ಬಿಳ್ಹಾರಃ 23 ಕ್ಕೆ ಮಡಿವಾಳ ಮಾಚಿದೇವ ಪ್ರತಿಮೆ ಉದ್ಘಾಟನೆ
ಜೂನ್.23 ರಂದು ಮಾಚಿದೇವರ ಪ್ರತಿಮೆ ಪ್ರತಿಷ್ಠಾಪನೆ
ಯಾದಗಿರಿಃ ಇದೇ ಜೂನ್ 23 ರಂದು ಜಿಲ್ಲೆಯ ನೂತನ ವಡಿಗೇರಾ ತಾಲೂಕಿನ ಬಿರಾಳ ಗ್ರಾಮದಲ್ಲಿ ಮಡಿವಾಳ ಮಾಚಿದೇವ ಸಂಘ ನೇತೃತ್ವದಲ್ಲಿ ಮಡಿವಾಳ ಮಾಚಿದೇವರ ಮೂರ್ತಿ ಪ್ರತಿಷ್ಠಾಪನೆ ಸಮಾರಂಭ ನಡೆಯಲಿದ್ದು, ಮಡಿವಾಳ ಸಮುದಾಯ ಬಾಂಧವರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಬಿಳ್ಹಾರ ಗ್ರಾಮದ ಮಡಿವಾಳ ಮಾಚಿದೇವ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
ಅಂದು ವಿಜೃಂಭಣೆಯಾಗಿ ಮಡಿವಾಳ ಮಾಚಿದೇವ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ವಿಶೇಷ ಪೂಜೆ ನಡೆಯಲಿದೆ. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ಶ್ರೀಬ್ರಹ್ಮಾನಂದ ಸ್ವಾಮಿ ಕೋನಹಳ್ಳಿ ಮಠವಹಿಸಲಿದ್ದಾರೆ. ಸಾಲೊಟಗಿಯ ರೇವಣಸಿದ್ದಯ್ಯ ಶಾಸ್ತ್ರೀಗಳಿಂದ ಪ್ರವಚನ ನಡೆಯಲಿದೆ. ಮುಖಂಡ ತೇಜಪ್ಪಗೌಡ ರಾಚರಡ್ಡಿ ಅವರು ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಸಮಾಜದ ಅಧ್ಯಕ್ಷ ಸಿದ್ದೇಶ್ವರ ಮಡಿವಾಳ ಅಧ್ಯಕ್ಷತೆವಹಿಸಲಿದ್ದಾರೆ.
ಮುಖ್ಯ ಅತಿಥಿಳಾಗಿ ಜನಪ್ರತಿನಿಧಿಗಳು ಪ್ರಮುಖರು ಸೇರಿದಂತೆ ಸಮುದಾಯ ಮುಖಂಡರು ಜಿಲ್ಲಾ ಅಧ್ಯಕ್ಷರು ಉಪಸ್ಥಿತರಿರುವರು. ಕಾರಣ ಶಹಾಪುರ, ಸುರಪುರ ಮತ್ತು ಯಾದಗಿರಿ ಸೇರಿದಂತೆ ಇತರಡೆಯಿಂದ ಮಡಿವಾಳ ಸಮಾಜದ ಬಂಧುಗಳು ಆಗಮಿಸಿ ಕಾಯಕ್ರಮ ಯಶಸ್ವಿಗೊಳಿಸಬೇಕೆಂದು ಯುವ ಮುಖಂಡ ವಿಶ್ವನಾಥ ಮಲ್ಲಾಬಾದಿ ಮಡಿವಾಳಕರ್, ಸಿದ್ದು ಬಿ.ಮಡಿವಾಳ, ಬಸವರಾಜ ಮಡಿವಾಳರ ಮನವಿ ಮಾಡಿದ್ದಾರೆ.
——————-