ಇಬ್ರಾಹಿಂಪುರ ಮುತ್ಯಾನ ಕೆರೆಯಲ್ಲಿ ನಡೆಯುವ ಕಾರ್ಯಕ್ರಮ ರದ್ದು
ಇಬ್ರಾಹಿಂಪುರ ಮುತ್ಯಾನ ಕೆರೆಯಲ್ಲಿ ನಡೆಯುವ ಕಾರ್ಯಕ್ರಮ ರದ್ದು
ಯಾದಗಿರಿಃ ಜಿಲ್ಲೆಯ ಶಹಾಪುರ ತಾಲೂಕಿನ ಇಬ್ರಾಹಿಂಪುರ ಅಬ್ದುಲ್ ಭಾಷಾ ಮುತ್ಯಾನ ಕೆರೆಗೆ ಗುರುವಾರ ಮತ್ತು ಸೋಮವಾರ ಭಕ್ತರ ದಂಡು ಹರಿಕೆ ತೀರಿಸಲು ಆಮಿಸುತ್ತಿದ್ದು, ಪ್ರಸ್ತುತ ಕೊರೊನಾ ಹಾವಳಿ ಇರುವದರಿಂದ ಮುತ್ಯಾನ ಕೆರೆಯಲ್ಲಿ ನಡೆಯುವ ಹರಕೆ ಕಾರ್ಯಕ್ರಮ ರದ್ದುಪಡಿಸಿ ಪೊಲೀಸರು ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ.
ಲಾಕ್ ಡೌನ್ ಸಡಿಲಿಕೆಯಾದ ಕಾರಣ ಗುರುವಾರ, ಸೋಮವಾರ ಸಾವಿರಾರು ಜನ ಸಂಖ್ಯೆ ಯಲ್ಲಿ ಭಕ್ತರು ಸೇರುತ್ತಿದ್ದು, ಯಾವುದೇ ಕೊರೊನಾ ತಡೆ ನಿಯಮಾವಳಿ ಪಾಲಿಸುತ್ತಿಲ್ಲ. ಕಾರಣ ಈ ಕೂಡಲೆ ಅಬ್ದುಲ್ ಭಾಷಾ ಮುತ್ಯಾನ ಕೆರೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ. ಯಾರಾದರೂ ಕಾನುನೂ ಮೀರಿ ಕಾರ್ಯಕ್ರಮ ಕೈಗೊಂಡಲ್ಲಿ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಲಾಕ್ ಡೌನ್ ಸಡಿಲಿಸಿದ ಮಾತ್ರಕ್ಕೆ ಕೊರೊನಾ ವೈರಸ್ ಹರಡುವಿಕೆ ಕಡಿಮೆಯಾದಂತೆ ಅಲ್ಲ. ಕೊರೊನಾ ವೈರಸ್ ಪ್ರಸ್ತುತ ಹೆಚ್ಚಾಗುತ್ತಿದ್ದು, ಸಮುದಾಯಕ್ಕೆ ಹರಡಿರುವ ಲಕ್ಷಣಗಳು ಕಂಡು ಬರುತ್ತಿವೆ. ಸಾರ್ವಜನಿಕರು ಈ ಕುರಿತು ಜಾಗೃತರಾಗಿರಬೇಕು. ಎಲ್ಲೂ ಜಾಸ್ತಿ ಜನ ಸೇರುವಂತಿಲ್ಲ. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸ್ಯಾನಿಟೈಸರ್ ಬಳಸಬೇಕು ಇಲ್ಲ ಆಗಾಗ ಸಾಬೂನಿಂದ ಕೈತೊಳೆಯಬೇಕು.
ವೃದ್ಧರು ಮತ್ತು ಮಕ್ಕಳು, ಅನಾರೋಗ್ಯಕ್ಕೊಳಪಟ್ಟವರು ಯಾರು ಹೊರಗಡೆ ಬಾರದಿರಲು ಸುಚಿಸಲಾಗಿದೆ. ಆದಾಗ್ಯು ಕೊರೊನಾ ತಡೆಗೆ ಪಾಲಿಸಬೇಕಾದ ನಿಯಮಗಳನ್ನು ಪಾಲಿಸದೆ, ಮುತ್ಯಾನ ಕೆರೆಯಲ್ಲಿ ಸಹಸ್ರಾರು ಭಕ್ತರು ಸೇರುತ್ತಿರುವದು ಸರಿಯಲ್ಲ. ಮುತ್ಯಾನ ಕೆರೆ ಪ್ರವೇಶ ರದ್ದು ಪಡಿಸಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.