ಅಂಕಣ

ಒಳ್ಳೆಯತನದ ಮುಖವಾಡ ತುಂಬಾ ಅಪಾಯಕಾರಿ

ಒಳ್ಳೆಯತನದ ಮುಖವಾಡ ತುಂಬಾ ಅಪಾಯಕಾರಿ

 -ರಾಘವೇಂದ್ರ ಹಾರಣಗೇರಾ

ನಾನು ಸಮಾಜಶಾಸ್ತ್ರದ ವಿದ್ಯಾರ್ಥಿಯಾಗಿ, ಅದ್ಯಾಪಕನಾಗಿ ಅದ್ಯಯನ, ಅದ್ಯಾಪನ, ಬರಹದೊಂದಿಗೆ ಕುಟುಂಬ, ನೆರೆಹೊರೆ, ಗೆಳೆಯರು, ಸಹೋದ್ಯೋಗಿಗಳು, ವಿವಿಧ ಸಂಬಂಧಗಳು, ಸಮುದಾಯ, ಸಮಾಜದೊಂದಿಗೆ ಬೆರೆಯುತ್ತಾ ಎಲ್ಲರ ದೃಷ್ಟಿಕೋನಗಳನ್ನು ಅವಲೋಕಿಸುತ್ತಾ ನನ್ನ ದೃಷ್ಟಿಕೋನದಂತೆ ನಾನು ಬದುಕು ಸಾಗಿಸಿದವನು.

ಸಾಮಾಜಿಕ ಬದುಕಿನಲ್ಲಿ ಮನುಷ್ಯ ಪ್ರತಿಯೊಬ್ಬರಿಂದಲೂ ಅನೇಕ ರೀತಿಯ ಪಾಠ ಕಲಿಯುತ್ತಾ ಸುಖ-ಸಂತೋಷ, ಕಷ್ಟ-ನಷ್ಟ, ದುಃಖ- ದುಮ್ಮಾನಗಳನ್ನು ಅನುಭವಿಸುತ್ತ ಜೀವಿಸುತ್ತಿರುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯ ವರ್ತನೆ, ಆಚಾರ, ವಿಚಾರ, ರೀತಿ ನೀತಿ ಬೇರೆ ಬೇರೆ ರೀತಿಯಾಗಿರುತ್ತವೆ. ಅವರು ಬೆಳೆದು ಬಂದ ಕುಟುಂಬದ, ಸಾಮಾಜಿಕ, ಸಾಂಸ್ಕೃತಿಕ ಪರಿಸರ, ಸಂಸ್ಕಾರದ ಮೇಲೆ ಅವರವರ ವರ್ತನೆ, ವ್ಯಕ್ತಿತ್ವ ಅನಾವರಣವಾಗುತ್ತವೆ.

ಒಂದು ಕುಟುಂಬ ತನ್ನ ಮೂರು ವರ್ಷದ ಮಗುವಿಗೆ ಕೊಡುವ ಸಂಸ್ಕಾರ, ಶಿಕ್ಷಣ, ವಿವಿಧ ಸಾಮಾಜೀಕರಣದ ಆಧಾರದ ಮೇಲೆ ಆ ಮಗು ಸಮಾಜದಲ್ಲಿ ಒಳ್ಳೆಯ ಹುದ್ದೆ ಪಡೆದು ಮಾದರಿ ವ್ಯಕ್ತಿಯಾಬಹುದು,ರಾಷ್ಟ್ರದ ಮಹಾನ್ ಚೇತನ, ನಾಯಕರಾಗಬಹುದು. ಅದೇ ಮೂರು ವರ್ಷದ ಮಗುವಿಗೆ ಸರಿಯಾದ ಸಂಸ್ಕಾರ, ಸಾಮಾಜೀಕರಣದ ಪ್ರಕ್ರಿಯೆಗೆ ಒಳಪಡಿಸದಿದ್ದರೆ ಮೋಸಗಾರ, ವಂಚನೆಗಾರ, ದರೊಡೆಕಾರ, ಕೊಲೆಗಾರ,ಭಯೋತ್ಪಾದಕರಾಗಬಹುದು.

ಇತ್ತೀಚಿನ ಕುಟುಂಬಗಳಲ್ಲಿ ಮಕ್ಕಳಿಗೆ ಸರಿಯಾದ ಸಂಸ್ಕಾರ ಸಿಗದೆ ಇರುವುದರಿಂದ ಮತ್ತು ಕುಟುಂಬದ ಹಿರಿಯ ಸದಸ್ಯರು ಮಕ್ಕಳ ಮೇಲೆ ನಿಯಂತ್ರಣ ಇಲ್ಲದೆ ಇರುವುದರಿಂದ ಮಕ್ಕಳು ಸಮಾಜದಲ್ಲಿ ಹಲವಾರು ಅಹಿತಕರ, ಮೋಸ, ವಂಚನೆ, ಅನೈತಿಕ, ಸಾಮಾಜಿಕ ಘಾತುಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅನೇಕ ಪ್ರಕರಣಗಳು ಮಾಧ್ಯಮಗಳು ಪ್ರತಿದಿನ ವರದಿ ಮಾಡುತ್ತಿವೆ.

ಅನೇಕ ತಂದೆ-ತಾಯಿಗಳಿಗೆ ತಮ್ಮ ಮಗ, ಮಗಳು ಯಾವ ಕೋರ್ಸನಲ್ಲಿ, ಯಾವ ತರಗತಿಯಲ್ಕಿ ಓದುತ್ತಿದ್ದಾರೆ ಎಂಬುದೇ ಗೊತ್ತಿಲ್ಲ. ಪದವಿ, ಇಂಜಿನಿಯರ್, ವೈದ್ಯಕೀಯ ಕೋರ್ಸಗಳಲ್ಲಿ ಓದುತ್ತಿರುವ ಮಕ್ಕಳು ಯಾವ ರೀತಿ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ, ಮೊಬೈಲ್ ಅಂತರ್ಜಾಲದಲ್ಲಿ ಎನನ್ನು ಹುಡುಕುತ್ತಿದ್ದಾರೆ, ಏನನ್ನೂ ಮಾಡುತ್ತಿದ್ದಾರೆ, ಮಕ್ಕಳ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದು ಬಹಳಷ್ಟು ತಂದೆ-ತಾಯಿ, ಪಾಲಕರ ಪೋಷಕರ ತಿಳಿದುಕೊಂಡಿರುವುದಿಲ್ಲ, ಅರ್ಥ ಮಾಡಿಕೊಂಡಿರುವುದಿಲ್ಲ.

ಇಂಥವರನ್ನು ಒಳ್ಳೆಯ ತಂದೆ-ತಾಯಿಗಳೆಂದು ಹೇಗೆ ಕರೆಯಲು ಸಾದ್ಯ? ಮಕ್ಕಳಿಗೆ ಜನ್ಮ ನೀಡುವುದು ಮುಖ್ಯವಲ್ಲ ಅವರನ್ನು ಒಳ್ಳೆಯ ರೀತಿಯಲ್ಲಿ ಸಾಮಾಜೀಕರಣ ನೀಡಿ ಬೆಳೆಸುವುದು ತುಂಬಾ ಮುಖ್ಯವಾಗಿರುತ್ತದೆ.

ತಂದೆ-ತಾಯಿ, ಇತರ ಹಿರಿಯ ಸದಸ್ಯರು ಮುಂದೆ ಬಹಳಷ್ಟು ಒಳ್ಳೆಯವರಾಗಿ ವರ್ತಿಸುವ ಮಕ್ಕಳು ಕಾಲೇಜಿಗೆ ಹೋಗುತ್ತೇನೆ ಎಂದು ಹೇಳಿ ಹೊರಗಡೆ ಹುಡುಗ, ಹುಡುಗಿಯೊಂದಿಗೆ ಸುತ್ತಾಡುತ್ತಾ, ಗೆಳೆಯರೊಂದಿಗೆ ದಾಬಾ, ರೆಸ್ಟೋರೆಂಟ್ ಗಳಲ್ಲಿ ಕುಡಿದು ಮೋಜು ಮಾಡುತ್ತ ಕಾಲಹರಣ ಮಾಡುತ್ತಾ, ಹುಡುಗಿ ಹುಡುಗನ ಜೊತೆಗೆ ಓಡಿ ಹೋಗಿ ಮದುವೆಯಾಗುವ, ಈ ವಿಷಯದಲ್ಲಿ ಕೊಲೆಗಳಾಗಿರುವ, ತಂದೆ, ತಾಯಿಗಳಿಗೆ ಮೋಸ, ವಂಚನೆ ಮಾಡಿ ಹಲವಾರು ದುಷ್ಟ ಚಟಗಳಿಗೆ ಬಲಿಯಾಗಿ ದುಷ್ಟಕಾರ್ಯಗಳಲ್ಲಿ, ಪಾಲ್ಗೊಂಡಿರುವ ಸಾಕಷ್ಟು ನಿರ್ದೇಶನಗಳು ದೇಶದಾದ್ಯಂತ ಕಂಡುಬರುತ್ತಿವೆ‌.

ಇದಕ್ಕೆ ತಂದೆ ತಾಯಿಗಳ ಅತೀಯಾದ ಮುದ್ದು, ಕುರುಡು ನಂಬಿಕೆ ಪ್ರೀತಿ, ನಿಯಂತ್ರಣ ಇಲ್ಲದೆ ಇರುವುದು,ಮುಂತಾದವು ಕಾರಣವಾಗಿವೆ. ಇದರಿಂದ ಮಕ್ಕಳ ಕಪಟತನ, ನಾಟಕೀಯತೆ, ಮುಖವಾಡಗಳು ಮೋಸ ತಂದೆ ತಾಯಿಗಳಿಗೆ ಗೊತ್ತಾಗುವುದೇ ಇಲ್ಲ. ನನಗೆ ಕೌಟುಂಬಿಕ ಸಂಬಂಧಗಳಿಗಿಂತ ಸಾಮಾಜಿಕ ಭಾವನಾತ್ಮಕ ಸಂಬಂಧಗಳು ತುಂಬಾ ಮುಖ್ಯವಾಗುತ್ತಾರೆ.

ನನ್ನ ನೋವುಗಳಿಗೆ, ಸಮಸ್ಯೆಗಳಿಗೆ, ತಲ್ಲಣಗಳಿಗೆ ಮುಕ್ತ ಮನಸ್ಸಿನಿಂದ ಸ್ಪಂದಿಸಿ, ಸಹಕರಿಸಿ, ಪ್ರೊತ್ಸಾಹ ನೀಡಿ, ತನು, ಮನ, ಧನದಿಂದ ಸಹಾಯ, ಸಹಕಾರ ನೀಡಿ ನನ್ನ ಓದಿಗೆ, ಕೆಲಸಕ್ಕೆ ಇವತ್ತಿಗೂ ನೈತಿಕ ಶಕ್ತಿಯಾಗಿ ನಿಂತಿದ್ದಾರೆ. ನನ್ನ ಊಟ, ಬಟ್ಟೆ, ಇತರ ಸೌಕರ್ಯಗಳ ಬಗ್ಗೆ ಇಂದಿಗೂ ತುಂಬಾ ಕಾಳಜಿ ಮಾಡುತ್ತಾರೆ. ಈ ಭಾವನಾತ್ಮಕ ಸಾಮಾಜಿಕ ಸಂಬಂಧಗಳಲ್ಲಿ ಮುಖವಾಡಗಳಿಲ್ಲ, ಕಪಟತನವಿಲ್ಲ, ಜಾತಿ, ಧರ್ಮ, ಪಂಥ ಮುಂತಾದ ತಾರತಮ್ಯಗಳಿಲ್ಲ.

ಆ ಸಂಬಂಧಗಳಲ್ಲಿ ಮಾನವೀಯ ಸಂವೇದನೆ, ಅನುಕಂಪ, ಜೀವಪರ ಕಾಳಜಿಗಳನ್ನು ಕಂಡಿದ್ದೆನೆ. ಆದರೆ ಕೌಟುಂಬಿಕ ಬಾಂಧವ್ಯಗಳಲ್ಲಿ ಒಳ್ಳೆಯತನದ ಮುಖವಾಡ, ದ್ವೇಷ, ಅಸೂಯೆ, ಮೋಸ ಇವೇ ಹೆಚ್ಚು ಅನುಭವಿಸಿದ್ದೆನೆ.

ಇದರಿಂದ ಒಳ್ಳೆಯತನದ ಕಪಟ ಮುಖವಾಡ ತುಂಬಾ ಅಪಾಯಕಾರಿ ಎಂದು ಭಾವಿಸಿದ್ದೆನೆ. ಇವೆಲ್ಲವೂಗಳೊಂದಿಗೆ ನನ್ನ ಮನಸ್ಥಿತಿ ನನ್ನ ಹಿಡಿತದಲ್ಲಿಟ್ಟುಕೊಂಡು, ಸಮತೋಲನದಲ್ಲಿ ಇಟ್ಟುಕೊಂಡು ಗಟ್ಟಿಯಾಗಿ ಅನೇಕ ಸಮಸ್ಯೆಗಳನ್ನು, ತಲ್ಲಣಗಳನ್ನು ಎದುರಿಸಿದ್ದೆನೆ.

ಮನುಷ್ಯ ತಾನು ಮಾಡಿದ ತಪ್ಪಗಳು, ಮೋಸ, ವಂಚನೆಗಳನ್ನು ದೇವರು ಕ್ಷಮಿಸಬಹುದು. ಆದರೆ ತನ್ನ ನರಮಂಡಲ,ಆತ್ಮ ಕ್ಷಮಿಸಲಾರದು ಎಂದು ತಿಳಿದಿದ್ದೆನೆ. ನಗರ ಪ್ರದೇಶಗಳಲ್ಲಿ ವಿವಾಹ ವಿಚ್ಚೆದನೆಗಳು ಹೆಚ್ಚಳವಾಗುತ್ತಿರುವುಕ್ಕೆ ಪತಿ-ಪತ್ನಿಯರ ನಡುವೆ ಕೃತಕತೆ, ಔಪಚಾರಿಕ, ನಾಟಕೀಯ ವರ್ತನೆಗಳು, ಪರಸ್ಪರ ಹೊಂದಾಣಿಕೆ, ತಾಳ್ಮೆ, ಅರ್ಥೈಸಿಕೊಳ್ಳವಿಕೆ ಇಲ್ಲದೆ ಇರುವುದು, ಜೀವನ ಪ್ರೀತಿಗಿಂತ ಆಕರ್ಷಣೆ, ಹಣ, ಅಂತಸ್ತು, ಪ್ರತಿಷ್ಡೆ, ಸ್ವಾರ್ಥ, ಅಹಂಕಾರ ಇತ್ಯಾದಿ ಅಂಶಗಳು ಪ್ರಮುಖ ಕಾರಣವಾಗಿವೆ.

ಬಂಧುತ್ವದ ಸಂಸ್ಕಾರದ ಕೊರತೆಯಿಂದ ಸಂಬಂಧಗಳು ಮೌಲ್ಯವನ್ನು, ಅರ್ಥವನ್ನು, ಮಹತ್ವವನ್ನು ಕಳೆದುಕೊಳ್ಳುತ್ತಿವೆ ಇದರಿಂದ ಕೌಟುಂಬಿಕ, ಸಾಮಾಜಿಕ ವಿಘಟನೆಗೆ ಕಾರಣವಾಗುತ್ತಿದೆ ಎಂದು ಸಮಾಜಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆದ್ದರಿಂದ ಅಪಾಯಕಾರಿಯಾದ ಒಳ್ಳೆಯತನದ ಮುಖವಾಡದಿಂದ ವರ್ತಿಸದೆ, ಒಳಗೊಂದು, ಹೊರಗೊಂದು ಮನಸ್ಥಿತಿ ಇರದೆ ನಮ್ಮ ನಡುವಳಿಕೆಗಳು, ಚಟುವಟಿಕೆಗಳು ಮುಕ್ತವಾಗಿದ್ದರೆ, ನಿಷ್ಕಲ್ಮಶ ಮನಸ್ಸಿನಿಂದ ಇದ್ದರೆ ನಮ್ಮ ಬದುಕು, ಸಂಬಂಧಗಳು, ಸಮಾಜ ಆರೋಗ್ಯಕರವಾಗಿಡಲು ಸಾದ್ಯವಾಗುತ್ತದೆ.

ರಾಘವೇಂದ್ರ ಹಾರಣಗೇರಾ ಸಮಾಜಶಾಸ್ತ್ರ ಉಪನ್ಯಾಸಕರು ಶಹಾಪುರ.

Related Articles

Leave a Reply

Your email address will not be published. Required fields are marked *

Back to top button