ಪ್ರಮುಖ ಸುದ್ದಿ

ಮಾಸಿಕ ಸಂಬಳ‌ ಸಿಎಂ ಪರಿಹಾರ ನಿಧಿಗೆ‌ ನೀಡಿದ‌ ರಜನಿಕಾಂತ ಶ್ರೀಂಗೇರಿ

ಮಾಸಿಕ ಸಂಬಳ‌ ಸಿಎಂ ಪರಿಹಾರ ನಿಧಿಗೆ‌ ನೀಡಿದ‌ ರಜನಿಕಾಂತ ಶ್ರೀಂಗೇರಿ

ಶಹಾಪುರಃ ಕೊರೊನಾ ಮಹಾಮಾರಿಯಿಂದ ರಾಜ್ಯ ತಲ್ಲಣಿಸಿದ್ದು, ಕೊರೊನಾ ಸೋಂಕು ತಡೆ ಹಿನ್ನೆಲೆ ಶ್ರಮಿಸುತ್ತಿರುವ ರಾಜ್ಯ ಸರ್ಕಾರದ ಸಿಎಂ ಪರಿಹಾರ ನಿಧಿಗೆ ಇಲ್ಲಿನ ನಗರಸಭೆ ಸಹಾಯಕ ಅಭಿಯಂತರ ರಜನಿಕಾಂತ ಶ್ರೀಂಗೇರಿ ಅವರು‌ ತಮ್ಮ ಮಾರ್ಚ್ ತಿಂಗಳ‌ 46,197 -‌ 00 ರೂ. ಯನ್ನು ಸಿಎಂ ಪರಿಹಾರ ನಿಧಿಗೆ‌ ದೇಣಿಗೆಯಾಗಿ ನೀಡಬೇಕೆಂದು ನಗರಸಭೆ ಪೌರಾಯುಕ್ತ ಬಸವರಾಜ ಶಿವಪೂಜೆ ಅವರಿಗೆ ಲಿಖಿತ ರೂಪದ‌ ಮನವಿ ಪತ್ರವನ್ನು ಸಲ್ಲಿಸಿದರು.

ಜಗತ್ತಿನಾದ್ಯಂತ ಕೊರೊನಾ ಹಾವಳಿಯಿಂದ ತತ್ತರಿಸಿದೆ. ರಾಜ್ಯದಲ್ಲೂ ಕೊರೊನಾ ಸೋಂಕು ಹಬ್ಬುತ್ತಿದ್ದು ಇಡಿ ರಾಜ್ಯ ತಲ್ಲಣಗೊಂಡಿದ್ದು, ಸೋಂಕು ತಡೆಗೆ ಶ್ರಮಿಸುತ್ತಿರುವವರ ಆರೋಗ್ಯ ಕಡೆ ಗಮನಹರಿಸಬೇಕಿದೆ.‌ ತಿಂಗಳುಗಟ್ಟಲೆ ಲಾಕ್ ಡೌನ್ ಆದ ಹಿನ್ನೆಲೆ‌ ರಾಜ್ಯ, ದೆಶದ  ಆರ್ಥಿಕ ಸ್ಥಿತಿ ಅವಲೋಕನ ಮಾಡಿರುವ ಹಿನ್ನೆಲೆ‌ ಕೈಲಾದ ಸಹಾಯ ಸಹಕಾರ ನೀಡಬೇಕೆನಿಸಿತು. ಅದಕ್ಕೆ ನನ್ನ ದುಡಿಮೆಯ ತಿಂಗಳ ಮಾಸಿಕ ವೇತನವನ್ನು ನಾನಿ ಪರಿಹಾರ ನಿಧಿಗೆ ನೀಡುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಈ‌ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಬಸವರಾಜ ಶಿವಪೂಜೆ, ಶಿವಕುಮಾರ ಸಜ್ಜನ್, ನಗರಸಭೆ ಸದಸ್ಯರು,‌ ಮತ್ತು ಸಿಬ್ಬಂದಿನ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button