ಪ್ರಮುಖ ಸುದ್ದಿ

ಮಕ್ಕಳಲ್ಲಿರುವ ಪ್ರತಿಭೆ ಹೊರಸೂಸಲು ಬಸವರಾಜ ಪಾಟೀಲ್ ಸೇಡಂ ಕರೆ

ಮಕ್ಕಳ ಭವಿಷ್ಯ ಶಿಕ್ಷಕರ ಕೈಯ್ಯಲಿದೆ-ರಾಮಕೃಷ್ಣ

ಯಾದಗಿರಿಃ ದೇಶದ ಭವಿಷ್ಯ ರೂಪಿಸುವ ಜವಾಬ್ದಾರಿ ಜೊತೆಗೆ ಮಕ್ಕಳ ಉತ್ತಮ ವ್ಯಕ್ತಿತ್ವ ರೂಪಿಸುವ ಬಹುಪಾಲು ಜವಾಬ್ದಾರಿ ಶಿಕ್ಷಕರದ್ದೆ ಎಂದು ವಿದ್ಯಾಭಾರತಿ ಕರ್ನಾಟಕ ಬೆಂಗಳೂರಿನ ಕೋಶಾಧ್ಯಕ್ಷ ರಾಮಕೃಷ್ಣ.ಬಿ.ಕೆ ಹೇಳಿದರು.

ನಗರದ ಶ್ರೀ ಚರಬಸವೇಶ್ವರ ಗದ್ದುಗೆ ಕಲ್ಯಾಣ ಮಂಟಪದಲ್ಲಿ ವಿದ್ಯಾ ಭಾರತಿ ಕರ್ನಾಟಕದ ಯಾದಗಿರಿ ಜಿಲ್ಲಾ ಘಟಕ ಹಾಗೂ ಮಾತೃ ಛಾಯಾ ಕಿರಿಯ ಪ್ರಾಥಮಿಕ ಶಾಲೆ ಸಂಯುಕ್ತಾಶ್ರಯದಲ್ಲಿ ನಡೆದ ಶೈಕ್ಷಣಿಕ ಸಮ್ಮಿಲನ 2018ರ ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದರು.

ನಗು ಮುಖದೊಂದಿಗೆ ಬೋಧನೆ ಮಾಡುವ ಮೂಲಕ ಮಕ್ಕಳ ಭವಿಷ್ಯ ರೂಪಿಸುವವರು ಶಿಕ್ಷಕರು. ಹೀಗಾಗಿ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಸಂಬಂಧ ಗುರು ಶಿಷ್ಯರೆನ್ನುವದಕ್ಕಿಂತ ಅಗಾಧವಾಗಿರುತ್ತದೆ. ಮಕ್ಕಳ ಹಾಗೂ ಶಿಕ್ಷಕರ ಬಾಂಧವ್ಯ ಉತ್ತಮವಾಗಿದ್ದಲ್ಲಿ ಮಕ್ಕಳು ಶೈಕ್ಷಣಿಕವಾಗಿ ಬೆಳೆಯಲು ಸಹಕಾರಿಯಾಗಲಿದೆ.

ಕಾರಣ ವಿದ್ಯಾಭಾರತಿ ಕರ್ನಾಟಕ ಹಲವು ವರ್ಷಗಳಿಂದ ಶೈಕ್ಷಣಿಕ ವಲಯವನ್ನು ಸ್ಥಾಪಿಸಿ ಬದಲಾವಣೆ ತರುವ ಉದ್ದೇಶದಿಂದ ಶೈಕ್ಷಣಿಕ ಸಮ್ಮಿಲನದಂತಹ ಕಾರ್ಯಕ್ರಮಗಳನ್ನು ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲಿ ಆಯೋಜಿಸುತ್ತಾ ಬರುತ್ತಿದೆ. ಇದರ ಲಾಭವನ್ನು ಪ್ರತಿ ಶಾಲೆ ಹಾಗೂ ಶಾಲೆಯ ಶಿಕ್ಷಕರು ಪಡೆದುಕೊಳ್ಳಬೇಕೆಂದು ಹೇಳಿದರು.

ಸಮಾರೋಪ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ವಿಕಾಸ ಅಕಾಡೆಮಿ ಮುಖ್ಯಸ್ಥ ಬಸವರಾಜ ಪಾಟೀಲ ಸೇಡಂ, ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಓದಿನಲ್ಲಿ ಅತಿಹೆಚ್ಚು ಅಂಕಗಳಿಸುವುದರಲ್ಲಿಯೇ ಸೀಮಿತಗೊಳಿಸದೇ ಅವರಲ್ಲಿರುವ ಪ್ರತಿಭೆ ಹೊರತರಲು ಪ್ರಯತ್ನಿಸಬೇಕು.

ಶಿಕ್ಷಕರು ಶಾಲೆಯಲ್ಲಿ ಮಕ್ಕಳಿಗೆ ಪಾಠದ ಜೊತೆಗೆ ಕ್ರೀಡೆ, ಸಂಗೀತ, ಚಿತ್ರಕಲೆಯಂತಹ ಸಾಂಸ್ಕøತಿಕ ಚಟುವಟಿಕೆಯ ವಲಯದಲ್ಲಿ ತೊಡಗಿಸಬೇಕು. ದೇಶಭಕ್ತರ ಜೀವನ ಚರಿತ್ರೆ ಹೇಳುವುದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆಯಾಗುವುದಲ್ಲಿ ಯಾವುದೇ ಸಂದೇಹÀವಿಲ್ಲ. ಮಕ್ಕಳ ಮೇಲೆ ಪರಿಣಾಮಕಾರಿಯಾಗುವಂತೆ ಬೋಧಿಸುವ ಶಿಕ್ಷಕರ ಅಗತ್ಯತೆ ಇದೆ ಎಂದರು.

ವಸಂತ ವಿಶ್ವಕರ್ಮ ವಿಷಯ ಮಂಡನೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಿಪ್ಪಣ.ಟಿ.ಕ್ಯಾತನಾಳ ವಹಿಸಿದ್ದರು. ಕಾರ್ಯಕ್ರಮದ ಸಾನಿಧ್ಯವನ್ನು ಬಸವಯ್ಯ ಶರಣರು ವಹಿಸಿದ್ದರು. ಅತಿಥಿಗಳಾಗಿ ಮಕ್ಕಳ ಹಿರಿಯ ಸಾಹಿತಿ ಚಂದ್ರಕಾಂತ ಕರದಳ್ಳಿ, ಶರಣು ಪಾಟೀಲ, ಘೇವರಚಂದ ಜೈನ್, ಸಂಗನಬಸಪ್ಪ ಮುಡಬೂಳ, ಗುರಲಿಂಗಪ್ಪ ಸ್ವಾಮಿ, ವಿದ್ಯಾಭಾರತಿ ಯಾದಗಿರಿ ಜಿಲ್ಲಾ ಘಟಕ ಕಾರ್ಯದರ್ಶಿ ನರಸರಡ್ಡಿ ಶೇರಿ, ಅಮೃತರಾವ್ ಮುಲಗೆ, ಸಂಕುಲ ಪ್ರಮುಖ ವಿರೇಶ ಉಳ್ಳಿ, ಬಸವರಾಜ ಹೈಯ್ಯಾಳ, ಅಮರೇಶ ಪಾಟೀಲ, ಸುಜಾತಾ ಬಡಿಗೇರ, ಸಂತೋಷ, ಮೌನೇಶ, ಗುರುಬಸಯ್ಯ ಗದ್ದುಗೆ ಭಾಗವಹಿಸಿದ್ದರು. ನಿಂಗಣ್ಣ ತೆಕರಾಳ ಸ್ವಾಗತಿಸಿ ವಂದಿಸಿದರು. ಗೌರಿ.ಕೆ.ಪೂಜಾರಿ ಪ್ರಾರ್ಥಿಸಿದರು.

Related Articles

Leave a Reply

Your email address will not be published. Required fields are marked *

Back to top button