Homeಜನಮನಪ್ರಮುಖ ಸುದ್ದಿ

ಕೊಡಗು : ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ರಾಜ್ಯ ಸರ್ಕಾರದಿಂದ 2.5 ಲಕ್ಷ, ಜೊತೆಗೆ ಹೊಸ ಮನೆ

ಕೊಡಗು: ನದಿಯ ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡಿರುವಂತ ರಾಜ್ಯದ ಜನತೆಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಅದೇ ರಾಜ್ಯ ಸರ್ಕಾರದಿಂದ ಪರಿಹಾರವಾಗಿ 2.5 ಲಕ್ಷ ಪರಿಹಾರ ವಿತರಿಸಲಿದೆ. ಅಲ್ಲದೇ ನೆರೆಯಿಂದ ಮನೆಯನ್ನು ಕಳೆದುಕೊಂಡವರಿಗೆ ಸರ್ಕಾರದಿಂದಲೇ ಹೊಸ ಮನೆಯನ್ನು ನಿರ್ಮಿಸಿಕೊಡಲಿದೆ.

ಈ ಕುರಿತಂತೆ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ಹಂಚಿಕೊಂಡಿದ್ದು, ನದಿ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ 2.5 ಲಕ್ಷ ಜೊತೆಗೆ ಹೊಸ ಮನೆ ಕಟ್ಟಿಸಿ ಕೊಡುವ ಕುರಿತು ಈ ಸಂಬಂಧ ಶೀಘ್ರವೇ ನಾವು ಆದೇಶವನ್ನು ಹೊರಡಿಸುತ್ತೇವೆ ಎಂದು ತಿಳಿಸಿದ್ದಾರೆ.

ಇನ್ನೂ ವಯನಾಡು ದುರಂತಕ್ಕೆ ಸಚಿವ ಕೃಷ್ಣೇಗೌಡ ಪ್ರತಿಕ್ರಿಯೆ ನೀಡಿದ್ದು, ಪರಿಸರದ ಮೇಲೆ ಆಗುತ್ತಿರುವ ಹಾನಿ ನಾವು ಗಮನಿಸುತ್ತಿಲ್ಲ. ಸಿಕ್ಕ ಸಿಕ್ಕ ಕಡೆ ರಸ್ತೆ ಮಾಡುತ್ತಿದ್ದೇವೆ ಮರ ಕಡಿಯುತ್ತೇವೆ. ನಮ್ಮ ಕಾಲಿಗೆ ನಾವೇ ಕೊಡಲಿ ಹಾಕುತ್ತಿದ್ದೇವೆ. ಇವೆಲ್ಲದರ ಸಂಘಟಿತ ಪ್ರತಿಫಲವೇ ವಯನಾಡಲ್ಲಿ ಆಗಿದೆ. ನಮ್ಮ ಆಸೆ ದುರಾಸೆಗಳಿಗೆ ನಾವು ಇತಿಮಿತಿ ಆಗಬೇಕಿದೆ ಎಂದರು.

ಎಲ್ಲಿ ದುರ್ಘಟನೆ ಆಗುತೆಂದು ಡಿಸಿಗಳು ಅಂದಾಜಿಸಬೇಕು ಅಂತಹ ಸ್ಥಳಗಳಲ್ಲಿ ಜನರನ್ನ ಬಲವಂತವಾಗಿ ತೆರವುಗೊಳಿಸಬೇಕು.ಜನ ಒಪ್ಪೋದಿಲ್ಲ ಅಂತ ಡಿಸಿಗಳು ನಿರ್ಲಕ್ಷ ಮಾಡಬಾರದು ನಮ್ಮ ಕೆಲವು ಡಿಸಿಗಳು ರಾಜಕಾರಣಿಗಳಿಗಿಂತ ಉದಾರ. ಪ್ರವಾಹ ದಾಟುವುದು, ಸೆಲ್ಫಿ ತೆಗೆಯುವರಿಗೆ ಲಾಠಿ ರುಚಿ ತೋರಿಸಿ ಎಂದು ಎಲ್ಲಾ ಜಿಲ್ಲಾ ಆಡಳಿತಕ್ಕೆ ಸೂಚಿಸಿದರು.

Related Articles

Leave a Reply

Your email address will not be published. Required fields are marked *

Back to top button