ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಬಿಜೆಪಿಯಿಂದ ಇಡಿ ಇಲಾಖೆ ದುರ್ಬಳಕೆ ಕಾಂಗ್ರೆಸ್ ಆರೋಪ
ಯಾದಗಿರಿ, ಶಹಾಪುರಃ ಬಿಜೆಪಿ ಸರ್ಕಾರ ವೈಫಲ್ಯ ಮತ್ತು ಕಾಂಗ್ರೆಸ್ ನಾಯಕರ ಬಂಧನ ಖಂಡಿಸಿ ನಗರದ ತಹಶೀಲ್ ಕಚೇರಿ ಎದುರು ತಾಲೂಕು ಬ್ಲಾಕ್ ಕಾಂಗ್ರೆಸ್ ತಿಯಿಂದ ಧರಣಿ ನಡೆಸಿ ತಹಶೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಶರಣಪ್ಪ ಸಲಾದಪುರ, ಕೇಂದ್ರದ ಬಿಜೆಪಿ ಸರ್ಕಾರ ಕಾಂಗ್ರೆಸ್ ನಾಯಕರ ವಿರುದ್ಧ ಐಟಿ ಮತ್ತು ಇಡಿ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ನ್ನು ಮುಗಿಸುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.
ನೆರೆ ಹಾವಳಿಯಿಂದ ರಾಜ್ಯದಲ್ಲಿ 50 ಸಾವಿರ ಕೋಟಿ ಆಸ್ತಿ ಪಾಸ್ತಿ ನಷ್ಟ ಉಂಟಾಗಿದ್ದರೂ ರಾಜ್ಯ ಬಿಜೆಪಿ ಸರ್ಕಾರ ನಯಾ ಪೈಸಾ ನೀಡಿಲ್ಲ. ಕೇಂದ್ರ ಸರ್ಕಾರದಿಂದ ಪರಿಹಾರ ಕೇಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಆರಬೋಳ ಮಾತನಾಡಿ, ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಾಂಗ್ರೆಸ್ ಮುಖಂಡರನ್ನೆ ಟಾರ್ಗೇಟ್ ಮಾಡುತ್ತಿದ್ದು, ಇಡಿ ಹಾಗೂ ಐಟಿ ದಾಳಿಯಲ್ಲಿ ಕಾಂಗ್ರೆಸ್ ಮುಖಂಡರನ್ನೆ ಸಿಲುಕಿಸುವ ಮೂಲಕ ಕಾಂಗ್ರೆಸ್ ಮುಗಿಸುವ ಹುನ್ನಾರ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ನೇತೃತ್ವದ ಸರ್ಕಾರ ಐಟಿ ಮತ್ತು ಇಡಿ ಇಲಾಖೆಯನ್ನು ದುರ್ಬಳಿಕೆ ಮಾಡಿಕೊಂಡು ಕಾಂಗ್ರೆಸ್ ಮುಕ್ತ ರಾಷ್ಟ್ರ ನಿರ್ಮಾಣ ಮಾಡಲು ಹೊರಟಂತಿದೆ. ಆದರೆ ದೇಶದ ಜನರಿಗೆಲ್ಲ ಗೊತ್ತಿದೆ. ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕೆಂಭಾವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷÀ ಸಿದ್ದಣಗೌಡ ಪಾಟೀಲ್, ಮುಖಂಡರಾದ ಸಿದ್ದಲಿಂಗಣ್ಣ ಆನೇಗುಂದಿ, ಸುರೇಂದ್ರ ಪಾಟೀಲ್ ಮಡ್ನಾಳ, ಶರಣಪ್ಪ ಸಲಾದಪುರ, ಬಸವರಾಜ ಹಿರೇಮಠ, ಬಸವರಾಜ ಹೇರುಂಡಿ, ಗುಂಡಪ್ಪ ತುಂಬಗಿ, ಶಿವಮಾಂತ ಚಂದಾಪುರ, ಬಸವರಾಜಪ್ಪಗೌಡ ತಂಗಡಗಿ, ಚಂದ್ರಶೇಖರ ಲಿಂಗದಳ್ಳಿ, ಮಾಣಿಕರಡ್ಡಿ ಶಿರಡ್ಡಿ, ಬಸನಗೌಡ ಸುಬೇದಾರ, ಶಿವಶರಣಪ್ಪ ಕಲಬುರ್ಗಿ, ಹಣಮಂತ್ರಾಯ ದಳಪತಿ, ಸಯ್ಯದ್ ಮುಸ್ತಾಫ ಧರ್ಬಾನ್, ಸಲಿಂ ಸಂಗ್ರಾಮ, ಸಣ್ಣ ನಿಂಗಣ್ಣ ನಾಯ್ಕೋಡಿ, ವೆಂಕಟರಡ್ಡಿ ಹಳಿಸಗರ, ನಾಗಪ್ಪ ತಹಿಸೀಲ್ದಾರ, ಮಹಾದೇವಪ್ಪ ಸಾಲಿಮನಿ, ನಿಂಗಣಗೌಡ ಸಿಂಗನಳ್ಳಿ, ನೀಲಕಂಠ ಬಡಿಗೇರ, ರುದ್ರಪ್ಪ ಚಟ್ರಿಕಿ, ಪ್ರೇಮನಾಥ ಶೆಟ್ಟಿ, ರವಿಕುಮಾರ ಎದುರಮನಿ, ಶಿವುಕುಮಾರ ತಳವಾರ, ಮಾನಸಿಂಗ್ ಚವ್ಹಾಣ, ರಾಮಣ್ಣ ಸಾದ್ಯಾಪುರ, ರುದ್ರಪ್ಪ ಹುಲಮನಿ ಸೇರಿದಂತೆ ಇತರರು ಭಾಗವಹಿಸಿದ್ದರು.