ಪ್ರಮುಖ ಸುದ್ದಿ

ಪಂಚಾಯತಿಗೆ ಕಾಲಿಟ್ಟ ಕ್ವಾರಂಟೈನ್ 41 ಗ್ರಾಪಂಗಳಲ್ಲಿ 700 ಕಾರ್ಮಿಕರು

ಪಂಚಾಯತಿಗೆ ಕಾಲಿಟ್ಟ ಕ್ವಾರಂಟೈನ್
41 ಗ್ರಾಪಂಗಳಲ್ಲಿ 700 ಕ್ಕೂ ಅಧಿಕ ಕಾರ್ಮಿಕರು ಕ್ವಾರಂಟೈನ್‍ನಲ್ಲಿ
ಶಹಾಪುರಃ ಕೊರೊನಾ ಎಲ್ಲಡೆ ವ್ಯಾಪಿಸಿ ಮರಣ ಮೃದಂಗ ಬಾರಿಸುತ್ತಿರುವ ಹಿನ್ನೆಲೆ ದೇಶದಲ್ಲಿ ಲಾಕ್ ಡೌನ್ ವ್ಯವಸ್ಥೆ ಜಾರಿಯಾದಾಗಿನಿಂದ ಗುಳೆ ಹೋಗಿದ್ದ ಜನ ತಮ್ಮ ತಮ್ಮ ಸ್ವಗ್ರಾಮದತ್ತ ಮುಖ ಮಾಡಿ ಮರಳಿ ವಾಪಾಸ್ ಆಗಿದ್ದಾರೆ.

ಮರಳಿ ಸ್ವಗ್ರಾಮದತ್ತ ಬಂದ ಜನರನ್ನು ಆರೋಗ್ಯ ಸುರಕ್ಷತೆಯಿಂದ ಅವರನ್ನು ಲಾಕ್ ಡೌನ್ ನಿಯಮಾವಳಿ ಪ್ರಕಾರ 14 ದಿನಗಳ ಕಾಲ ಕ್ವಾರಂಟೈನ್ ಮಾಡಬೇಕಾಗಿದೆ. ಅದರಂತೆ ನಗರದ ಹತ್ತು ಹಲವು ವಸತಿ ನಿಲಯಗಳಲ್ಲಿ ಈಗಾಗಲೇ 1200 ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್ ಮಾಡಲಾಗಿದೆ.
ಆದರೆ ಇದೀಗ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಲಸಿಗ ಕಾರ್ಮಿಕರು ಆಗಮಿಸುತ್ತಿರುವ ಹಿನ್ನೆಲೆ ಆಯಾ ಸ್ವಗ್ರಾಮ ವ್ಯಾಪ್ತಿ ಅವರನ್ನು ಗ್ರಾಪಂ ಮಟ್ಟದಲ್ಲಿ ಕ್ವಾರಂಟೈನ್‍ಗೆ ವ್ಯವಸ್ಥೆ ಮಾಡಲಾಗಿದೆ.

ಗುಳೆ ಹೋಗಿದ್ದ ಕಾರ್ಮಿಕರು ಕೊರೊನಾ ವೈರಸ್ ಭಯದಿಂದ ವಿವಿಧ ರಾಜ್ಯ ಜಿಲ್ಲೆಗಳಲ್ಲಿ ತಳವೂರಿದ್ದ ವಲಸೆ ಕಾರ್ಮಿಕರು ಜೀವ ಭಯದಿಂದ ಮಕ್ಕಳು ಕುಟುಂಬ ಸಮೇತ ಸ್ವಗ್ರಾಮಕ್ಕೆ ಪ್ರವೇಶ ಪಡೆಯುತ್ತಿದ್ದಾರೆ. ತಾಲೂಕಿನಲ್ಲಿ ವಿವಿಧ ಹಳ್ಳಿ, ತಾಂಡಾ ನಿವಾಸಿ ಕುಟುಂಬಗಳನ್ನು ಕ್ವಾರಂಟೈನ್ ಕೇಂದ್ರಕ್ಕೆ ಒಳಪಡಿಸಲಾಗಿದ್ದು, ಒಟ್ಟು ಇಂದಿನವರೆಗೂ ಶಹಾಪುರ ತಾಲೂಕಿಗೆ 2014 ವಲಸಿಗ ಜನರನ್ನು ಕ್ವಾರಂಟೈನ್ ನಲ್ಲಿಡಲಾಗಿದೆ.

ಅದರಲ್ಲಿ 700ಕ್ಕೂ ಹೆಚ್ಚು ಜನರನ್ನು 41 ಗ್ರಾಪಂಗಳಲ್ಲಿ ಆಯಾ ಗ್ರಾಮವಾರು ಪಂಚಾಯತ್ ಮಟ್ಟದಲ್ಲಿ ಹಾಗೂ ಮೂಲ ಸೌಕರ್ಯಗಳ ಇರುವ ಶಾಲಾ ವಸತಿ ನಿಲಯಗಳನ್ನು ಗುರುತಿಸಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ ಎಂದು ತಹಿಶೀಲ್ದಾರ ಜಗನ್ನಾಥರಡ್ಡಿ ತಿಳಿಸಿದ್ದಾರೆ. ಪ್ರತಿ ಕ್ವಾರಂಟೈನ್ ಕೇಂದ್ರಕ್ಕೆ ನೋಡಲ್ ಅಧಿಕಾರಿಗಳಾಗಿ ಶಾಲಾ ಮುಖ್ಯಗುರುಗಳು, ವಸತಿ ಮೇಲ್ವಿಚಾರಕರು ಗ್ರಾಮ ಲೇಖಾಧಿಕಾರಿಗಳಿಗೆ ಜವಬ್ದಾರಿ ನೀಡಲಾಗಿದೆ. ವಲಸೆ ಬರುವ ಎಲ್ಲಾ ಕಾರ್ಮಿಕರಿಗೆ ನೇರವಾಗಿ ಗ್ರಾಪಂ ಕ್ವಾರಂಟೈನ್‍ಗೆ ಕಳುಹಿಸಲಾಗುತ್ತಿದೆ. ಸ್ಥಳೀಯ ಪ್ರಾಥಮಿಕ ಹಾಗೂ ಆರೋಗ್ಯ ಉಪ ಕೇಂದ್ರಗಳಲ್ಲಿ ಕಾರ್ಮಿಕರಿಗೆ ಆರೋಗ್ಯ ತಪಾಸÀಣೆ ಕಾರ್ಯ ನೆಡೆಯಲಿದೆ. ಅಲ್ಲದೆ ಕ್ವಾರಂಟೈನ್‍ನಲ್ಲಿರುವ ಯಾರಿಗಾದರೂ ಆರೋಗ್ಯ ಸಮಸ್ಯೆಗಳು ಉಂಟಾದಲ್ಲಿ ಅವರಿಗೆ ಐಸುಲೇಷನ್ ಕೇಂದ್ರಕ್ಕೆ ಒಳಪಡಿಸಲಾಗುತ್ತಿದೆ ಎಂದು ತಹಶೀಲ್ದಾರರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button