ಪ್ರಮುಖ ಸುದ್ದಿ

ಜಾರಕಿಹೊಳಿ ಹೇಳಿಕೆಗೆ ಕಾರಜೋಳ ಗರಂ

ಮೋದಿ ವಿರುದ್ಧ ಸುಳ್ಳು ಹೇಳಿಕೆಃ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಕಾರಜೋಳ

ಕಾಂಗ್ರೆಸ್ ನಾಯಕರು ಎಂದಿಗೂ ಸತ್ಯ ಹೇಳಲ್ಲ, ಹೇಳಿದಾಗ ಅವರಿಗೆ ಸಾವು ಬರಲಿದೆ – ಕಾರಜೋಳ ಆಕ್ರೋಶ

ಮೋದಿ ವಿರುದ್ಧ ಸುಳ್ಳು ಹೇಳಿಕೆಗೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಕಾರಜೋಳ

ವಿವಿ ಡೆಸ್ಕ್ಃ ಕಾಂಗ್ರೆಸ್ ಪಕ್ಷದ ನಾಯಕರು ಎಂದಿಗೂ ಸತ್ಯ ಹೇಳುವದಿಲ್ಲ ಆದರೆ ಹೇಳಿದ ದಿನ ಅವರ ಸಾವೇ ಸಂಭವಿಸಲಿದೆ ಎಂದು ಹಿರಿಯ ಸಚಿವ ಗೋವಿಂದ ಕಾರಜೋಳ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಚಿಕ್ಕೋಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರ ಹೀನ ಮನಸ್ಥಿತಿ ಅವರ ಹೇಳಿಕೆಯಿಂದಲೇ ಗೊತ್ತಾಗುತ್ತದೆ. ಮೋದಿಯವರು ತಾವೇ ಬಾಂಬ್ ಹಾಕಿ ಪಾಕಿಸ್ತಾನ ಹೆಸರೇಳುತ್ತಾರೆ ಎಂಬ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಹೇಳಿಕೆಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ನವರು ಸುಳ್ಳು ಹೇಳುವದರಲ್ಲಿ ನಿಸ್ಸೀಮರು, ಸಿದ್ರಾಮಯ್ಯ ಅವರು 7 ಕೆಜಿ ಅಕ್ಕಿ ನೀಡಿದ್ದಾರೆ ಸರಿ ಅದೇ ಮೋದಿಜೀಯವರು 10 ಕೆಜಿ ಅಕ್ಕಿ ನೀಡಿದರೂ ಪ್ರಚಾರ ಪಡೆಯಲಿಲ್ಲ. ಕಾಂಗ್ರೆಸ್ ನವರು ಸುಳ್ಳು ಹೇಳುವದರಿಂದ ಯಾವುದೇ ಒಳಿತಾಗಲ್ಲ. ಸತ್ಯವನ್ನು ಎಂದಿಗೂ ಓಡಿಸಲಾಗದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button