ಪ್ರಮುಖ ಸುದ್ದಿ
ಶಿವನಿಗೆ ಶರಣೆಂದ ಡಿ.ಕೆ.ಶಿವಕುಮಾರ.!
ತಿಹಾರನಿಂದ ನೇರ ಶಿವ ಮಂದಿರಕ್ಕೆ ತೆರಳಿದ ಶಿವ
ದೆಹಲಿಃ ತಿಹಾರ್ ಜೈಲ್ ನಿಂದ ಷರತ್ತು ಬದ್ಧ ಬೇಲ್ ಮೇಲೆ ಹೊರಗಡೆ ಬಂದ ಡಿ.ಕೆ.ಶಿವಕುಮಾರ ನೇರವಾಗಿ ಶಿವ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ನಂತರ ಅಲ್ಲಿಂದ ಸಹೋದರ ಡಿ.ಕೆ.ಸುರೇಶ ಅವರ ಮನೆಗೆ ತೆರಳಿದರು ಎನ್ನಲಾಗಿದೆ. ಷರತ್ತಬದ್ಧ ಜಾಮೀನು ನೀಡಿದ ಹೈಕೋರ್ಟ್ ಪ್ರಕರಣ ಕುರಿತು ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದಾಗ ಹಾಜರಾಗಬೇಕು. ಸಾಕ್ಷಿ ನಾಶ ಮಾಡಬಾರದು ಸೇರಿದಂತೆ ಹಲವು ಷರತ್ತು ವಿಧಿಸಿ ಜಾಮೀನು ನೀಡಿದೆ.