ಪ್ರಮುಖ ಸುದ್ದಿ

ಶುಕ್ರವಾರದಿಂದ ಮೂರು ದಿನ ಬ್ಯಾಂಕ್ ವಹಿವಾಟು ಸ್ಥಗಿತ ಈಗಲೇ ಎಚ್ಚೆತ್ತುಕೊಳ್ಳಿ.!

ನವದೆಹಲಿ : ಭಾರತೀಯ ಬ್ಯಾಂಕುಗಳ ಸಂಘದೊಂದಿಗೆ ಬ್ಯಾಂಕುಗಳ ವೇತನ ಪರಿಷ್ಕರಣೆ ಮಾತುಕತೆ ವಿಫಲವಾದ ಹಿನ್ನಲೆಯಲ್ಲಿ ಜನವರಿ 31 ಮತ್ತು ಫೆಬ್ರವರಿ 1 ರಂದು ದೇಶಾದ್ಯಂತ ಬ್ಯಾಂಕ್ ಮುಷ್ಕರ ನಡೆಯಲಿದೆ.

ಭಾರತೀಯ ಬ್ಯಾಂಕುಗಳ ಸಂಘ (ಐಬಿಎ) ದೊಂದಿಗಿನ ವೇತನ ಪರಿಷ್ಕರಣೆ ಮಾತುಕತೆ ವಿಫಲವಾದ ಹಿನ್ನೆಲೆ ಬ್ಯಾಂಕ್ ನೌಕರರ ಸಂಘಗಳು ಜನವರಿ 31 ಮತ್ತು ಫೆಬ್ರವರಿ 1 ರಂದು ಎರಡು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿವೆ.

ಬೇಡಿಕೆ ಈಡೇರದಿದ್ದರೆ ಏಪ್ರಿಲ್‌ 1ರಿಂದ ಅನಿರ್ಧಿಷ್ಟ ಕಾಲ ಮುಷ್ಕರ ಮುಂದುವರೆಸುವದಾಗಿ ಸಂಘದ ಪ್ರಮುಖರು ತಿಳಿಸಿದ್ದಾರೆ.

ಮುಷ್ಕರದಲ್ಲಿ ಎಐಬಿಇಎ, ಎಐಬಿಒಸಿ, ಎನ್‌ಸಿಬಿಇ, ಎಐಬಿಒಎ, ಬಿಎಫ್‌ಐ, ಐಎನ್‌ಬಿಇಎಫ್, ಐಎನ್‌ಬಿಒಸಿ, ಎನ್‌ಒಬಿಡಬ್ಲ್ಯೂ ಮತ್ತು ಎನ್ ಒಬಿಒ ಸೇರಿದಂತೆ ಒಂಬತ್ತು ಬ್ಯಾಂಕ್ ಒಕ್ಕೂಟಗಳು ಭಾಗವಹಿಸಲಿವೆ ಎಂದು ತಿಳಿಸಿವೆ.

ಅಲ್ಲದೆ ಶುಕ್ರವಾರ, ಶನಿವಾರ ಮುಷ್ಕರ ನಡೆಯಲಿದ್ದು ರವಿವಾರ ರಜೆ ಬೇರೆ ಇರುವದರಿಂದ ಮೂರು ದಿವಸ ಬ್ಯಾಂಕ್ ಗಳ‌ ಬಹುತೇಕ ವಹಿವಾಟು ಸ್ತಬ್ಧವಾಗಲಿದೆ.

ಇನ್ನೂ ಎಟಿಎಂ ಸಹ ಈ ಸಂದರ್ಭದಲ್ಲಿ ಹಣದ ಕೊರತೆ ಉಂಟಾಗುವ ಸಂಭವವಿದೆ. ಹೀಗಾಗಿ ಸಾರ್ವಜನಿಕರು ಈಗಲೇ ಎಚ್ಚೆತ್ತುಕೊಳ್ಳುವದು ಒಳಿತು.

Related Articles

Leave a Reply

Your email address will not be published. Required fields are marked *

Back to top button