವರನ್ನನು ಗೋವಾ ಮೂಲದವರು ಎಂದು ಗುರುತಿಸಲಾಗಿದೆ. ನೀರು ಪಾಲಾದವರ ಪೈಕಿ ಇಬ್ಬರು ಮಹಿಳೆಯರು ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕ ದಳ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ನೂರಾರು ಜನ ಜಲಪಾತಕ್ಕಿಳಿದಿದ್ದರು. ಇನ್ನೂ ಕೆಲವರು ಜಲಪಾತದ ದಡದಲ್ಲಿ ಕಾಲ ಕಳೆಯುತ್ತಿದ್ದರು. ಜಲಪಾತದಕ್ಕೆ ಇಳಿದವರ ಪೈಕಿ ಹಲವರು ಅದೃಷ್ಟವಶಾತ್ ಬಚಾವಾಗಿದ್ದಾರೆ. ಕಳೆದ ನಾಲ್ಕು ದಿನಗಳಿಂದಲೂ ಕರಾವಳಿ ಭಾಗದಲ್ಲಿ ಮಳೆ ಸುರಿಯುತ್ತಿತ್ತು. ಆದರೆ, ಜಲಪಾತ ಸಹಜ ಸ್ಥಿತಿಯಲ್ಲೇ ಇತ್ತು ಇಂದು ಮಾತ್ರ ಏಕಾಏಕಿ ಜಲಪಾತ ಉಕ್ಕಿಬಂದು ಜನರ ಬಲಿಪಡೆದಿದೆ. ಸಾಕಷ್ಟು ಜನರನ್ನು ರಕ್ಷಿಸಲು ಯತ್ನಿಸಿದೆವು. ಕೆಲವರನ್ನು ಮಾತ್ರ ರಕ್ಷಣೆ ಮಾಡಲು ಸಾಧ್ಯವಾಯಿತು ಎಂದು ಸ್ಥಳೀಯರು ಹೇಳುತ್ತಾರೆ.