ಪ್ರಮುಖ ಸುದ್ದಿ

ತಿಹಾರ ಜೈಲಿಗೆ ಭೇಟಿ ನೀಡಿದ ಸೋನಿಯಾ ಗಾಂಧಿ, ಮನಮೋಹನ ಸಿಂಗ್

ದೆಹಲಿಃ ಇಲ್ಲಿನ‌ ತಿಹಾರ ಜೈಲಿನಲ್ಲಿರುವ ಕಾಂಗ್ರೆಸ್ ಮುಖಂಡರಾದ ಚಿದಂಬರಂ ಮತ್ತು ಡಿ.ಕೆ.ಶಿವಕುಮಾರ ಅವರನ್ನು ಭೇಟಿಯಾಗಲು ಕಾಂಗ್ರೆಸ್ ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನಸಿಂಗ್‌ ಅವರನ್ನು ಭೇಟಿಯಾಗಲು ತಿಹಾರ ಜೈಲಿಗೆ ಆಗಮಿಸಿರುವದು ಕುತುಹಲಕ್ಕೆ ಕಾರಣವಾಗಿದೆ.
ಮೊದಲ‌ ವಿಚಾರಣಾಧೀನ‌ ಖೈದಿ ಸೆಲ್ ನಲ್ಲಿರುವ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರ‌ ಪಕ್ಕದ ಸೆಲ್‌ನಲ್ಲಿಯೇ ಕರ್ನಾಟಕದ ಕನಕಪುರ ಬಂಡೆ ಡಿಕೆಶಿ ಇದ್ದಾರೆ ಎನ್ನಲಾಗಿದೆ.

ವಿಚಾರಣಾಧೀನ ಖೈದಿಗಳ ಸೆಲ್ ನಲ್ಲಿ ಇರುವ ನಾಯಕರನ್ನು ಕಾಂಗ್ರೆಸ್ ನ‌ಪರಮೋಚ್ಛ ನಾಯಕರು ತೆರಳಿ‌ ಮಾತುಕತೆ ನಡೆಸುತ್ತಿರುವದು ರಾಷ್ಟ್ರೀಯಮಟ್ಟದಲ್ಲಿ‌ ಚರ್ಚೆಗೆ ಕಾರಣವಾಗಿದೆ ಎನ್ನಲಾಗಿದೆ.

ಕಾಂಗ್ರೆಸ್ ನ ಇಬ್ಬರು ನಾಯಕರು ಜೈಲುಪಾಲಾಗಿರುವ ಹಿನ್ನೆಲೆ ಅವರಿಗೆ ಧೈರ್ಯ ತುಂಬುವ ಹಿನ್ನಲೆ ಇಟ್ಟುಕೊಂಡು ಹೋಗಿರಬಹುದು ಅಥವಾ ಮಹತ್ವದ ವಿಚಾರಗಳನ್ನು ಅವರ ಜೊತೆ ಚರ್ಚಿಸಲು ಹೋಗಿರಬಹುದಾ ಅಥವಾ ಜೈಲಲ್ಲಿರುವ ನಾಯಕರನ್ನು ಭೇಟಿಯಾಗುವ ಮೂಲಕ ಜೊತೆಗಿದ್ದೇವೆ ಎಂಬ ಸಂದೇಶ ರವಾನಿಸಲು ಹೋಗಿದ್ದಾರೆಯೇ..?

ಅಷ್ಟಕ್ಕೂ ಈ ಇಬ್ಬರು ನಾಯಕರು ಜೈಲಿಗೆ ಹೋಗಿರುವದು ಅಕ್ರಮ ಆಸ್ತಿ ಪ್ರಕರಣಗಳಡಿ, ಯಾವುದೇ ಜನಪರ ಹೋರಾಟದಿಂದಲ್ಲ ಎಂಬುದು ಇಲ್ಲಿ ಗಮನಾರ್ಹ.

Related Articles

Leave a Reply

Your email address will not be published. Required fields are marked *

Back to top button